ಸ್ನೇಹಿತರೊಂದಿಗೆ ಶಿಕಾರಿಗೆ ತೆರಳಿದ್ದ ವೇಳೆ ಅಕಸ್ಮಾತ್ತಾಗಿ ಗುಂಡು ತಗುಲಿ ಯುವಕ ಸಾವು

ಸ್ನೇಹಿತರೊಂದಿಗೆ ಶಿಕಾರಿಗೆ ತೆರಳಿದ್ದ ವೇಳೆ ಅಕಸ್ಮಾತ್ತಾಗಿ ಗುಂಡು ತಗುಲಿ ಯುವಕ ಸಾವು

ಸ್ನೇಹಿತರೊಂದಿಗೆ ಶಿಕಾರಿಗೆ ತೆರಳಿದ್ದ ವೇಳೆ ಅಕಸ್ಮಾತ್ತಾಗಿ ಗುಂಡು ತಗುಲಿ ಯುವಕ ಸಾವು
ಶಿಕಾರಿಗೆ ಹೋಗಿದ್ದ ವೇಳೆ ಯುವಕನೊಬ್ಬನಿಗೆ ಗುಂಡು ತಗುಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕಟ್ಟೆಹಕ್ಲು ಎಂಬಲ್ಲಿ ನಡೆದಿದೆ.
ಮೃತನನ್ನು ಗೌತಮ್ (25) ಎಂದು ಗುರುತಿಸಲಾಗಿದೆ.
ಬಸವಾನಿ ಸಮೀಪದ ಕೊಳಾವರ ಗ್ರಾಮದ ಯುವಕ ಸ್ನೇಹಿತರ ಜೊತೆ ಶಿಕಾರಿಗೆ ಹೋಗಿದ್ದನು. ಈ ವೇಳೆ ಮಿಸ್ ಫೈರ್ ಆಗಿ ಗುಂಡು ಗೌತಮ್ ಗೆ ತಗುಲಿದ ಪರಿಣಾಮ ಆತ ಮೃತಪಟ್ಟಿದ್ದಾನೆ.
ಈ ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.