Headlines

ಶ್ರೀ ರಾಮನವಮಿ ಸಂಭ್ರಮ: ವಿನಾಯಕ ವೃತ್ತದಲ್ಲಿ ಕೋಸಂಬರಿ–ಪಾನಕ ವಿತರಣೆ

Sri Ram Navami celebrated with devotion at Vinayaka Circle in Ripponpete, where Hindu Jagarana Vedike distributed kosambari and panaka to devotees

ರಿಪ್ಪನ್ ಪೇಟೆ: ಪಟ್ಟಣದ ವಿನಾಯಕ ವೃತ್ತದಲ್ಲಿ ಶ್ರೀ ರಾಮನವಮಿ ಹಬ್ಬವನ್ನು ಭಕ್ತಿಭಾವದಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಹಿಂದೂ ಜಾಗರಣ ವೇದಿಕೆ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಮಭಕ್ತರು ಉತ್ಸಾಹದಿಂದ ಪಾಲ್ಗೊಂಡರು.

ಹಬ್ಬದ ಅಂಗವಾಗಿ ಭಕ್ತರಿಗೆ ಕೋಸಂಬರಿ ಹಾಗೂ ಪಾನಕವನ್ನು ಪ್ರಸಾದವಾಗಿ ವಿತರಿಸಲಾಯಿತು. ಬಿಸಿಲಿನ ತಾಪಮಾನದಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು,ಎಲ್ಲರಿಗೂ ಪ್ರಸಾದ ವಿತರಣೆ ನಡೆಯಿತು. “ಜೈ ಶ್ರೀರಾಮ್” ಘೋಷಣೆಗಳು ವಾತಾವರಣವನ್ನು ಆವರಿಸಿ, ಭಕ್ತಿಭಾವದ ಸಂಭ್ರಮ ಹೆಚ್ಚಿಸಿತು.

ಕಾರ್ಯಕ್ರಮದಲ್ಲಿ ಸಂಘಟಕರಾದ ಸಂಜಯ್, ದೇವರಾಜ್ ಕುಷನ್, ಮಂಜುನಾಥ್ ಆಚಾರ್, ಶ್ರೀನಿವಾಸ್ ಆಚಾರ್, ಓಂ ಮಂಜುನಾಥ್, ಸಂತೋಷ್, ಪದ್ಮಾ ಸುರೇಶ್, ಸೀತಮ್ಮ, ಕಗ್ಗಲಿ ಲಿಂಗಪ್ಪ, ಸುಧೀಂದ್ರ ಪೂಜಾರಿ, ಆಟೋ ರಾಘು, ತಾನಾ ರಾಮ್ ಪಟೇಲ್, ದೇವರಾಜ್ ಎಂ. ರಾವ್, ಸತೀಶ್ ಹೆಗಡೆ, ಅರುಣ್ ಮುಗುಡ್ತಿ, ಕಾರ್ತಿಕ್ ಹಾಗೂ ಜನಾರ್ಧನ್ ಆಚಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಿಸ್ತಿನೊಂದಿಗೆ ನಡೆದ ಕಾರ್ಯಕ್ರಮವು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಯಿತು. ಸ್ಥಳೀಯರ ಸಹಕಾರದಿಂದ ಹಬ್ಬವನ್ನು ಯಶಸ್ವಿಯಾಗಿ ನೆರವೇರಿಸಲಾಗಿದ್ದು, ಸಮಾಜದಲ್ಲಿ ಐಕ್ಯತೆ ಮತ್ತು ಧಾರ್ಮಿಕ ಭಾವನೆಗಳನ್ನು ಮತ್ತಷ್ಟು ಬಲಪಡಿಸುವಂತಾಯಿತು.

About The Author