Headlines

ಹೊಸನಗರ ತಾಲೂಕು ಗಂಗಾಮತಸ್ಥರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಹೊಸನಗರ ತಾಲೂಕು ಗಂಗಾಮತಸ್ಥರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

New office bearers of the Hosanagara Taluk Gangamatha Community Association were elected at a meeting held in Ripponpet. Chidambara H.B. has been selected as the new president.

ರಿಪ್ಪನ್ ಪೇಟೆ: ಹೊಸನಗರ ತಾಲೂಕು ಗಂಗಾಮತಸ್ಥರ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ರಿಪ್ಪನ್ ಪೇಟೆಯ ಗಂಗಾಮತಸ್ಥರ ಸಂಘದ ಸಭಾಭವನದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೆರವೇರಿತು.

ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಚಿದಂಬರ ಹೆಚ್.ಬಿ. ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಣಪತಿ ಬಿ.ಕೆ. ಹಾಗೂ ಬೆನಕಪ್ಪ ಎಂ. ಆಯ್ಕೆಯಾದರೆ, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಕುಮಾರ್ ಜಿ., ಸಹ ಕಾರ್ಯದರ್ಶಿಯಾಗಿ ಪ್ರಕಾಶ್ ಕೆ.ಡಿ. ಮತ್ತು ಖಜಾಂಚಿಯಾಗಿ ರಾಘವೇಂದ್ರ ಜಿ.ಬಿ. ಆಯ್ಕೆಯಾಗಿದ್ದಾರೆ.

ಇದೇ ವೇಳೆ ನಿರ್ದೇಶಕರಾಗಿ ರುಕ್ತೇಶ್ ಚಂದಳ್ಳಿ, ನಾಗೇಂದ್ರ ಎಲ್., ದೇವೇಂದ್ರಪ್ಪ ಕೆ., ಶಾಂತಪ್ಪ ಜಿ., ಉಮೇಶ್ ಬಿ., ದಿನೇಶ್ ಅರಳಿಕೊಪ್ಪ, ಸುನಿಲ್ ಟಿ., ಶಿವಾನಂದ ಎಸ್.ಎಂ., ಮಂಜುನಾಥ ಎಸ್. ಬ್ಯಾಣದ ಹಾಗೂ ಶಿವಾನಂದ ಎಸ್. ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಮಾಜದ ಬಂಧುಗಳು ಶುಭಾಶಯ ಕೋರಿದ್ದು, ಗಂಗಾಮತ ಸಮಾಜದ ಅಭಿವೃದ್ಧಿ ಹಾಗೂ ಏಳಿಗೆಗಾಗಿ ಶ್ರಮಿಸುವಂತೆ ಹಾರೈಸಿದರು.

ಚುನಾವಣಾ ಪ್ರಕ್ರಿಯೆಯನ್ನು ಹಾಲಿ ಅಧ್ಯಕ್ಷ ಉಮೇಶ್ ಕೆ.ವೈ. ಅವರ ಉಪಸ್ಥಿತಿಯಲ್ಲಿ ಲೋಹಿತ್ ಕುಮಾರ್ ಹೆಚ್. ಹಾಗೂ ನಾಗೇಶ್ ಚಂದಳ್ಳಿ ಯಶಸ್ವಿಯಾಗಿ ನಿರ್ವಹಿಸಿದರು.

About The Author