ತಳಲೆ ಸಹಕಾರ ಸಂಘದ ಚುನಾವಣೆ – ದಿನೇಶ್ ಗೌಡ ತಂಡಕ್ಕೆ ಭರ್ಜರಿ ಗೆಲುವು

ತಳಲೆ ಸಹಕಾರ ಸಂಘದ ಚುನಾವಣೆ – ದಿನೇಶ್ ಗೌಡ ತಂಡಕ್ಕೆ ಭರ್ಜರಿ ಗೆಲುವು

ರಿಪ್ಪನ್‌ಪೇಟೆ : ತಳಲೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದಚುನಾವಣೆಯಲ್ಲಿ ತಳಲೆ ಹೆಚ್.ಎಸ್.ದಿನೇಶ ತಂಡ ಭರ್ಜರಿ ಗೆಲುವಿನೊಂದಿಗೆ ಅಡಳಿತದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಳಲೆ ಗ್ರಾಮದಲ್ಲಿ ಭಾನುವಾರದಂದು ನಡೆದ ಸಹಕಾರ ಸಂಘದ ಚುನಾವಣೆಯಲ್ಲಿ ಸಾಮಾನ್ಯ ಸಾಲಗಾರ ಕ್ಷೇತ್ರದಿಂದ ಹೆಚ್ ಎಸ್ ದಿನೇಶ್ ಗೌಡ್ರು ತಳಲೆ,ಹೆಚ್ ಎಸ್ ಗಂಗಾಧರ್ , ಹಾರಂಬಳ್ಳಿ ,ಬಸಪ್ಪ ಕೆ ಜಿ   ದೋ ಬೈಲ್  , ಇ. ಡಿ ಮಂಜುನಾಥ್ ಕಲ್ಲೂರ್ ,ಹೆಚ್ ಎನ್ ಅಭಿಷೇಕ್       ಹೆದ್ದಾರಿ ಪುರ , ಬಿಸಿಎಂಎಯಿಂದ ಕೆ ಆರ್ ಮಂಜುನಾಥ್ ಕಳಸೆ      ಬಿ ಸಿ ಎಂ ಬಿ ಯಿಂದ ಕೆ ಎಸ್ ಲೋಕಪ್ ಗೌಡ ಕಲ್ಲೂರ್         .  ಸಾಲಗಾರರಲ್ಲದ ಕ್ಷೇತ್ರದಿಂದ ದೇವರಾಜ್ ಮಳವಳ್ಳಿ ಎಸ್ ಸಿ ಕ್ಷೇತ್ರದಿಂದ  ಡಾಕಪ್ಪ ಕಲ್ಲೂರ್ ಎಸ್ ಟಿ ಕ್ಷೇತ್ರದಿಂದ  ಗಣೇಶ್ ಬೆಳ್ಳೂರ್     ಮಹಿಳಾ ಮೀಸಲು ಕ್ಷೇತ್ರ ದಿಂದ   ಗೌರಮ್ಮ ತಳಲೆ , ಶೇಷಮ್ಮ ತಳಲೆ ಇವರುಗಳು   ಅತಿ ಹೆಚ್ಚು ಮತಗಳಿಸುವ ಮೂಲಕ ಭರ್ಜರಿ ಜಯಗಳಿಸಿದ್ದಾರೆ.

ಆಬಿನಂದನೆ;- ಕಳೆದ ಮೂರು ಭಾರಿಯಲ್ಲಿ ತಳಲೆ ಹೆಚ್.ಎಸ್.ದಿನೇಶಗೌಡರು ತಳಲೆ ಸಹಕಾರ ಸಂಘದಅಧ್ಯಕ್ಷರಾಗಿ ಸಂಘವನ್ನು ಲಾಭದತ್ತತರುವುದರೊಂದಿಗೆರೈತರ ಬ್ಯಾಂಕ್ ಎಂಬ ನಾಮದೇಯದ ಮೂಲಕ ತಮ್ಮ ಪ್ರಾಮಾಣಿಕ ಸೇವೆಯನ್ನು  ಸಲ್ಲಿಸುವುದರೊಂದಿಗೆ  ಮತದಾರರ ಮನಸ್ಸುಗೆಲುವುದರಲ್ಲಿ ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಪರಮೇಶ್ ಹೇಳಿ ಆಭಿನಂದಿಸಿದರು.

ಸಹಕಾರ ಭಾರತಿಯವರುತಮ್ಮ ಅಭ್ಯರ್ಥಿಗಳನ್ನು  ನಿಲ್ಲಿಸುವ ಮೂಲಕ ಭಾರಿ ಸ್ಪರ್ದೇಯನ್ನು  ನೀಡಲು ಮುಂದಾಗಿ ಹಣ ಜಾತಿರಾಜಕಾರಣವನ್ನು ಮುಂದೆ ಮಾಡಿ ಎಷ್ಟೇ ಪ್ರಯತ್ನಿಸಿದರೂ ಮತದಾರರು ಮಾತ್ರ ಸಹಕಾರ ಸಂಘದಲ್ಲಿಜಾತಿ ಹಣಯಾವುದನ್ನು ಪರಿಗಣಿಸದೇ ಪ್ರಾಮಾಣಿಕತೆಗೆ ಹೆಚ್ಚು ಒತ್ತು ನೀಡುವ ಮೂಲಕ ಸಂಘದ ಸರ್ವೋತ್ತಮ ಪ್ರಗತಿಗೆ  ದಿನೇಶಗೌಡರ ಬೆಂಬಲಿತ ನಿರ್ದೇಶಕರತಂಡವನ್ನು  ಭರ್ಜರಿ ಜಯಗಳಿಸುವಂತೆ ಮಾಡಿದ್ದಾರೆಂದರು.

ಈ ಸಂದರ್ಭದಲ್ಲಿಕಲ್ಲೂರುಈರಪ್ಪ ಮತ್ತು ಸಂಘದ ನೂತನ ಅಡಳಿತ ಮಂಡಳಿ ನಿರ್ದೇಶಕರು. ಮಳವಳ್ಳಿ ಮಂಜುನಾಥ್ ಇನ್ನಿತರರು ಹಾಜರಿದ್ದರು.


Leave a Reply

Your email address will not be published. Required fields are marked *