Headlines

Shivamogga | ಮಲ್ಲೇಶ್ ಹತ್ಯೆ ಪ್ರಕರಣ – ನಾಲ್ವರ ಬಂಧನ ; ಪ್ರಕರಣದ ಬಗ್ಗೆ ಎಸ್ ಪಿ ಹೇಳಿದ್ದೇನು..?

ಶಿವಮೊಗ್ಗ ಮಲ್ಲೇಶ್ ಹತ್ಯೆ ಪ್ರಕರಣ – ನಾಲ್ವರ ಬಂಧನ ; ಪ್ರಕರಣದ ಬಗ್ಗೆ ಎಸ್ ಪಿ ಹೇಳಿದ್ದೇನು..?
ಶಿವಮೊಗ್ಗ (Shivamogga) ನಗರದ ಗುಡ್ಡೆ ಕಲ್​ ದೇವಸ್ಥಾನದ ಸಮೀಪ, ಚಿಕ್ಕಲ್​ನಲ್ಲಿ ನಡೆದ ಮಲ್ಲೇಶ್ ಅಲಿಯಾಸ್ ಮಲ್ಲಿ ಅಲಿಯಾಸ್ ಮಲ್ಲನ ಕೊಲೆ(murder) ಪ್ರಕರಣ ಸಂಬಂಧ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್  ಪ್ರತಿಕ್ರಿಯಿಸಿದ್ದಾರೆ. 

ನಿನ್ನೆ ಚಿಕ್ಕಲ್​ನಲ್ಲಿ ನಡೆದ ಘಟನೆ ಸಂಬಂಧ ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಏಳು ಜನರ ದುಷ್ಕರ್ಮಿಗಳ ತಂಡ ಘಟನೆಯಲ್ಲಿ ಪಾಲ್ಗೊಂಡಿದ್ದು, ಈ ಸಂಬಂಧ ಮೂವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ತಿಳಿಸಿದ್ದಾರೆ. 

ಮಾಧ್ಯಮಗಳಿಗೆ ಪ್ರಕರಣ ಕುರಿತಾಗಿ ಮಾಹಿತಿ ನೀಡಿರುವ ಎಸ್ ಪಿ ಮಿಥುನ್ ಕುಮಾರ್ ಪ್ರಕರಣದಲ್ಲಿ  ಆರೋಪಿಗಳು ಹಾಗೂ ಕೊಲೆಯಾದ ವ್ಯಕ್ತಿಯು ಸಂಬಂಧಿಕರಾಗಿದ್ದಾರೆ. ಹುಡುಗಿಯೊಬ್ಬಳನ್ನು ಕೊಲೆಯಾದ ಮಲ್ಲ ಪ್ರೀತಿಸ್ತಿದ್ದ. ಆದರೆ ವಯಸ್ಸಿನ ಕಾರಣಕ್ಕೆ ಆತನಿಗೆ ಹುಡುಗಿಯನ್ನ ನೀಡಲು ವಿರೋಧವಿತ್ತು. 

ಆದಾಗ್ಯು ಮಲ್ಲ ಹುಡುಗಿಯನ್ನ ತನ್ನನ್ನು ಪ್ರೀತಿಸುವಂತೆ ಪೀಡಿಸ್ತಿದ್ದ. ಇದೆ ಕಾರಣಕ್ಕೆ ಆ ಹುಡುಗಿ ಆತ್ಮಹತ್ಯೆಮಾಡಿಕೊಂಡಿದ್ದಳು. ಸಹೋದರಿಯ ಸಾವಿನ ಹಿನ್ನೆಲೆಯಲ್ಲಿ ಸಹೋದರರು ಮಲ್ಲನನ್ನ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *