ರಿಪ್ಪನ್ ಪೇಟೆ :ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕರಲ್ಲಿ ಅಭೂತಪೂರ್ವ ಗೆಲುವಿನ ಹಿನ್ನಲೆ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ :

ರಿಪ್ಪನ್ ಪೇಟೆ : ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ‌ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರ ದ ವತಿಯಿಂದ  ವಿಜಯೋತ್ಸವ ಆಚರಿಸಲಾಯಿತು.

ಪಟ್ಟಣದ ವಿನಾಯಕ ವೃತ್ತದಲ್ಲಿ ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿ,ವಿಜಯೋತ್ಸವ ಆಚರಿಸಿದರು.ಈ ಸಂಧರ್ಭದಲ್ಲಿ ಪ್ರಧಾನಿ ಮೋದಿ,ಮುಖ್ಯಮಂತ್ರಿ ಬೊಮ್ಮಾಯಿ,ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾ ನಾಥ್ ,ಯಡಿಯೂರಪ್ಪ ಹಾಗೂ ಶಾಸಕ ಹರತಾಳು ಹಾಲಪ್ಪ ಪರವಾಗಿ ಕಾರ್ಯಕರ್ತರು ಘೋಷಣೆ ಕೂಗಿ ಸಂಭ್ರಮಿಸಿದರು.


ಈ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ಜೊತೆ ಮಾತನಾಡಿದ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಪ್ರಪಂಚದಲ್ಲಿಯೇ ಬಿಜೆಪಿ ಪಕ್ಷ ಮಾದರಿ ಪಕ್ಷವಾಗಿದೆ.ದೇಶದಲ್ಲಿಯೇ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಪ್ರಚಂಡ ಗೆಲುವು ಸಾಧಿಸುವುದರೊಂದಿಗೆ ಕಾರ್ಯಕರ್ತರಲ್ಲಿ ಹುಮ್ಮಸು ತುಂಬಿದೆ. ಬಿಜೆಪಿ ಆಡಳಿತಕ್ಕೆ ಮೆಚ್ಚುಗೆ ದೊರೆತಿರುವ ಜನಾದೇಶವಿದು. ಇದು ಕೇವಲ ಕಾರ್ಯಕರ್ತರ ಗೆಲುವಲ್ಲ , ರಾಷ್ಟ್ರೀಯತೆ ವಿಚಾರ, ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ಪ್ರಯತ್ನಕ್ಕೆ ಗೆಲುವು ಸಿಕ್ಕಿದೆ. ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಗಳಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ’ ಎಂದು ಹೇಳಿದರು‌. 

ಈ ಸಂಧರ್ಭದಲ್ಲಿ ಮುಖಂಡರಾದ ಅರ್.ಟಿ ಗೋಪಾಲ್, ಸುರೇಶ್ ಸಿಂಗ್, ಆನಂದ್ ಮೆಣಸೆ, ಮಲ್ಲಿಕಾರ್ಜುನ ಜಿ.ಡಿ, ಪಿ.ರಮೇಶ್, ಸುದಿಂದ್ರ ಪೂಜಾರಿ, ಎನ್.ಸತೀಶ್, ಕೀರ್ತಿ ಗೌಡ, ಹೂವಪ್ಪ, ರವಿ ಆಚಾರ್, ಕೇತಾರ್ಜಿ ರಾವ್, ಮಂಜುನಾಥ್ ಕೆರೆಹಳ್ಳಿ, ನಾಗರಾಜ್ ಕೆದ್ದಲಗುಡ್ಡೆ, ನವೀನ್ ಆರ್.ಎಂ, ರಚನ್ ಕುಮಾರ್, ದಿವಾಕರ್ ಬೆಳ್ಳೂರು,ರಾಘವೇಂದ್ರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ 👇👇👇


Leave a Reply

Your email address will not be published. Required fields are marked *