January 11, 2026

ಆಗುಂಬೆ ಘಾಟಿಯಲ್ಲಿ ಕಾರು ಮತ್ತು ಬಸ್ ಅಪಘಾತ:

ಆಗುಂಬೆ:ಇಂದು ಮಧ್ಯಾಹ್ನ ಆಗುಂಬೆ ಘಾಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಸ್ವಿಫ್ಟ್ ಕಾರು ಬಸ್ಸಿಗೆ ಡಿಕ್ಕಿ ಹೊಡೆದಿದೆ. ಬಸ್ ಚಾಲಕನ ಜಾಗರೂಕತೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ವೃದ್ಧ ಹಾಗೂ ಮಹಿಳೆಯೊಬ್ಬರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ..
ಕಾರಿನಲ್ಲಿ ಮೂವರು ಮಕ್ಕಳು ಕೂಡಾ ಪ್ರಯಾಣಿಸುತ್ತಿದ್ದರು ಆದರೆ ಅದೃಷ್ಟವಶಾತ್ ಬಚಾವಾಗಿದ್ದಾರೆ.
ಆಗುಂಬೆಯ ಕಡೆಯಿಂದ ಉಡುಪಿಯ ಕಡೆಗೆ  ಚಲಿಸುತ್ತಿದ್ದ ಕಾರು ೪ನೆಯ ತಿರುವಿನ ಹತ್ತಿರ ಉಡುಪಿಯಿಂದ ಭದ್ರಾವತಿಗೆ ಹೊಗುತ್ತಿದ್ದ ಅನ್ನಪೂರ್ಣೇಶ್ವರಿ ಬಸ್ಸಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬಸ್ ಹಾಗೂ ಕಾರು ಎರಡೂ ವಾಹನಗಳಿಗೆ ಹಾನಿಯಾಗಿದೆ…. 

ವರದಿ: ಪ್ರಶಾಂತ್ ಮೇಗರವಳ್ಳಿ

About The Author

Leave a Reply

Your email address will not be published. Required fields are marked *