
ಕಾಡು ಪ್ರಾಣಿಗಳನ್ನು ಬೇಟೆಯಾಡುತಿದ್ದ ಆರೋಪಿಯ ಬಂಧನ – ಜಿಂಕೆ ಚರ್ಮ ಸಹಿತ ಬಂದೂಕು ವಶಕ್ಕೆ.!
ನ್ಯಾಮತಿ ತಾಲೂಕಿನ ಸಂರಕ್ಷಿತ ಅರಣ್ಯದಲ್ಲಿ ಅಕ್ರಮವಾಗಿ ಪ್ರವೇಶಿಸಿ ಕಾಡುಪ್ರಾಣಿಗಳನ್ನು ಬೇಟೆಯಾಡಿದ ಆರೋಪದ ಮೇಲೆ ಹೊನ್ನಾಳಿ ವಲಯ ಅರಣ್ಯಾಧಿಕಾರಿಗಳು ಒಬ್ಬನನ್ನು ಬಂಧಿಸಿದ್ದು, ತಪ್ಪಿಸಿಕೊಂಡ ಮೂವರ ಸೆರೆಗೆ ಕಾರ್ಯಾಚರಣೆ ಮುಂದುವರಿಸಿದೆ. ಚಿನ್ನಿಕಟ್ಟೆ ಗ್ರಾಮದ ಮೋಹನ್ ಬಂಧಿತ ಆರೋಪಿ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ 12 ದಿನದ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದ್ದು, ತಪ್ಪಿಸಿಕೊಂಡಿರುವ ಆರೋಪಿಗಳಾದ ಚಿನ್ನಿಕಟ್ಟೆ ಗ್ರಾಮದ ಶಿವಕುಮಾರ, ದಿನೇಶ, ವಡವೇಲು ಬಂಧನಕ್ಕೆ ಬಂಧಿಸಲು ಕಾರ್ಯಾಚರಣೆ ಮುಂದುವರಿದಿದೆ ಎಂದು ಹೊನ್ನಾಳಿ ವಲಯ ಅರಣಾಧಿಕಾರಿ ಕಿಶೋರ್ನಾಯ್ಕ ತಿಳಿಸಿದ್ದಾರೆ. ಹೊನ್ನಾಳಿ ಪ್ರಾದೇಶಿಕ ಅರಣ್ಯ ವಲಯದ…