ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಸವಾರ ಸಾವು:
ಶಿವಮೊಗ್ಗ: ಹೊಳೆಹೊನ್ನೂರು ಸಮೀಪ ಆಗರದಳ್ಳಿ ಸಿದ್ದರ ಕಾಲೊನಿ ಬಳಿ ನಿನ್ನೆ ಸಂಜೆ ಬೈಕ್ ಒಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವು ಕಂಡ ಘಟನೆವರದಿಯಾಗಿದೆ. ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ನಿವಾಸಿ ಪ್ರದೀಪ್ (33) ಮೃತ ದುರ್ದೃವಿ. ತನ್ನ ಸ್ನೇಹಿತನೊಂದಿಗೆ ಶಿವಮೊಗ್ಗಕ್ಕೆ ಬಂದು ಖಾಸಗಿ ಆಸ್ಪತ್ರಯಲ್ಲಿ ಚರ್ಮದ ಚಿಕಿತ್ಸೆ ಪಡೆದು ಚನ್ನಗಿರಿಗೆ ವಾಪಸ್ ಹೋಗುವಾಗ ಬೈಕ್ ಅಪಘಾತವಾಗಿದೆ. ಹಿಂಬಂದಿ ಸವಾರನಿಗೆ ಗಂಭೀರ ಗಾಯಗಾಳಾಗಿದ್ದು, ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.