ಉದ್ಯಮಿ ಮಹೇಶ್ ಮೇಲೆ ದಾಖಲಾದ ಸುಳ್ಳು ಪ್ರಕರಣವನ್ನು ಕೈ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ :
ಸಾಗರದ ಯುವ ಉದ್ಯಮಿ ರಾಯಲ್ ಬಿಲ್ಡರ್ಸ್ ಮಾಲೀಕ ಮಹೇಶ್ ಮೇಲೆ ರಾಜಕೀಯ ದುರುದ್ದೇಶದಿಂದ ಮತ್ತು ಶಾಸಕರ ಕುಮ್ಮಕ್ಕಿನಿಂದ ಹಾಗೂ ರೌಡಿಶೀಟರ್ ಅರುಣ್ ಕುಗ್ವೆ ರವರ ದ್ವೇಷದ ಹೇಳಿಕೆಯಿಂದ ವಿನಾಕಾರಣ ಪ್ರಥಮ ವರ್ತಮಾನ ವರದಿಯಲ್ಲಿ ಹೆಸರು ಸೇರ್ಪಡೆ ಮಾಡಿರುತ್ತಾರೆ.ಆದ್ದರಿಂದ ಅವರ ಮೇಲಿನ ಪ್ರಕರಣವನ್ನು ಕೈ ಬಿಡುವಂತೆ ಒತ್ತಾಯಿಸಿ ಸಾಗರ ಗೆಳೆಯರ ಬಳಗದ ವತಿಯಿಂದ ಡಿವೈಎಸ್ಪಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಎಎಸ್ಪಿ ರೋಹನ್ ಜಗದೀಶ್ ರವರಿಗೆ ಮನವಿ ಸಲ್ಲಿಸಿದರು. ಶನಿವಾರ ರಾತ್ರಿ ನಡೆದ ಘಟನೆಗೂ ರಾಯಲ್ ಬಿಲ್ಡರ್ಸ್ ಮಾಲೀಕ…