Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ಹಿಂದೂ ಮಹಾಸಭಾ ಗಣಪತಿಗೆ ಪೂಜೆ ಸಲ್ಲಿಸಿದ ಮೂಲೆಗದ್ದ ಶ್ರೀಗಳು ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ|Hindu mahasabha

ಹಿಂದೂ ಮಹಾಸಭಾ ಗಣಪತಿಗೆ ಪೂಜೆ ಸಲ್ಲಿಸಿದ ಮೂಲೆಗದ್ದ ಶ್ರೀಗಳು ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ ರಿಪ್ಪನ್‌ಪೇಟೆ;-ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ ಸೇನಾ ಸಮಿತಿಯ 56 ನೇ ಗಣೇಶೋತ್ಸವ ಸಮಿತಿಯವರು ಪ್ರತಿಷ್ಟಾಪಿಸಲಾಗಿರುವ ಗಣಪತಿಗೆ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿ ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ ವಿಶೇಷ ಪೂಜೆ ಸಲ್ಲಿಸಿ ಶ್ರೀ ಸ್ವಾಮಿಯ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ  ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿಯರನ್ನು ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ…

Read More

ಎರಡು ಗುಂಪುಗಳ ನಡುವೆ ಮಾರಾಮಾರಿ – ಐವರಿಗೆ ಚೂರಿ ಇರಿತ : ಮೆಗ್ಗಾನ್ ಗೆ ದಾಖಲು|gang war

ಶಿವಮೊಗ್ಗ ನಗರದ ಆಲ್ಕೋಳ ಸರ್ಕಲ್​ ಸಮೀಪ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದೆ.  ಆಲ್ಕೋಳ ಸಮೀಪ ಇರುವ ವಿಶಾಲ್​ ಮಾರ್ಟ್ ಬಳಿಯಲ್ಲಿ ಎಲ್​ಐಸಿ ಆಫೀಸ್​  ಹಿಂಭಾಗದಲ್ಲಿ ಎರಡು ಗುಂಪುಗಳು ಪರಸ್ಪರ ಮಾರಾಮಾರಿಯಾಗಿದೆ. ಘಟನೆಯಲ್ಲಿ ಐದು ಮಂದಿಗೆ ಚಾಕುವಿಗೆ ಇರಿಯಲಾಗಿದೆ ಒಬ್ಬರ ಸೀರಿಯಸ್ ಇದ್ದಾರೆ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದೆ.  ಈ ಭಾಗದಲ್ಲಿರುವ ಪವನ್​ ಮತ್ತು ಕಿರಣ್ ಎಂಬಿಬ್ಬರು ಸ್ನೇಹಿತರಾಗಿದ್ದು, ಇವರ ನಡುವೆ ಕಳೆದ 2 ವರ್ಷಗಳಿಂದ ಸಣ್ಣಪುಟ್ಟ ವಿಚಾರಕ್ಕೆ ಬಿನ್ನಾಭಿಪ್ರಾಯಗಳಿದ್ದವು. ಅಲ್ಲದೆ ಇದೇ ಕಾರಣಕ್ಕೆ ಕಿರಿಕ್ ಆಗುತ್ತಿತ್ತು. ಈ…

Read More

ಕುಡಿದ ಮತ್ತಿನಲ್ಲಿ ಟಕ್ಕರ್ ಕೊಟ್ಟ ನಟೋರಿಯಸ್ ರೌಡಿಯನ್ನೆ ಮೂರುದಿನ ವಿವಸ್ತಗೊಳಿಸಿ ಥಳಿಸಿದ ಗ್ಯಾಂಗ್|crime news

ಕುಡಿದ ಮತ್ತಿನಲ್ಲಿ ಠಕ್ಕರ್ ಕೊಟ್ಟಿದ್ದಕ್ಕೆ ನಟೋರಿಯಸ್‌ ರೌಡಿಗೆ ಎದುರಾಳಿ ಗ್ಯಾಂಗ್‌ ಟಾರ್ಚರ್‌ ನೀಡಿದೆ. ಅದು ಕೂಡ ರೌಡಿಯನ್ನು ಕಿಡ್ನ್ಯಾಪ್‌ ಮಾಡಿ ಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ನಟೋರಿಯಸ್‌ ರೌಡಿ ಸಚಿನ್ ಷ್ಯಾಡೋ ಎಂಬಾತ ಕುಡಿದ ನಶೆಯಲ್ಲಿ ಎದುರಾಳಿ ಗ್ಯಾಂಗ್‌ಗೆ ಅವಾಜ್‌ ಹಾಕಿದ್ದ. ಬಳಿಕ ರೌಡಿ ಪಂಥಾಹ್ವಾನ ಸ್ವೀಕರಿಸಿದ್ದ ಎದುರಾಳಿ ಗ್ಯಾಂಗ್ ಬರುವ ಮುನ್ನವೇ ಪರಾರಿಯಾಗಿದ್ದನು. ಈ ವೇಳೆ ಕೈಗೆ ಸಿಕ್ಕ ರೌಡಿ ಸಚಿನ್‌ ಷ್ಯಾಡೋ ಸ್ನೇಹಿತನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಆತನನ್ನು ಸ್ಥಳೀಯರು ಆಸ್ಪತ್ರೆಗೆ…

Read More

ಶಿವಮೊಗ್ಗ ಮೂಲದ ಪಿಎಸ್ಐ ಅಕಾಲಿಕ ನಿಧನ.!!|psi

ಶಿವಮೊಗ್ಗ ಮೂಲದ ಪಿಎಸ್ಐ ಅಕಾಲಿಕ ನಿಧನ.!! ಶಿವಮೊಗ್ಗ ತಾಲೂಕಿನ ಮೂಲದ ನಳಿನಕೊಪ್ಪ ಗ್ರಾಮದ ಮಧ್ಯಮ ವರ್ಗದ ಕುಟುಂಬದಿಂದ ಬಂದ ಜಗದೀಶ್ ನಾಯ್ಕ್ ಪ್ರಸ್ತುತ  ಔರಾದ್ ಸ್ಟೇಷನ್ 2nd ಗಾಂಧಿ ಗಂಜ್ ಪೊಲೀಸ್ ಠಾಣೆ ಪಿಎಸ್ಐ ಆಗಿ ಬೀದರ್ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.. ತಂದೆ ಈರ ನಾಯ್ಕ, ತಾಯಿ ಸಾವಿತ್ರಿ ಬಾಯಿ,ಒಬ್ಬ ಸಹೋದರ ಸಹ ಸಿವಿಲ್ ಪೊಲೀಸ್ ಸಹ ಸೇವೆ ಸಲ್ಲಿಸುತ್ತಿದ್ದಾರೆ.!ಮೃತರು ಇಬ್ಬರು ಸಹೋದರಿಯನ್ನ ಹೊಂದಿದ್ದಾರೆ ಸಹೋದರರು ಇಬ್ಬರೂ ಸಹ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ವಿಶೇಷವಾಗಿದ್ದು,ಮಗನ ಅಕಾಲಿಕ…

Read More

ರಿಪ್ಪನ್‌ಪೇಟೆಯಲ್ಲಿ ನಾಳೆ(22-09-2023) ಶುಭಾರಂಭಗೊಳ್ಳಲಿದೆ ಶ್ರೀ ದುರ್ಗಾಪರಮೇಶ್ವರಿ ಟ್ರೇಡರ್ಸ್

ರಿಪ್ಪನ್‌ಪೇಟೆ : ಸೆಪ್ಟೆಂಬರ್ 22 ರ ಶುಕ್ರವಾರ ಪಟ್ಟಣದ ವಿಶ್ವಮಾನವ ಸಭಾಂಗಣದ ಮುಂಭಾಗದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಟ್ರೇಡರ್ಸ್ ಮತ್ತು ಅರ್ಥ್ ಮೂವರ್ಸ್ ಶುಭಾರಂಭಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ , ಮಾಜಿ ಸಚಿವರಾದ ಹರತಾಳು ಹಾಲಪ್ಪ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ. ಅತ್ಯಾಧುನಿಕವಾಗಿ ಪ್ರಾರಂಭಗೊಳ್ಳಲಿರುವ ನೂತನ ಫ್ಯಾಕ್ಟರಿಯಲ್ಲಿ ಗ್ರಾಹಕರಿಗೆ ಬೇಕಾದ ಸೈಜ್ ನಲ್ಲಿ ಹೋಲ್ಸೇಲ್ ದರದಲ್ಲಿ ಎಲ್ಲಾ ಕಂಪನಿಯ ರೂಫ್ ಶೀಟ್ ಗಳು SQ ರಾಡ್ಸ್ ,ಆಂಗಲ್ಸ್ ಚಾನಲ್ಸ್ ,…

Read More

ಶ್ರೀಕ್ಷೇತ್ರ ಹೊಂಬುಜದಲ್ಲಿ ದೃಢಬಲ ಆಯುರ್ವೇದ ಶಿಬಿರ|hombuja

ಶ್ರೀಕ್ಷೇತ್ರ ಹೊಂಬುಜದಲ್ಲಿ ದೃಢಬಲ ಆಯುರ್ವೇದ ಶಿಬಿರ ರಿಪ್ಪನ್ ಪೇಟೆ : ಶ್ರೀಕ್ಷೇತ್ರ ಹೊಂಬುಜದಲ್ಲಿ ದೃಢಬಲ ಆಯುರ್ವೇದ ಶಿಬಿರ ಹೊಂಬುಜ ಜೈನ ಮಠದಲ್ಲಿ ದಿನಾಂಕ  ಸೆಪ್ಟೆಂಬರ್ ೨೩ ರಿಂದ ೩೦ ವರೆಗೆ ದೃಢಬಲ ಆಯುರ್ವೇದ ವಸತಿ ಶಿಬಿರವನ್ನು ಆಯೋಜಿಸಲಾಗಿದೆ. ಆಪ್ತಾಸ್ ಆಯುರ್ವೇದ ಎಂಬ ಸಂಸ್ಥೆಯು, ಶ್ರೀ ಕ್ಷೇತ್ರ ಹೊಂಬುಜದ ಸಹಕಾರದಿಂದ ಆಯುರ್ವೇದದ ವೈದ್ಯ ವಿದ್ಯಾರ್ಥಿಗಳಿಗಾಗಿ (ಬಿ.ಎ.ಎಮ್.ಎಸ್. ತೃತೀಯ ವರ್ಷದ) ಈ ವಸತಿ ಶಿಬಿರವನ್ನು ಆಯೋಜಿಸಿದ್ದಾರೆ.  ಈ ಶಿಬಿರದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಆಯುರ್ವೇದ ರಂಗದ ಸಾಧಕರು, ಪ್ರಸಿದ್ಧ ವೈದ್ಯರು…

Read More

ಮ್ಯಾಟ್ರಿಮೊನಿಯಲ್ಲಿ ಸಿಕ್ಕಿದ ಸ್ವಪ್ನ ಸುಂದರಿಯನ್ನು ನಂಬಿ 99 ಲಕ್ಷ ರೂ ಕಳೆದುಕೊಂಡ ಯುವಕ – ಹೀಗೂ ಯಾಮಾರಿಸ್ತಾರ..!!!??

99 ಲಕ್ಷ ರೂ ಕಳೆದುಕೊಂಡ ಯುವಕ – ಹೀಗೂ ಯಾಮಾರಿಸ್ತಾರ ಯುವಕನೊಬ್ಬನಿಗೆ ಹುಡುಗಿ ಹೆಸರಿನಲ್ಲಿ 99 ಲಕ್ಷ ರೂಪಾಯಿ ವಂಚನೆ ಮಾಡಿದ ಸಂಬಂಧ ಶಿವಮೊಗ್ಗದ ಸಿಇಎನ್​ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್ ದಾಖಲಾಗಿದೆ.  ಘಟನೆಯ ಹಿನ್ನಲೆ : ಶಿವಮೊಗ್ಗ ನಗರದ ಯುವಕನೊಬ್ಬ ಏಪ್ರಿಲ್ ತಿಂಗಳಿನಲ್ಲಿ ಮದುವೆ ಮ್ಯಾಟ್ರಿಮೋನಿ ಆ್ಯಪ್​ವೊಂದರಲ್ಲಿ ಒಬ್ಬಾಕೆಯ ಪ್ರೊಫೈಲ್​ ನೋಡಿ ಅವರೊಂದಿಗೆ ಚಾಟ್ ಆರಂಭಿಸಿದ್ದರು. ಪರಸ್ಪರ ಪರಿಚಯ ಮಾಡಿಕೊಂಡು ಮಾತುಕತೆ ಮುಂದುವರಿಸಿದ್ದಾರೆ. ಈ ನಡುವೆ ಯುವತಿಯು ತನ್ನ ಹೆಸರನ್ನ ಸ್ವಪ್ನ ಅಂತ ತಿಳಿಸಿ ಯುವಕನೊಂದಿಗೆ ಸಲುಗೆ…

Read More

ವಾಟ್ಸಾಪ್‌ನಲ್ಲಿ ಹೊಸ ಕ್ರಾಂತಿ – ವಾಟ್ಸಾಪ್ ಚಾನಲ್ಸ್ ಆರಂಭಿಸಿದ ಮೋದಿ, ಸಿದ್ದರಾಮಯ್ಯ!Whatsup channel

ನಮ್ಮ ಪೋಸ್ಟ್ ಮ್ಯಾನ್ ನ್ಯೂಸ್(POSTMAN NEWS) ನ ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಿ! ಇಲ್ಲಿ ನೀವು ಸೇಫ್​,, ನಿಮ್ಮ ನಂಬರ್ ಕೂಡ ಸೇಫ್​! ಯಾರಿಗೂ ತಿಳಿಯದು ನಿಮ್ಮ ವಿವರ! ಯಾವಾಗ ಬೇಕಾದರು  ಸುದ್ದಿ ಓದಿ, ವಾಟ್ಸಾಪ್ ಆಪ್ ಅಪ್ಡೇಟ್ ಮಾಡಿದ್ದಲ್ಲಿ ಈ ಕೆಳಗಿನ ಲಿಂಕ್​ ಕ್ಲಿಕ್ ಮಾಡಿ – ಬಲಬದಿಯಲ್ಲಿರುವ follow ಬಟನ್ ಕ್ಲಿಕ್ ಮಾಡಿ.. https://whatsapp.com/channel/0029Va9PbPU4Y9ltDSrECN0A ವಾಟ್ಸಾಪ್‌ (Whatsapp) ಬಳಕೆದಾರರು ಈಗಾಗಲೇ ಸಾಕಷ್ಟು ವಿವಿಧ ಫೀಚರ್ಸ್ ಮೂಲಕ ಹೊಸ ಹೊಸ ಸೇವೆ ಪಡೆಯುತ್ತಿದ್ದಾರೆ. ಈ ನಡುವೆ…

Read More

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ – ಚಾಲಕ ಸ್ಥಳದಲ್ಲಿಯೇ ಸಾವು|accident

ಸಾಗರ : ಹೆಂಚು ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ ಹೊಡೆದ ಪರಿಣಾ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ವರದಿಯಾಗಿದೆ. ಕುಂದಾಪುರದಿಂದ ಹೆಂಚು ತುಂಬಿಕೊಂಡು ಸಾಗರ ಮಾರ್ಗವಾಗಿ ಸೊರಬ ಕಡೆ ಹೊರಟಿದ್ದ ಲಾರಿ ಮರಸ ಗ್ರಾಮದ ಸಮೀಪ ಉರುಳಿ ಬಿದ್ದಿದೆ ಎನ್ನಲಾಗಿದೆ. ಘಟನೆಯಲ್ಲಿ ಲಾರಿ ಚಾಲಕ ಸೊರಬ ತಾಲೂಕಿನ ಮನ್ಸೂಬ್ ಖಾನ್ (41) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಸ್ಥಳೀಯರು ತಿಳಿಸಿದ್ದು, ಸ್ಥಳಕ್ಕೆ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್…

Read More

ಜಾಮೀನು ಸಿಕ್ಕರೂ ಜೈಲಿನಿಂದ ಹೊರಬರದ ಆರೋಪಿಗಳು – ಯಾಕೆ ಗೊತ್ತಾ..???|Shivamogga news

ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿದವರು ತಮಗೆ ಯಾವಾಗ ಬೇಲ್ ಸಿಗತ್ತೆ, ನಾವು ಯಾವಾಗ ಜೈಲಿನಿಂದ ಹೊರಗಡೆ ಹೋಗ್ತೀವಿ ಅಂತಾ ಕಾಯುತ್ತಿರುತ್ತಾರೆ, ಆದರೆ, ಇದೀಗ ಜಾಮೀನು ಮಂಜೂರಾದ್ರೂ ಕೂಡ ಜೈಲಿನಿಂದ ಹೊರಬರಲು ಆರೋಪಿಗಳು ಹಿಂದೇಟು ಹಾಕುತ್ತಿದ್ದಾರೆ. ಯಾವಾಗ ಬರ್ತೀರಾ ಅಂದ್ರೆ ಈ ಗಣೇಶ ಚತುರ್ಥಿ ಮುಗೀಲಿ ಆಮೇಲೆ ಬಂದರಾಯಿತು ಎನ್ನುತ್ತಿದ್ದಾರೆ. ಯಾವುದೇ ವ್ಯಕ್ತಿ ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ರೆ ಮೊದಲು ಅವರು ಮಾಡುವುದೇ ಒಳ್ಳೆಯ ವಕೀಲರನ್ನು ಹಿಡಿದು, ಕೇಳಿದಷ್ಟು ಹಣ ಕೊಟ್ಟು ಜಾಮೀನು ಪಡೆಯುವ ಕೆಲಸ. ಈ ಮೂಲಕ…

Read More