ರಿಪ್ಪನ್ ಪೇಟೆ ಪ್ರೌಡಶಾಲೆಯಲ್ಲಿ 97-98 ನೇ ಸಾಲಿನ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ , ಗುರುವಂದನಾ ಕಾರ್ಯಕ್ರಮ

ರಿಪ್ಪನ್ ಪೇಟೆ ಪ್ರೌಡಶಾಲೆಯಲ್ಲಿ 97-98 ನೇ ಸಾಲಿನ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ , ಗುರುವಂದನಾ ಕಾರ್ಯಕ್ರಮ

ರಿಪ್ಪನ್ ಪೇಟೆ : ಇಲ್ಲಿನ ಸರಕಾರಿ ಪ್ರೌಢ ಶಾಲೆಯಲ್ಲಿ 1997 – 98 ನೇ ಸಾಲಿನ SSLC ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ನಿವೃತ ಶಿಕ್ಷಕರಾದ ಬಿ ನಾರಾಯಣಪ್ಪ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ನಂತರ ಮಾತನಾಡಿ 28 ವರ್ಷದ ಹಿಂದೆ ನಾವು ವಿದ್ಯಾಬ್ಯಾಸ ನೀಡಿದ್ದ ವಿದ್ಯಾರ್ಥಿಗಳು ಇವತ್ತು ಇಷ್ಟು ಎತ್ತರ ಮಟ್ಟಿಗೆ ಬೆಳೆದಿರುವುದು ನನಗೆ ತುಂಬಾ ಸಂತೋಷವಾಗಿದೆ ಗುರು ಶಿಷ್ಯರು ಮತ್ತೆ ನಾವು ಕೂಡಿರುವುದು ನನಗೆ ತುಂಬಾ ಸಂತೋಷ ತಂದಿದೆ ಮತ್ತೆ ನಮ್ಮ ನಿಮ್ಮ ಭೇಟಿಯಾಗುವ ಖುಷಿ ಇನ್ನುೊಂದಿಲ್ಲ ಇವತ್ತು ನೀವು ನಾವು ಒಟ್ಟಿಗೆ ಸೇರಿ ಗುರು ಶಿಷ್ಯರ ಮಿಲನದ ಹಬ್ಬವನ್ನು ಆಚರಣೆ ಮಾಡುತ್ತಿರುವುದು ನನಗೆ ಇನ್ನಷ್ಟು ಖುಷಿ ತಂದಿದೆ ಗುರು ಶಿಷ್ಯರ ಸಂಬಂಧ ಗಟ್ಟಿಯಿದೆ ಎಂದು ತೋರಿಸಿಕೊಟ್ಟಿದ್ದೀರಿ ನಾವು ನೀವು ಭೇಟಿಯಾಗುವ ಸೌಭಾಗ್ಯ ಕೂಡಿಬಂದಿರುವುದು ಖುಷಿ ತಂದಿದೆ ಎಂದರು.

ನಮ್ಮಿಂದ ಕಲಿತ ವಿದ್ಯಾರ್ಥಿಗಳು ಎಷ್ಟೇ ಎತ್ತರಕ್ಕೆ ಬೆಳೆದರು ತಂದೆ ತಾಯಿ ಗುರು ಹಿರಿಯರನ್ನು ನಾವು ಎಂದಿಗೆ ಮರೆಯಬಾರದು ತಾವು ಯಾವುದೇ ಹುದ್ದೆಯಲ್ಲಿ ಇದ್ದರೂ ತಮ್ಮ ಪ್ರಾಮಾಣಿಕತೆ ಎಂದಿಗೂ ಮರೆಯಬಾರದೆಂದು ಕಿವಿ ಮಾತು ಹೇಳಿದರು.

ಕಾರ್ಯಕ್ರವನ್ನುದ್ದೇಶಿಸಿ ಶಿಕ್ಷಕಿ ಕೆ ಎಂ ಹೇಮಲತಾ ಮಾತನಾಡಿ ಈ ರೀತಿಯ ಕಾರ್ಯಕ್ರಮಗಳು ಶಾಲೆಯ ಅಭಿವೃದ್ದಿಗೆ ಮಾದರಿ ಶಿಕ್ಷಣವನ್ನು ಬೆಳೆಸುವ ಕಾರ್ಯಕ್ಕೆ ಸ್ಪೂರ್ತಿ ತುಂಬುವಂತ ಕಾರ್ಯಗಳಾಗಿವೆ ಸದಾ ಶಾಲೆಯನ್ನು ಶಿಕ್ಷಕ ವೃಂದವನ್ನು ಅಭಿನಂದಿಸುವ ಕಾರ್ಯಕ್ರಮಗಳು ಮುಂದಿನ ಯುವ ಪೀಳಿಗೆಗಳಿಗೆ ಮಾದರಿಯಾಗುತ್ತವೆ , ನಮ್ಮ ಕೈಯಲ್ಲಿ ಕಲಿತ ಇದೆ ಶಾಲೆಯಲ್ಲಿ ಓದಿ ದೊಡ್ಡವರಾಗಿ ಶಾಲೆಯಲ್ಲಿ ಕಳೆದ ನೆನಪುಗಳನ್ನು ಮೆಲುಕು ಹಾಕುತ್ತಾ ಈ ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಖುಷಿ ಆದರೆ ಈ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆಯಲ್ಲಿ ಇದ್ದು ಕಲಿತ ಶಾಲೆಯನ್ನು ಹಾಗೂ ಶಿಕ್ಷಕರನ್ನು ಗೌರವಿಸುವ ನೆನಪಿಸುವ ಈ ಕಾರ್ಯವು ಶಿಕ್ಷಕರ ಕಾರ್ಯಕ್ಕೆ ಸಾರ್ಥಕತೆ ತಂದುಕೊಟ್ಟಿತು ಎಂದರು.

ಶಿಕ್ಷಕ ಕುಮಾರಸ್ವಾಮಿ ಮಾತನಾಡಿ ಈ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಿಂದ ಹಳೆಯ ನೆನಪುಗಳನ್ನು ಮತ್ತೆ ಮರುಕಳಿಸಿದಂತಾಯಿತು ಎಂದರು.

ಇನ್ನೂ ಹಳೆಯ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿತಿರುವ ಸುಕ್ಷಣಗಳನ್ನು ಮೆಲಕು ಹಾಕುತ್ತಾ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರೊಂದಿಗೆ ಶಾಲೆಯಲ್ಲಿ ನಡೆದ ಸಿಹಿ ಕಹಿ ವಿಷಯಗಳನ್ನು ಮುಕ್ತ ಮನಸ್ಸಿನಿಂದ ವಿದ್ಯಾರ್ಥಿಗಳು ತಮ್ಮೆಲ್ಲಾ ನೆನಪುಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಳ್ಳುವ ಮೂಲಕ ಶಾಲೆಯ ನೆನಪುಗಳನ್ನು ಮರುಕಳಿಸಿದರು. ವೃತ್ತಿ ಜೀವನ ಹಾಗೂ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ಹಳೇ ವಿದ್ಯಾರ್ಥಿಗಳು ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದ ದಿನ ತಮ್ಮ ಹೈಸ್ಕೂಲ್ ವಿದ್ಯಾಬ್ಯಾಸದ ಜೀವನದ ಕ್ಷಣಗಳನ್ನು ನೆನಪಿಸಿಕೊಳ್ಳುವ ಮೂಲಕ ಖುಷಿಯಿಂದ ಸಂಭ್ರಮಿಸಿದರು.

ಈ ಸಂಧರ್ಭದಲ್ಲಿ ಶಿಕ್ಷಕರಾದ B ನಾರಾಯಣಪ್ಪ, KM  ಹೇಮಲತಾ, ಕುಮಾರ ಸ್ವಾಮಿ, ಲತಾ, ಮಲ್ಲಿಕಾರ್ಜುನ,  ದಾಮೋದರ, ಅಣ್ಣಪ್ಪ, ಯಶೋದಾ ರವರಿಗೆ ಹಳೇ ವಿದ್ಯಾರ್ಥಿಗಳು ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.ಅನಾರೋಗ್ಯ ಕಾರಣದಿಂದ ಕಾರ್ಯಕ್ರಮಕ್ಕೆ ಗೈರಾದ ಹಿನ್ನಲೆಯಲ್ಲಿ ಶಿಕ್ಷಕ ಭೋಜರಾಜ್ ರವರಿಗೆ ಅವರ ಮನೆಗೆ ತೆರಳಿ ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳಾದ ವಿಶ್ವಾಸ್,  ಮಂಜು ಮಳವಳ್ಳಿ, ನಾಗೇಶ್ ಹೆಬ್ಬಾರ್ , ರಹೀಮ್ ಚಾಲಿ, ಸಂತೋಷ KT, ಶಿವಕುಮಾರ, ವೀರೇಶ, ಲಕ್ಷ್ಮಣ ಬಳ್ಳಾರಿ, ಕಾರ್ತಿಕ, ಶ್ರೀ ಹರ್ಷ,ಪ್ರವೀಣ್ , ಕೆ ಜಿ ಗಣೇಶ್ , ಗಣೇಶ್ ಕೆಂಚನಾಳ, ಪುರುಷೋತ್ತಮ, ವಿಘ್ನರಾಜ ಪುರಾಣಿಕ , ರಾಜಾ ರಾಧಕೃಷ್ಣ , ಶಕುಂತಲಾ, ನೂರಿ , ದೀಪ್ತಿ ಎಲ್ ಗೌಡ ,ವಾಣಿ , ಸರಸ್ವತಿ ,ಶಶಿಕಲಾ , ಶ್ವೇತ , ಆಸ್ಮಾ ,ರಾಧಮಣಿ , ಗೀತಾ ,ಅಂಬಿಕ ,ಅನಿತ , ಮಮತ , ಶಶಿಕಲಾ , ಚಂದ್ರಿಕಾ , ಧನಲಕ್ಷ್ಮಿ , ವಾಣಿ , ಅನ್ನಪೂರ್ಣ , ಲೀಲಾವತಿ , ಮಮತ ,ವನಜಾಕ್ಷಿ ಇದ್ದರು…

Leave a Reply

Your email address will not be published. Required fields are marked *