Headlines

ಇಲಿ ಪಾಶಾಣ ಸೇವಿಸಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವು – ಸಾವಿಗೆ ಕಾರಣವಾಯ್ತಾ ಪ್ರೇಮ್ ಕಹಾನಿ

ಇಲಿ ಪಾಶಾಣ ಸೇವಿಸಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವು – ಸಾವಿಗೆ ಕಾರಣವಾಯ್ತಾ ಪ್ರೇಮ್ ಕಹಾನಿ

ಶಿವಮೊಗ್ಗ: ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಯುವಕನ ಆತ್ಮಹತ್ಯೆಯ ಹಿಂದೆ ಪ್ರೇಮ್ ಕಹಾನಿ ಇದೆ ಎಂದು ಹೇಳಲಾಗುತ್ತಿದೆ.

ಕುಂಚೇನಹಳ್ಳಿಯ ಕಲ್ಲಾಪುರದ ನಿವಾಸಿ ಸಂಜು (9) ಇಲಿ ಪಾಷಣ ಸೇವಿಸಿ ಆತ್ಮಹತ್ಯೆಯಾಗಿದ್ದಾನೆ.    ಇಲಿ ಪಾಶಾಣ ಸೇವಿಸಿ 10 ದಿನಗಳಾಗಿದ್ದು ನಿನ್ನೆ ಮೆಗ್ಗಾನ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಾನೆ.
ಇಲಿ ಸೇವಿಸಿದ ಎರಡು ದಿನಗಳ ವರೆಗೆ ಸಂಜು ಆರಾಮಾಗಿದ್ದರು. ನಂತರ ಆರೋಗ್ಯ ಉಲ್ಬಣಗೊಂಡಿದೆ. ಉಲ್ಬಣಗೊಂಡ ನಂತರ ಯುವಕನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ಬೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಾನೆ. ಆತನ ಆತ್ಮಹತ್ಯೆಗೆ ಪ್ರೀತಿ ಕಾರಣ ಎಂದು ಹೇಳಲಾಗುತ್ತಿದೆ.

ಪ್ರಕರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆತನ ಇತ್ತೀಚಿನ ರೀಲ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Leave a Reply

Your email address will not be published. Required fields are marked *