ಶಿವಮೊಗ್ಗ : ರೈಲಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ, ದೇಹ ಸಂಪೂರ್ಣ ಛಿದ್ರ-ಛಿದ್ರ

ಶಿವಮೊಗ್ಗ : ಪಶುವೈದ್ಯಕೀಯ ಕಾಲೇಜಿನ ಬಳಿ ಯುವಕನೋರ್ವ ರೈಲಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.

ಕಾಶಿಪುರದ ನಿವಾಸಿ ರಾಕೇಶ್ ರಾವ್ ಎಂಬುವನು ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಮೃತ ದೇಹ ರೈಲ್ವೆ ಹಳಿಯ ಮೇಲೆ ಛಿದ್ರ- ಛಿದ್ರವಾಗಿ ಬಿದ್ದಿದೆ.
ಹೆಂಡತಿ ಜೊತೆಗಿರಲಿಲ್ಲ ಹಾಗೂ ಮಾನಸಿಕ ಅಸ್ವಸ್ಥತೆಯ ಅಕ್ಕನನ್ನು ಹೊಂದಿದ್ದ ರಾಕೇಶ್ ರಾವ್ ಬೇಸತ್ತು ಈ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿಯೇ ಮನೆಬಿಟ್ಟು ಹೋಗಿದ್ದ ರಾಕೇಶ್ ಇಂದು ಹೆಣವಾಗಿ ಪತ್ತೆಯಾಗಿದ್ದಾನೆ.

ಇಂದು ಬೆಳಗ್ಗಿನ ಜಾವ ಮೈಸೂರು – ತಾಳಗುಪ್ಪ ರೈಲಿಗೆ ರಾಕೇಶ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ರಾಕೇಶ್ ವಿಡಿಯೋ ಎಡಿಟಿಂಗ್ ವೃತ್ತಿ ಮಾಡಿಕೊಂಡಿದ್ದನು ಎನ್ನಲಾಗಿದೆ.

Leave a Reply

Your email address will not be published. Required fields are marked *