ಚಲಿಸುತ್ತಿದ್ದಾಗಲೇ ಕಳಚಿ ಬಿದ್ದ KSRTC ಬಸ್‌ನ ಟೈರ್; ತಪ್ಪಿದ ಭಾರಿ ಅನಾಹುತ

ಚಲಿಸುತ್ತಿದ್ದಾಗಲೇ ಕಳಚಿ ಬಿದ್ದ KSRTC ಬಸ್‌ನ ಟೈರ್; ತಪ್ಪಿದ ಭಾರಿ ಅನಾಹುತ

KSRTC bus travelling from Udupi to Shivamogga lost one of its wheels near Agumbe Gram Panchayat. The incident occurred while the bus was moving slowly, averting a major accident.

ಆಗುಂಬೆ: ಉಡುಪಿಯಿಂದ ಶಿವಮೊಗ್ಗದತ್ತ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಒಂದು ಬದಿಯ ಚಕ್ರ ಏಕಾಏಕಿ ಕಳಚಿಕೊಂಡ ಘಟನೆ ಆಗುಂಬೆಯಲ್ಲಿ ನಡೆದಿದೆ.

ಆಗುಂಬೆ ಬಸ್‌ ನಿಲ್ದಾಣದ ಸಮೀಪದ ಗ್ರಾಮ ಪಂಚಾಯಿತಿ ಪ್ರದೇಶದಲ್ಲಿ ಬೆಳಗಿನ ವೇಳೆ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ಬಸ್‌ ಉಡುಪಿಯಿಂದ ಶಿವಮೊಗ್ಗದತ್ತ ತೆರಳುತ್ತಿತ್ತು. ಆಗುಂಬೆ ಗ್ರಾಮ ಪಂಚಾಯಿತಿ ಸಮೀಪ ಬಸ್‌ ನಿಧಾನಗತಿಯಲ್ಲಿ ಸಂಚರಿಸುತ್ತಿದ್ದ ವೇಳೆ ಚಾಲಕ ಮತ್ತಷ್ಟು ವೇಗ ಕಡಿಮೆ ಮಾಡಿದ ಸಂದರ್ಭದಲ್ಲಿ ಬಸ್‌ನ ಒಂದು ಬದಿಯ ಚಕ್ರ ಕಳಚಿಕೊಂಡಿದೆ ಎನ್ನಲಾಗಿದೆ.

ಬಸ್‌ ನಿಧಾನಗತಿಯಲ್ಲಿದ್ದ ಕಾರಣ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.

ಬಸ್‌ ಚಲಿಸುತ್ತಿದ್ದ ವೇಗ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಸಂಭವನೀಯ ಅಪಾಯವೊಂದು ತಪ್ಪಿದಂತಾಗಿದೆ.

About The Author