ಗಣೇಶನ ಸಮ್ಮುಖದಲ್ಲಿ ಭಕ್ತಾಕರ್ಷಣೆಗೊಂಡ ಕೋಲಾಟ ನೃತ್ಯ ಪ್ರದರ್ಶನ
ರಿಪ್ಪನ್ಪೇಟೆ;-ಗ್ರಾಮೀಣ ಪ್ರದೇಶದಲ್ಲಿ ಹಾಸುಹೊಕ್ಕಾಗಿರುವ ಜಾನಪದ ಕಲೆಗಳಲ್ಲಿ ಒಂದಾದ ವಿವಿಧ ಭಂಗಿಯ ಕೋಲಾಟ ಪ್ರದರ್ಶನವು ಭಕ್ತಾಕರ್ಷಣೆಗೊಂಡಿತು.
ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದು ಮಹಾಸಭಾದ 56 ನೇ ವರ್ಷದ ಗಣೇಶೋತ್ಸವ ಸಮಿತಿಯವರು ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಲಾದ ಬಳೆಕೋಲಾಟ ಪ್ರದರ್ಶನದಲ್ಲಿ ಕೆದಲುಗುಡ್ಡೆ ಮತ್ತು ಚಿಪ್ಪಿಳ್ಳಿ ಕೋಲಾಟ ತಂಡದವರ ಜಡೆ ಕೋಲಾಟ ಪ್ರದರ್ಶನ ಜನಾಕರ್ಷಣೆಗೊಂಡಿತು.
ಹಿಂದೂ ಮಹಾಸಭಾ ಕಟ್ಟಡ ಸಮಿತಿಯ ಅಧ್ಯಕ್ಷ ಎಂ.ಬಿ.ಮಂಜುನಾಥ ಮಾತನಾಡಿ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ಇಲ್ಲಿನ ಕಲಾ ತಂಡಗಳ ಕಾರ್ಯ ಪ್ರಶಂಸನೀಯವೆಂದು ಹೇಳಿ ಬರುವ ವರ್ಷದಿಂದ ಈ ಕೋಲಾಟಕ್ಕೆ ಉತ್ತೇಜನ ನೀಡುವ ಉದ್ದೇಶದಿಂದಾಗಿ ಮಹಿಳೆಯರಿಗೂ ಇಂತಹ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹಿಂದು ಮಹಾಸಭಾ ಸಮಿತಿ ಆಧ್ಯಕ್ಷ ನಾಗರಾಜ್ಪವಾರ್,ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುದೀಂದ್ರಪೂಜಾರಿ, ಎಂ.ಸುರೇಶ್ಸಿಂಗ್,ಆರ್.ರಾಘವೇಂದ್ರ,ಪ್ರಧಾನಕಾರ್ಯದರ್ಶಿ ಲಕ್ಷö್ಮಣ ಬಳ್ಳಾರಿ,ಹೆಚ್.ಎನ್.ಚೋಳರಾಜ್,ಯೋಗೀಶ್,ಡಿ.ಈ.ರವಿಭೂಷಣ,ಆರ್.ಈ.ಭಾಸ್ಕರ್ಶೆಟ್ಟಿ,ವೈ.ಜೆ.ಕೃಷ್ಣ,ವಾಸುಶೆಟ್ಟಿಗವಟೂರು,ಇನ್ನಿತರರು ಹಾಜರಿದ್ದರು.