ಎರಡು ಕಾರುಗಳು ನಡುವೆ ಡಿಕ್ಕಿ, ನವವಧು ಸೇರಿ ಮೂವರಿಗೆ ಗಾಯ
ಶಿವಮೊಗ್ಗ : ಕುಟುಂಬದೊಂದಿಗೆ ನವ ದಂಪತಿ ದೇವಸ್ಥಾನಕ್ಕೆ ತೆರಳುತ್ತಿದ್ದ ಕಾರಿಗೆ ಎದುರಿನಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ನವವಧು ಸೇರಿ ಮೂವರು ಮಹಿಳೆಯರು ಗಾಯಗೊಂಡಿದ್ದಾರೆ. ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಅರೇಕಲ್ ಕ್ರಾಸ್ ಬಳಿ ಘಟನೆ ಸಂಭವಿಸಿದೆ.
ನವವಧು ನಾಗರತ್ನ, ಅವರ ತಾಯಿ ಗೀತಾ, ಅಜ್ಜಿ ರಾಧಮ್ಮ ಗಾಯಗೊಂಡಿದ್ದಾರೆ. ನಾಗರತ್ನ ಮತ್ತು ಸುಬ್ರಹ್ಮಣ್ಯ ಅವರು ಈಚಗೆ ವಿವಾಹವಾಗಿದ್ದು ಕುಟುಂಬದವರ ಜೊತೆಗೆ ಮಂದಾರ್ತಿಗೆ ತೆರಳುತ್ತಿದ್ದರು.
ಸುಬ್ರಹ್ಮಣ್ಯ ಅವರು ಕಾರು ಚಲಾಯಿಸುತ್ತಿದ್ದರು. ಮೇಘರವಳ್ಳಿ ಸಮೀಪ ಅರೇಕಲ್ ಕ್ರಾಸ್ ಸಮೀಪ ಎದುರಿನಿಂದ ಬಂದ ರಿಟ್ಜ್ ಕಾರು, ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.