RIPPONPETE | ಸಾಲದ ಭಾದೆಗೆ ಬೇಸತ್ತು ಯುವ ರೈತ ವಿಷ ಸೇವಿಸಿ ಆತ್ಮಹತ್ಯೆ
RIPPONPETE | ಸಾಲದ ಭಾದೆಗೆ ಬೇಸತ್ತು ಯುವ ರೈತ ವಿಷ ಸೇವಿಸಿ ಆತ್ಮಹತ್ಯೆ
RIPPONPETE | ಸಾಲದ ಭಾದೆಗೆ ಬೇಸತ್ತು ಯುವ ರೈತ ವಿಷ ಸೇವಿಸಿ ಆತ್ಮಹತ್ಯೆ
ಸಾಲದ ಬಾಧೆ ತಾಳಲಾರದೆ ವಿಷ ಸೇವಿಸಿ ಯುವ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಕೆಂಚನಾಲ ಗ್ರಾಮದಲ್ಲಿ ನಡೆದಿದೆ.
ಕೆಂಚನಾಲ ಗ್ರಾಮದ ಅಶೋಕ್ ಕೆ ಎಸ್ (24) ಮೃತಪಟ್ಟ ದುರ್ಧೈವಿಯಾಗಿದ್ದಾನೆ.
ಕೆಂಚನಾಲ ಗ್ರಾಮದ ಸರ್ವೆ ನಂ 09 ರ ಜಮೀನಿನಲ್ಲಿ ಶುಂಠಿ ,ಜೋಳ ಹಾಗೂ ಭತ್ತದ ಬೆಳೆಯನ್ನು ಬೆಳೆಯುವ ಸಲುವಾಗಿ ಧರ್ಮಸ್ಥಳ ಸಂಘದಿಂದ 2 ಲಕ್ಷ , ಗ್ರಾಮೀಣ ಅಭಿವೃದ್ಧಿ ಕೂಟ ಸಾಗರ ಸಂಸ್ಥೆಯಿಂದ 1 ಲಕ್ಷ ರೂ ಸಾಲವನ್ನು ಮಾಡಿದ್ದು ಮತ್ತು ಕೈ ಸಾಲವಾಗಿ 4 ರಿಂದ 5 ಲಕ್ಷ ರೂ ಸಾಲ ಮಾಡಿದ್ದಾರೆ ಆದರೆ ಬೆಳೆ ಕೈ ಕೊಟ್ಟಿದ್ದರಿಂದ ನಷ್ಟವುಂಟಾಗಿ ಬೇಸತ್ತು ಭಾನುವಾರ ಮನೆಯಲ್ಲಿಯೇ ಕಳೆನಾಶಕ ವಿಷ ಕುಡಿದಿದ್ದಾರೆ ಕೂಡಲೇ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.
ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.