ಅಧಿಕ ಬಡ್ಡಿ ನೀಡುವಂತೆ ಕಿರುಕುಳ: ಫೈನಾನ್ಸ್ ಮಾಲೀಕನ ಬಂಧನ

ಅಧಿಕ ಬಡ್ಡಿ ನೀಡುವಂತೆ ಕಿರುಕುಳ: ಫೈನಾನ್ಸ್ ಮಾಲೀಕನ ಬಂಧನ

ಸಾಗರ: ಅಧಿಕ ಬಡ್ಡಿ ನೀಡುವಂತೆ ಸಾಲ ಪಡೆದ ವ್ಯಕ್ತಿಗೆ ಪದೇಪದೇ ಕಿರುಕುಳ ನೀಡುತ್ತಿದ್ದ ಫೈನಾನ್ಸ್ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಧಿಕ ಬಡ್ಡಿ ನೀಡುವಂತೆ ಸಾಲ ಪಡೆದ ವ್ಯಕ್ತಿಗೆ ಕಿರುಕುಳ ನೀಡಿ, ಮಹಿಳೆಗೆ ಜಾತಿ ನಿಂದನೆ ಮಾಡಿದ ಆರೋಪದ ಮೇರೆಗೆ ನಗರದ ಶಾಂತಿ ನಗರ ಬಡಾವಣೆಯ ಖಾಸಗಿ ಫೈನಾನ್ಸ್ ಮಾಲೀಕ ರವಿ ಭಟ್ಟ ಎಂಬುವವರನ್ನು ನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಮಹಿಳೆಯೊಬ್ಬರಿಗೆ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಅರೋಪಿಯನ್ನು ಮೇ 19ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published. Required fields are marked *