ಕುಟುಂಬಸ್ಥರೊಂದಿಗೆ ಬೇಳೂರಿನಲ್ಲಿ ಮತಚಲಾವಣೆ ಮಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ | Election
ಸಾಗರ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಮತ್ತು ಕೈಗಾರಿಕ ನಿಗಮದ ಅಧ್ಯಕ್ಷ ರಾದ ಗೋಪಾಲ ಕೃಷ್ಣ ಬೇಳೂರು ರವರು ತಮ್ಮ ಪತ್ನಿ ರಾಧ ಹಾಗು ಪುತ್ರ ನಿಯಾನ್ ರೊಂದಿಗೆ ಸಾಗರ ತಾಲೂಕಿನ ಬೇಳೂರಿನ ಮತ ಗಟ್ಟೆ ಸಂಖ್ಯೆ 24 ರಲ್ಲಿ ಮತ ಚಲಾಯಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಈ ಬಾರಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ರವರು ಅತ್ಯಂತ ಪ್ರಚಂಡ ಬಹುಮತದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಅಶೋಕ್ ಬೇಳೂರು ಹಾಗೂ ಪಕ್ಷದ ಮುಖಂಡರು ಹಾಗೂ ಕರ್ಯಕರ್ತರು ಇದ್ದರು.