Headlines

Ripponpete | ಶ್ರೀ ರಾಮಮಂದಿರದಲ್ಲಿ ಬಿ ವೈ ರಾಘವೇಂದ್ರ ಗೆಲುವಿಗೆ ಪ್ರಾರ್ಥಿಸಿ ವಿಶೇಷ ಪೂಜೆ

Ripponpete | ಶ್ರೀ ರಾಮಮಂದಿರದಲ್ಲಿ ಬಿ ವೈ ರಾಘವೇಂದ್ರ ಗೆಲುವಿಗೆ ಪ್ರಾರ್ಥಿಸಿ ವಿಶೇಷ ಪೂಜೆ


ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಗೆಲುವಿಗೆ ಪ್ರಾರ್ಥಿಸಿ ಹೊಸನಗರ ತಾಲೂಕು ರಿಪ್ಪನ್‌ಪೇಟೆ ಪಟ್ಟಣದ ಶ್ರೀ ರಾಮ ಮಂದಿರದಲ್ಲಿ ಸತ್ಯನಾರಾಯಣ ಪೂಜೆಯೊಂದಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಪಟ್ಟಣದ ಶ್ರೀ ರಾಮಮಂದಿರದಲ್ಲಿ ರಾಮನವಮಿಯ ಅಂಗವಾಗಿ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಸಂಧರ್ಭದಲ್ಲಿ ವಿಪ್ರ ಬಾಂಧವರು ತಮ್ಮ ಜಿಲ್ಲೆಯ ನೆಚ್ಚಿನ ಲೋಕಸಭಾ ಅಭ್ಯರ್ಥಿಯಾದ ಬಿ ವೈ ರಾಘವೇಂದ್ರ ಅತಿ ಹೆಚ್ಚಿನ ಮತಗಳಿಂದ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ಮೋದಿಜಿಯವರು ಪ್ರಧಾನಿಯಾಗಲಿ ಎಂದು ಶ್ರೀರಾಮಚಂದ್ರನಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದರು.


ಈ ಸಂಧರ್ಭದಲ್ಲಿ ಸಮಾಜದ ಪ್ರಮುಖರಾದ ಪದ್ಮಾ ಸುರೇಶ್ ,ಎಚ್‌ ಪಿ ಸುರೇಶ್ , ಜಿಎಸ್ ಪುರಾಣಿಕ್ ಶಿವಾನಂದ ಸವಿತಾ ರಾಧಾಕೃಷ್ಣ ಅಮಿತಾ ಬಲ್ಲಾಳ್, ಸರಸ್ವತಿ ಪ್ರೇಮಚಂದ್ರ, ಸುಜಾತ ದೇವಕಿ ಮಂಗಳೂರುಕರ್, ದೀಪ ಸುಧೀಂದ್ರ ಹೆಬ್ಬಾರ್, ಕುಸುಮ ಬಾಲಚಂದ್ರ, ಮಾನಸ ಪುರುಷೋತ್ತಮ್ ಹಾಗೂ ಎಲ್ಲಾ ವಿಪ್ರ ಬಾಂಧವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *