Headlines

Ripponpet | ಶ್ರದ್ದಾ ಭಕ್ತಿಯಿಂದ ನೆರವೇರಿದ ಸಂಭ್ರಮದ ಗೋಪೂಜೆ

ರಿಪ್ಪನ್‌ಪೇಟೆ : ಇಂದು ಬಲಿಪಾಡ್ಯಮಿಯ ಅಂಗವಾಗಿ ರಿಪ್ಪನ್‌ಪೇಟೆಯ ವಿವಿದಢೆಯಲ್ಲಿ ಮತ್ತು ಮುಜರಾಯಿ ಇಲಾಖೆಯವರ ಅದೇಶದನ್ವಯ ಹಲವು ದೇವಸ್ಥಾನಗಳಲ್ಲಿ ಗೋಪೂಜೆಯನ್ನು ಶ್ರದ್ದಾಭಕ್ತಿಯಿಂದ ಸಂಭ್ರಮಸಿದರು.

ಪಟ್ಟಣದ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಗೋವುಗಳನ್ನು ಶೃಂಗರಿಸಿ ದೇವಸ್ಥಾನದ ಪ್ರದಾನ ಅರ್ಚಕ ವೇ.ಚಂದ್ರಶೇಖರ ಭಟ್ ಮತ್ತು ಗುರುರಾಜ್ ಭಟ್ ನೇತೃತ್ವದಲ್ಲಿ ಗೋ ಮಾತೆಗೆ ಬೆಲ್ಲ ಅಕ್ಕಿ ಬಾಳೆಹಣ್ಣು ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಸ್ಥಾನದ ಧರ್ಮದರ್ಶಿ ಆರ್.ಈ.ಈಶ್ವರಶೆಟ್ಟಿ, ಎಂ.ಡಿ.ಇಂದ್ರಮ್ಮ, ಗಣೇಶ್ ಎನ್.ಕಾಮತ್, ಎನ್.ಸತೀಶ್,ಸುಧೀಂದ್ರ ಪೂಜಾರಿ,ಮಂಜಪ್ಪ, ಮೋಹನ್,ಜಯಲಕ್ಷಿ, ರಾಘವೇಂದ್ರ,ಕೆ.ಆರ್.ಭೀಮರಾಜ್‌ಗೌಡರು, ವೈ.ಜೆ.ಕೃಷ್ಣ,ರಾಘವೇಂದ್ರ ಆರ್.ಸರಸ್ವತಿ ರಾಘವೇಂದ್ರ,ಇನ್ನಿತರರು ಹಾಜರಿದ್ದರು.

[ರಿಪ್ಪನ್‌ಪೇಟೆಯ ಸಮೀಪದ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದಲ್ಲಿ ಮಠದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮೀಜಿ ಗೋ ಮಾತೆಯನ್ನು ಪೂಜಿಸಿ ಬಾಳೆಹಣ್ಣು ಅಕ್ಕಿ ಬೆಲ್ಲವನ್ನು ನೀಡುತ್ತಿರುವುದು.]
[ ರಿಪ್ಪನ್‌ಪೇಟೆಯ ಸಮೀಪದ ಹಾರೋಹಿತ್ತಲು ಗ್ರಾಮದಲ್ಲಿ ನಾಗರತ್ನಮ್ಮ ,ಸಿದ್ದಪ್ಪ ಮತ್ತು ಮಕ್ಕಳು ಗೋಪೂಜೆಯನ್ನು ಸಾಮೂಹಿಕವಾಗಿ ಆಚರಿಸಿದರು.]

[ಹೊಸನಗರ ತಾಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ ಕುಟುಂಬದವರು ಗೋಪೂಜೆಯನ್ನು ನೆರವೇರಿಸಿದರು.]

[ಹೊಸನಗರ ತಾಪಂ ಮಾಜಿ ಸದಸ್ಯರಾದ ಬಿ ಜಿ ಚಂದ್ರಮೌಳಿ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು.]

ರಿಪ್ಪನ್ ಪೇಟೆ ಗ್ರಾಪಂ ಮಾಜಿ ಉಪಾಧ್ಯಕ್ಷರಾದ ರವೀಂದ್ರ ಕೆರೆಹಳ್ಳಿ ಕುಟುಂಬದವರು ಗೋಪೂಜೆ ನೆರವೇರಿಸಿದರು.


[ಕುಕ್ಕಳಲೆಯ ಕೀರ್ತಿ ಗೌಡ ರವರ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು]

ರಿಪ್ಪನ್ ಪೇಟೆಯ ಚೌಡೇಶ್ವರಿ ಬೀದಿ ನಿವಾಸಿ ಶಶಿಕಲಾ ಬಸವರಾಜ್ ಮನೆಯವರು ಗೋಪೂಜೆ ಮಾಡಿ ಹಣ್ಣು ನೀಡುತ್ತಿರುವುದು.

Leave a Reply

Your email address will not be published. Required fields are marked *