ಈದ್ ಮಿಲಾದ್ ಹಬ್ಬದ ವಿಚಾರದಲ್ಲಿ ಮಾರಾಮಾರಿ – ಓರ್ವನ ಕೊಲೆ
ಶಿಕಾರಿಪುರ : ಇಲ್ಲಿನ ಕೆಎಚ್ಪಿ ಕಾಲೋನಿಯಲ್ಲಿ ಈದ್ ಮಿಲಾದ್ ಆಚರಣೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು ಹಾಡು ಹಗಲೇ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.
ಈದ್ ಮಿಲಾದ್ ಹಬ್ಬದ ವಿಚಾರಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದವರು ಸಭೆ ನಡೆದಿತ್ತು ಈ ವಿಚಾರವಾಗಿ ಅವರವರಲ್ಲಿಯೇ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ಸೋಸೈಟಿ ಕೇರಿಯ ಮುಸ್ಲಿಂ ಯುವಕ ಜಾಫರ್ ಬಿನ್ ಸಬ್ಜನ್ ಸಾಬ್ 32 ವರ್ಷ ಕೊಲೆಯಾಗಿದ್ದಾನೆ ಎನ್ನಲಾಗಿದೆ.
ಏಕಾಏಕಿ ಎದೆಗೆ ಚಾಕುವಿಂದ ಇರಿದ ಪರಿಣಾಮ ಜಾಫರ್ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ
ಈ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದು ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.