ಅಕ್ರಮ ಮರಳು ಸಾಗಾಣಿಕೆ: 2 ಟಿಪ್ಪರ್ ವಶ
ಹೊಸನಗರ: ಖಚಿತ ಮಾಹಿತಿ ಮೇರೆಗೆ ನಗರ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್ ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ನಗರ ವಲಯ ಅರಣ್ಯಾಧಿಕಾರಿ ಬಿ.ಎಸ್.ಸಂಜಯ್ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಸುತ್ತ ಗ್ರಾಮದ ಶರಾವತಿ ನದಿಯಿಂದ ಮರಳು ಸಾಗಣೆಕೆ ಮುಂದಾಗಿದ್ದ, ಟಿಪ್ಪರ್ ಚಾಲಕ ಜಯನಗರ ಪುನೀತ್ ಹಾಗೂ ಗೊರಗೋಡು ಮನುಜಿತ್ ವಿರುದ್ದ ಪ್ರಕರಣ ದಾಖಲಾಗಿದೆ..
ಕಾರ್ಯಚರಣೆ ಯಲ್ಲಿ ಉಪವಲಯ ಅರಣ್ಯಧಿಕಾರಿಗಳಾದ ನರೇಂದ್ರ ಕುಮಾರ್, ಸತೀಶ್,ಗಸ್ತು ಅರಣ್ಯ ಪಾಲಕ ಯೋಗರಾಜ್,ಚಾಲಕ ರಾಮು ಭಾಗವಹಿದ್ದರು.