ಆನಂದಪುರ : ಅಕ್ರಮ ಕಲ್ಲು ಕ್ವಾರೆ ಮೇಲೆ ದಿಡೀರ್ ದಾಳಿ – ಎರಡು ಲಾರಿ,ಜೆಸಿಬಿ ಮತ್ತು ಟ್ರಾಕ್ಟರ್ ವಶಕ್ಕೆ|mining

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಅಕ್ರಮ ಗಣಿಗಾರಿಕೆಯ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವತಿಯಿಂದ ದಾಳಿ ನಡೆಸಿ ಅಕ್ರಮ ಗಣಿಗಾರಿಕೆಗೆ ಬಳಸುತಿದ್ದ ಹಲವು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.




ಆನಂದಪುರದಲ್ಲಿ ಪರವಾನಿಗೆ ಇಲ್ಲದ ಗಣಿಗಾರಿಕೆ ಪ್ರದೇಶಗಳಿಗೆ 
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾದ ಶಶಿಕಲಾ ರವರ ನೇತೃತ್ವದ ತಂಡ ದಾಳಿ ನಡೆಸಿ ಅಕ್ರಮ ಗಣಿಗಾರಿಕೆ ನಡೆಸುವವರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.




 ಈ ಕಾರ್ಯಚರಣೆಯಲ್ಲಿ ಎರಡು ಲಾರಿ, ಕಲ್ಲು ಡ್ರೆಸ್ಸಿಂಗ್ ಮಾಡುವ ಎರಡು ಟ್ಯಾಕ್ಟರ್ ಹಾಗೂ ಜೆಸಿಬಿಯನ್ನು ವಶಪಡಿಸಿಕೊಂಡಿದ್ದಾರೆ.

ಸದರಿ ವಾಹನಗಳನ್ನು ಆನಂದಪುರ ಪೊಲೀಸ್ ಠಾಣೆ ಸುಪರ್ದಿಗೆ ಹಸ್ತಾಂತರಿಸಲಾಗಿದೆ.



Leave a Reply

Your email address will not be published. Required fields are marked *