ಬಾಳೂರು ಗ್ರಾಮದಲ್ಲಿ ಏಕಾಏಕಿ ಬಾಳೆ ಬೆಳೆ ನಾಶಕ್ಕೆ ಹೊರಟ ಅರಣ್ಯ ಇಲಾಖೆ : ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವೀರೇಶ್ ಆಲುವಳ್ಳಿ
ರಿಪ್ಪನ್ಪೇಟೆ : ಇಲ್ಲಿನ ಸಮೀಪದ ಬಾಳೂರು ಗ್ರಾಮ ಸ ನಂ 14 ರಲ್ಲಿ 50 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಮೀನಿನಲ್ಲಿ ಬೆಳೆದ ಬಾಳೆ ಬೆಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಾಶಪಡಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಾ ಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲವಳ್ಳಿ ಏಕಾಏಕಿ ಬಾಳೆ ಗೆಡ್ಡೆಗಳನ್ನು ಕಿತ್ತು,ಕೊಚ್ಚಿ ನಾಶಪಡಿಸುತ್ತಿರುವ ಘಟನೆಯನ್ನು ಖಂಡಿಸಿ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ಮಾತನಾಡಿ ಬಾಳೂರು ಗ್ರಾಮ, ಸರ್ವೆ ನಂ 14 ರಲ್ಲಿ…