ಹೊಸನಗರ ಪಿಎಸ್ ಐ ರಾಜೇಂದ್ರನಾಯ್ಕ್ ವಿರುದ್ದ ನಡೆಯುತ್ತಿರುವ ಬೆಳವಣಿಗೆಗಳ ಹಿಂದಿದೆಯಾ ಮರಳು ಮಾಫ಼ಿಯಾ?????? ಪಿಎಸ್ ಐ ಪರವಾಗಿ ಹೊಸ ವೀಡಿಯೋ ವೈರಲ್


ಹೊಸನಗರ ಪಿಎಸ್ ಐ ರಾಜೇಂದ್ರನಾಯ್ಕ್ ಬಗ್ಗೆ ಇತ್ತೀಚೆಗೆ ಹೊಸನಗರ ಪಟ್ಟಣದ ನಾಗರೀಕರು ಮಾಡಿದ್ದ ವೀಡಿಯೋ ಗೆ ವಿರುದ್ದವಾಗಿ ಇಂದು ಕೆಲವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಇಂದು ಮಾತನಾಡಿರುವ ಹೊಸನಗರದ ಸಾರ್ವಜನಿಕರು ಪಿಎಸ್ ಐ ಮೇಲೆ ಇರುವ ಆರೋಪಕ್ಕೆ ಎಳೆ ಎಳೆಯಾಗಿ ಉತ್ತರ ನೀಡಿದ್ದಾರೆ.

ಪಿಎಸ್ ಐ ರಾಜೇಂದ್ರನಾಯ್ಕ್ ಬಗ್ಗೆ ಯಾಕಿಷ್ಟು ಧ್ವೇಷ ಎಂದೂ ಕೆದಕುತ್ತಾ ಹೊರಟರೇ ಕೊನೆಗೆ ಸಿಗುವುದೇ ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ಮಾಫ಼ಿಯಾ!!! ಹೌದು ರಾಜೇಂದ್ರನಾಯ್ಕ್ ಕರ್ತವ್ಯಕ್ಕೆ ಬಂದ ನಂತರದ ದಿನಗಳಿಂದ ಮರಳು ಕಳ್ಳರಿಗೆ ಮರಳು ಸಾಗಿಸಲು ಕಷ್ಟವಾಗುತಿದ್ದು ಅಕ್ರಮ ಕಲ್ಲು ಗಣಿಗಾರಿಕೆಗಳೆಲ್ಲಾ ಮುಚ್ಚಿಹೋಗಿವೆ ಇದನ್ನು ಸಹಿಸದ ಮಾಫ಼ಿಯಾದವರು ಈ ರೀತಿಯಾಗಿ ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತಿದ್ದಾರೆ ಎನ್ನಲಾಗುತ್ತಿದೆ.

ಅಷ್ಟಕ್ಕೂ ರಾಜೇಂದ್ರನಾಯ್ಕ್ ರವರ ಮೇಲೆ ಈ ತರಹದ ಆರೋಪ ಹೊಸದೇನಲ್ಲ ಕೆಲದಿನಗಳ ಹಿಂದೆ ಮಾರುತಿಪುರ ಘಟನೆಯ ಒಂದು ವೀಡಿಯೋ ವೈರಲ್ ಆಗಿ ಪಿಎಸ್ ಐ ಬಗ್ಗೆ ಆಕ್ರೋಶದ ಧ್ವನಿ ಎದ್ದಿತ್ತು.

ಮಾರುತಿಪುರ ಘಟನೆಯ ಸತ್ಯಾಸತ್ಯತೆ

ಅಂದು ಹೊಸನಗರದ ಮಾರುತಿಪುರದ ವಿಜಾಪುರದಲ್ಲಿ ಸುಬ್ರಹ್ಮಣ್ಯನ ಅಸಹಜ ಸಾವಿಗೆ ಸಂಬಂಧಿಸಿದಂತೆ ರಾಜೇಂದ್ ನಾಯ್ಕ್​ ಬಂದಿದ್ದರು. ಈ ವೇಳೆ ಜಟ್ಟಪ್ಪ, ತನ್ನನ್ನೇ ಏನೋ ಮಾಡಲು ಬಂದಿದ್ದಾರೆ ಎಂದು ಕೊಂಡು ಪೊಲೀಸರ ಮೇಲೆ ಅಚಾನಕ್​ ದಾಳಿ ನಡೆಸಿದ್ದಾರೆ.

ಇದಕ್ಕೂ ಮೊದಲು ಜಟ್ಟಪ್ಪ ಕುಡಿದು ಬೀದಿಯಲ್ಲಿ ರಂಪ ಮಾಡ್ತಿದ್ದಾಗ ರಾಜೇಂದ್ರ ನಾಯ್ಕ್​ ಬುದ್ದಿವಾದವೂ ಹೇಳಿದ್ದರಂತೆ. ಈ ಸಿಟ್ಟು ಕೂಡ ಜಟ್ಟಪ್ಪನಲ್ಲಿತ್ತು.

ಊರಿನವರ ಪ್ರಕಾರ, ಜಟ್ಟಪ್ಪ ಸಾಮಾನ್ಯ ವ್ಯಕ್ತಿ ಆದರೆ ಆತ ಅವತ್ತು ವಿಚಿತ್ರವಾಗಿ ಆಡಿದ್ದ, ರಾಜೇಂದ್ರ ನಾಯ್ಕ್​​ರ ಮೇಲೆ ಹಲ್ಲೆ ಮಾಡಿ, ಅವರ ಕೈ ಕಚ್ಚಿದ್ದ, ಈ ವೇಳೆ ಆತನ ಒಂದು ಏಟು ಕೊಟ್ಟು ದೂರ ಕಳಿಸಿದ್ದರು.

ಆದರೆ ಮತ್ತೆ ಮತ್ತೆ ರೊಚ್ಚಿಗೆದ್ದ ಜಟ್ಟಪ್ಪ, ಎಸ್​ಐ ಕೈ ಕಾಲು ಸೇರಿದಂತೆ ಸಿಕ್ಕಲೆಲ್ಲಾ ಕಚ್ಚಿದ್ದಾನೆ. ಅಲ್ಲದೆ, ಬಿಡಿಸಲು ಬಂದ ಪೇದೆ ಅವಿನಾಶ್​ ನ ಬೆರಳಿಗೆ ಗಂಭೀರವಾದ ಗಾಯ ಮಾಡಿದ್ದಾನೆ.

ಇದರ ನಡುವೆ ಜಟ್ಟಪ್ಪನ ತನ್ನ ಬಳಿಯಿದ್ದ ಚಾಕುವನ್ನ ಕೂಡ ತೆಗೆದಿದ್ದಾನೆ. ಇದರಿಂದ ಏನೋ ಆಪಾಯವಿದೆ ಎಂದು ಅರಿತ ಎಸ್​ಐ ರಾಜೇಂದ್ರ ನಾಯಕ್​ ತಮ್ಮ ಜೀಪಿನತ್ತ ಬಂದಿದ್ದಾರೆ. ಅಲ್ಲದೆ ಪೇದೆ ಸಹಾಯದಿಂದ ಜಟ್ಟಪ್ಪನ ಬಂಧಿಸಿ ಕರೆದೊಯ್ಯಲು ಮುಂದಾಗಿದ್ಧಾರೆ.

ಈ ವೇಳೆ ಮತ್ತಷ್ಟು ಗಲಾಟೆ ಮಾಡಿದ ಜಟ್ಟಪ್ಪನಿಗೆ ಲಾಠಿ ಏಟು ಕೊಟ್ಟಿದ್ದಾರೆ. ಇನ್ನೂ ಅದಕ್ಕೂ ಮೀರಿ ರಾಜೇಂದ್ರ ನಾಯ್ಕ್​ರ ಕೊರಳು ಪಟ್ಟಿ ಹಿಡಿದು ಹೊಡೆಯಲು ಬಂದಾಗ ಊರಿನವರೆಲ್ಲರೂ ಸೇರಿಕೊಂಡು ಪೊಲೀಸರ ರಕ್ಷಣೆಗೆ ನಿಂತಿದ್ದಲ್ಲದೆ, ಜಟ್ಟಪ್ಪನ ಕೈ ಕಾಲು ಕಟ್ಟಿ ಹಾಕಿದ್ದಾರೆ.

ಸದ್ಯ ವಿಚಾರಣೆಯಲ್ಲಿ ಊರಿನವರು ಘಟನೆಯ ಸಂಪೂರ್ಣ ಮಾಹಿತಿ ನೀಡಿದ್ದು, ಘಟನೆ ಅಷ್ಟೆಲ್ಲಾ ಆಗೋದಕ್ಕೆ ಸಂಪೂರ್ಣವಾಗಿ ಜಟ್ಟಪ್ಪನೇ ಕಾರಣ. ಪೊಲೀಸರ ತಮ್ಮ ಕೈಲಾದಷ್ಟು ತಾಳ್ಮೆ ವಹಿಸಿದ್ದರು, ಘಟನೆ ನಂತರವೂ ಪೊಲೀಸರು ಹೈರಾಣಾಗಿದ್ದರು ಎಂದು ನಡೆದಿದ್ದನ್ನ ವಿವರಿಸಿದ್ಧಾರೆ.

ಇನ್ನೂ ಪೊಲೀಸ್​ ವಲಯದಲ್ಲಿಯು ಕೂಡ ರಾಜೇಂದ್ರ ನಾಯ್ಕ್​ರದ್ದು ಆಚಾನಕ್​ ನಡೆದ ಘಟನೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಅಲ್ಲದೆ ಪೊಲೀಸರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಮರುದಿನವೇ ಹೊಸನಗರ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

ಹೀಗೆ ಖಡಕ್ ಪಿಎಸ್ ಐ ರಾಜೇಂದ್ರನಾಯ್ಕ್ ರವರನ್ನು ಅರಗಿಸಿಕೊಳ್ಳಲು ಆಗದ ಅಕ್ರಮ ಮರಳು ಮತ್ತು ಕಲ್ಲು ಮಾಫ಼ಿಯಾದವರು ಹೀಗೆ ಇಲ್ಲಸಲ್ಲದ ಆರೋಪ ಮಾಡುತಿದ್ದಾರೆ ಎಂದು ಹೊಸನಗರದ ಜನತೆ ಮಾತನಾಡಿಕೊಳ್ಳುತಿದ್ದಾರೆ.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇👇

Leave a Reply

Your email address will not be published. Required fields are marked *