
ANANDAPURA | ಸಾಲಬಾಧೆಗೆ ಬೇಸತ್ತು ಗ್ರಾಪಂ ಮಾಜಿ ಸದಸ್ಯ ಆತ್ಮಹತ್ಯೆ
ಸಾಲಬಾಧೆಗೆ ಬೇಸತ್ತು ಗ್ರಾಪಂ ಮಾಜಿ ಸದಸ್ಯ ಆತ್ಮಹತ್ಯೆ ಸಾಗರ : ಸಾಲ ಬಾಧೆ ತಾಳಲಾರದೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮೇಘರಾಜ್ ಬಿ ಎಚ್ (43) ಗೌತಮಪುರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರಾಗಿರುವ ಮೇಘರಾಜ್ 5 ಲಕ್ಷಕ್ಕೂ ಅಧಿಕ ಸಾಲವನ್ನು ಬೆಳೆಗಾಗಿ ಮಾಡಿರುವ ಮಾಹಿತಿ ತಿಳಿದು ಬಂದಿದೆ. ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗೋಲ್ಡ್ ಲೋನ್ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ….