ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣರವರ ಹುಟ್ಟು ಹಬ್ಬದ ಅಂಗವಾಗಿ ಮಾನವೀಯತೆ ಮರೆದ ಅಭಿಮಾನಿ ಬಳಗ.
ಹೊಸನಗರ ತಾಲ್ಲೂಕಿನ ನಿಟ್ಟೂರು ಸಮೀಪದ ಗ್ರಾಮ ಪಂಚಾಯಿತಿಯ ಮಾವಿನ ಗುಡ್ಡದಲ್ಲಿ ಹಲವು ವರ್ಷಗಳಿಂದ ಮೇಲ್ಛಾವಣಿ ಇಲ್ಲದೆ ಸಂಪೂರ್ಣ ದುರಸ್ಥಿಯಾದ ಚಿಕ್ಕ ಮನೆಯಲ್ಲಿ ವಾಸವಾಗಿದ್ದ, ವೃದ್ಧ ದಂಪತಿಗಳಿಗೆ ಇಂದು ಕೆಪಿಸಿಸಿ ವಕ್ತಾರರು, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ಜನ್ಮದಿನದ ಅಂಗವಾಗಿ ಗೋಪಾಲಕೃಷ್ಣ ಬೇಳೂರು ರವರ ಅಭಿಮಾನಿ ಬಳಗದಿಂದ ಇಂದು ಮೇಲ್ಛಾವಣಿ ಹಾಕಿಕೊಡಲಾಯಿತು. ಮಕ್ಕಳಿಲ್ಲದ ವೃದ್ಧ ದಂಪತಿಗಳಾದ ತಿಮ್ಮಪ್ಪ ಮತ್ತು ಚೌಡಮ್ಮ ಬೇರೆಯವರ ಹೊಲ ಗದ್ದೆಗಳಲ್ಲಿ ದುಡಿಯುವ ಮೂಲಕ ತಮ್ಮ ದಿನ ನಿತ್ಯದ ಬದುಕಿಗೆ ಅವಶ್ಯಕತೆ ಇರುವ ಆಹಾರ…