Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ಮ್ಯಾಟ್ರಿಮೊನಿಯಲ್ಲಿ ಸಿಕ್ಕಿದ ಸ್ವಪ್ನ ಸುಂದರಿಯನ್ನು ನಂಬಿ 99 ಲಕ್ಷ ರೂ ಕಳೆದುಕೊಂಡ ಯುವಕ – ಹೀಗೂ ಯಾಮಾರಿಸ್ತಾರ..!!!??

99 ಲಕ್ಷ ರೂ ಕಳೆದುಕೊಂಡ ಯುವಕ – ಹೀಗೂ ಯಾಮಾರಿಸ್ತಾರ ಯುವಕನೊಬ್ಬನಿಗೆ ಹುಡುಗಿ ಹೆಸರಿನಲ್ಲಿ 99 ಲಕ್ಷ ರೂಪಾಯಿ ವಂಚನೆ ಮಾಡಿದ ಸಂಬಂಧ ಶಿವಮೊಗ್ಗದ ಸಿಇಎನ್​ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್ ದಾಖಲಾಗಿದೆ.  ಘಟನೆಯ ಹಿನ್ನಲೆ : ಶಿವಮೊಗ್ಗ ನಗರದ ಯುವಕನೊಬ್ಬ ಏಪ್ರಿಲ್ ತಿಂಗಳಿನಲ್ಲಿ ಮದುವೆ ಮ್ಯಾಟ್ರಿಮೋನಿ ಆ್ಯಪ್​ವೊಂದರಲ್ಲಿ ಒಬ್ಬಾಕೆಯ ಪ್ರೊಫೈಲ್​ ನೋಡಿ ಅವರೊಂದಿಗೆ ಚಾಟ್ ಆರಂಭಿಸಿದ್ದರು. ಪರಸ್ಪರ ಪರಿಚಯ ಮಾಡಿಕೊಂಡು ಮಾತುಕತೆ ಮುಂದುವರಿಸಿದ್ದಾರೆ. ಈ ನಡುವೆ ಯುವತಿಯು ತನ್ನ ಹೆಸರನ್ನ ಸ್ವಪ್ನ ಅಂತ ತಿಳಿಸಿ ಯುವಕನೊಂದಿಗೆ ಸಲುಗೆ…

Read More

ವಾಟ್ಸಾಪ್‌ನಲ್ಲಿ ಹೊಸ ಕ್ರಾಂತಿ – ವಾಟ್ಸಾಪ್ ಚಾನಲ್ಸ್ ಆರಂಭಿಸಿದ ಮೋದಿ, ಸಿದ್ದರಾಮಯ್ಯ!Whatsup channel

ನಮ್ಮ ಪೋಸ್ಟ್ ಮ್ಯಾನ್ ನ್ಯೂಸ್(POSTMAN NEWS) ನ ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಿ! ಇಲ್ಲಿ ನೀವು ಸೇಫ್​,, ನಿಮ್ಮ ನಂಬರ್ ಕೂಡ ಸೇಫ್​! ಯಾರಿಗೂ ತಿಳಿಯದು ನಿಮ್ಮ ವಿವರ! ಯಾವಾಗ ಬೇಕಾದರು  ಸುದ್ದಿ ಓದಿ, ವಾಟ್ಸಾಪ್ ಆಪ್ ಅಪ್ಡೇಟ್ ಮಾಡಿದ್ದಲ್ಲಿ ಈ ಕೆಳಗಿನ ಲಿಂಕ್​ ಕ್ಲಿಕ್ ಮಾಡಿ – ಬಲಬದಿಯಲ್ಲಿರುವ follow ಬಟನ್ ಕ್ಲಿಕ್ ಮಾಡಿ.. https://whatsapp.com/channel/0029Va9PbPU4Y9ltDSrECN0A ವಾಟ್ಸಾಪ್‌ (Whatsapp) ಬಳಕೆದಾರರು ಈಗಾಗಲೇ ಸಾಕಷ್ಟು ವಿವಿಧ ಫೀಚರ್ಸ್ ಮೂಲಕ ಹೊಸ ಹೊಸ ಸೇವೆ ಪಡೆಯುತ್ತಿದ್ದಾರೆ. ಈ ನಡುವೆ…

Read More

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ – ಚಾಲಕ ಸ್ಥಳದಲ್ಲಿಯೇ ಸಾವು|accident

ಸಾಗರ : ಹೆಂಚು ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ ಹೊಡೆದ ಪರಿಣಾ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ವರದಿಯಾಗಿದೆ. ಕುಂದಾಪುರದಿಂದ ಹೆಂಚು ತುಂಬಿಕೊಂಡು ಸಾಗರ ಮಾರ್ಗವಾಗಿ ಸೊರಬ ಕಡೆ ಹೊರಟಿದ್ದ ಲಾರಿ ಮರಸ ಗ್ರಾಮದ ಸಮೀಪ ಉರುಳಿ ಬಿದ್ದಿದೆ ಎನ್ನಲಾಗಿದೆ. ಘಟನೆಯಲ್ಲಿ ಲಾರಿ ಚಾಲಕ ಸೊರಬ ತಾಲೂಕಿನ ಮನ್ಸೂಬ್ ಖಾನ್ (41) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಸ್ಥಳೀಯರು ತಿಳಿಸಿದ್ದು, ಸ್ಥಳಕ್ಕೆ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್…

Read More

ಜಾಮೀನು ಸಿಕ್ಕರೂ ಜೈಲಿನಿಂದ ಹೊರಬರದ ಆರೋಪಿಗಳು – ಯಾಕೆ ಗೊತ್ತಾ..???|Shivamogga news

ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿದವರು ತಮಗೆ ಯಾವಾಗ ಬೇಲ್ ಸಿಗತ್ತೆ, ನಾವು ಯಾವಾಗ ಜೈಲಿನಿಂದ ಹೊರಗಡೆ ಹೋಗ್ತೀವಿ ಅಂತಾ ಕಾಯುತ್ತಿರುತ್ತಾರೆ, ಆದರೆ, ಇದೀಗ ಜಾಮೀನು ಮಂಜೂರಾದ್ರೂ ಕೂಡ ಜೈಲಿನಿಂದ ಹೊರಬರಲು ಆರೋಪಿಗಳು ಹಿಂದೇಟು ಹಾಕುತ್ತಿದ್ದಾರೆ. ಯಾವಾಗ ಬರ್ತೀರಾ ಅಂದ್ರೆ ಈ ಗಣೇಶ ಚತುರ್ಥಿ ಮುಗೀಲಿ ಆಮೇಲೆ ಬಂದರಾಯಿತು ಎನ್ನುತ್ತಿದ್ದಾರೆ. ಯಾವುದೇ ವ್ಯಕ್ತಿ ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ರೆ ಮೊದಲು ಅವರು ಮಾಡುವುದೇ ಒಳ್ಳೆಯ ವಕೀಲರನ್ನು ಹಿಡಿದು, ಕೇಳಿದಷ್ಟು ಹಣ ಕೊಟ್ಟು ಜಾಮೀನು ಪಡೆಯುವ ಕೆಲಸ. ಈ ಮೂಲಕ…

Read More

ಲಿವಿಂಗ್​ ರಿಲೇಶನ್​ಶಿಪ್​ನಲ್ಲಿದ್ದ ಮಹಿಳೆ ಕೊಲೆ – ಆರೋಪಿ ಪ್ರಿಯಕರ ಬಂಧನ|arrested

ಲಿವಿಂಗ್​ ರಿಲೇಶನ್​ಶಿಪ್​ನಲ್ಲಿದ್ದ ಮಹಿಳೆ ಕೊಲೆ – ಆರೋಪಿ ಪ್ರಿಯಕರ ಬಂಧನ ಶಿವಮೊಗ್ಗ – ಸಹ ಜೀವನ ನಡೆಸುತ್ತಿದ್ದ ಮಹಿಳೆಯನ್ನು ಪ್ರಿಯಕರನೇ ಹತ್ಯೆಗೈದಿರುವ ಘಟನೆ ಜಿಲ್ಲೆಯ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಕ್ಲಿಪುರ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಮೂಲತಃ ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ನಿವಾಸಿಯಾದ ರೂಪಾ(30) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಸಿಂಗೇರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ರೂಪಾಳ ಪತಿ ಕಳೆದ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಇವರು ಇಲ್ಲಿನ ನೀಲಗಿರಿ ತೋಪಿನಲ್ಲಿ ಕಟಾವು ಕೆಲಸ…

Read More

ಪ್ರೀತಿಸಿ ಮದುವೆಯಾದ ಏಳೇ ತಿಂಗಳಲ್ಲಿ ಯುವತಿ ಅನುಮಾನಸ್ಪದವಾಗಿ ಸಾವು|

ಪ್ರೀತಿಸಿ ಮದುವೆಯಾದ ಏಳೇ ತಿಂಗಳಲ್ಲಿ ಯುವತಿ ಸಾವು, ಇಷ್ಟಪಟ್ಟು ಪ್ರೀತಿ ಮದುವೆಯಾದ ಏಳೇ ತಿಂಗಳಿಗೆ ನವವಿವಾಹಿತೆ ಅನುಮಾಸ್ಪದವಾಗಿ ಮೃತಪಟ್ಟಿದ್ದಾಳೆ. ಗಣಪತಿ ಹಬ್ಬಕ್ಕೆಂದು ತವರು ಮನೆಗೆ ಹೋದ್ದಾಕೆಯನ್ನು ಪತಿ ರಾತ್ರೋರಾತ್ರಿ ಶಿವಮೊಗ್ಗ ತಾಲೂಕಿನ ಹರಿಗೆ ಗ್ರಾಮದಲ್ಲಿ ತನ್ನ ನಿವಾಸಕ್ಕೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಏನಾಯ್ತೋ ಏನೋ ನವವಿವಾಹಿತೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಜೀವಬಿಟ್ಟಿದ್ದಾಳೆ.  ಪ್ರೀತಿಸಿ ಮದುವೆಯಾದ  ಏಳೇ ತಿಂಗಳಿಗೆ ನವವಿವಾಹಿತೆ ಅನುಮಾನಸ್ಪದ ಸಾವನ್ನಪ್ಪಿದ್ದಾಳೆ. ಶಿವಮೊಗ್ಗದ ಎನ್ ಟಿ ರಸ್ತೆಯ ಶಾರದಾ ನಗರದ ನವವಿವಾಹಿತೆ ನಮಿತಾ (22) ಮೃತಪಟ್ಟಿದ್ದು, ಗಣೇಶ…

Read More

ಚೈತ್ರಾ ಕುಂದಾಪುರ ಟಿಕೆಟ್ ಡೀಲ್ ಪ್ರಕರಣ – ಗಗನ್ ಕಡೂರೊಂದಿಗೆ ಶಿವಮೊಗ್ಗದಲ್ಲಿ ಸಿಸಿಬಿ ಮಹಜರ್|ccb

ಚೈತ್ರಾ ಕುಂದಾಪುರ ಟಿಕೆಟ್ ಡೀಲ್ ಪ್ರಕರಣ – ಗಗನ್ ಕಡೂರೊಂದಿಗೆ  ಶಿವಮೊಗ್ಗದಲ್ಲಿ ಸಿಸಿಬಿ ಮಹಜರ್| ಶಿವಮೊಗ್ಗ : ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿಯಿಂದ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಚೈತ್ರಾ ಕುಂದಾಪುರ ಮತ್ತು ತಂಡದಲ್ಲಿ ಗುರುತಿಸಿಕೊಂಡಿದ್ದ ಗಗನ್ ಕಡೂರು ಇವರನ್ನು ಸಿಸಿಬಿ ಪೋಲೀಸರು ಇಂದು ಶಿವಮೊಗ್ಗಕ್ಕೆ ಕರೆತಂದು ನಗರದ ಮಥುರಾ ಸೆಂಟ್ರಲ್ ಬಳಿ ಹಾಗು ಜಿ.ಎಸ್.ಕೆ.ಎಮ್ ರಸ್ತೆಯ ಸುತ್ತಮುತ್ತ ಕೆಲ ಸ್ಥಳಗಳಲ್ಲಿ ಮಹಜರು ನಡೆಸಿದ್ದಾರೆ. ಗಗನ್ ಕಡೂರು ಶಿವಮೊಗ್ಗ ನಗರದಲ್ಲಿ ಉದ್ಯಮಿಯಿಂದ 50ಲಕ್ಷ ರೂಪಾಯಿಗಳನ್ನು…

Read More

ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದಲ್ಲಿ ಗಣಪತಿ ಪ್ರತಿಷ್ಟಾಪನಾ ಪೂಜೆ|moolegadde

ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದಲ್ಲಿ ಗಣಪತಿ ಪ್ರತಿಷ್ಟಾಪನಾ ಪೂಜೆ ರಿಪ್ಪನ್‌ಪೇಟೆ;-ಗಣಪತಿಯು ಜನಸಾಮಾನ್ಯರ ದೇವತೆ.ಗಣಪತಿ ಕೇವಲ ಒಂದು ಪಂಥದ ದೇವರಾಗದೆ ಎಲ್ಲಾ ಪಂಥದವರ ಪೂಜೆಯನ್ನು ಸ್ವೀಕರಿಸುವ ಭಗವಂತನಾದ. ಭಕ್ತರು ಗಣಪತಿಯನ್ನು ಅನೇಕ ರೂಪಗಳಲ್ಲಿ ಪೂಜಿಸುತ್ತಾ ತಮ್ಮ ಭಕ್ತಿಯ ಪರಾಕಾಷ್ಟತೆಯನ್ನು ಸಮರ್ಪಿಸುತ್ತಾ ಬಂದಿದ್ದಾರೆಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿ ಹೇಳಿದರು.  ಮೂಲೆಗದ್ದೆ ಸದಾನಂದಶಿವಯೋಗಾಶ್ರಮದಲ್ಲಿ ಗಣೇಶ ಚತುರ್ಥಿಯಂದು ಗಣಪತಿ ಪ್ರತಿಷ್ಟಾಪನೆ ನೆರವೇರಿಸಿ ಆಶೀರ್ವಚನ ನೀಡಿ ಸ್ವಾತಂತ್ರö್ಯಕ್ಕಾಗಿ ಹೋರಾಟ ನಡೆಸುವ ಸಂದರ್ಭದಲ್ಲಿ ಜನರನ್ನು ಒಂದಡೇ ಸೇರಿಸುವ ಉದ್ದೇಶದಿಂದಾಗಿ ನಮ್ಮ ಪೂರ್ವಿಕರು ಗಣೇಶ…

Read More

ವರಪ್ರದಾಯಿನಿ ಕಳಸೆ ಗೌರಿ ಹೊಂಡದ ಗೌರಿಮಾತೆಗೆ ಮುತ್ತೈದೆಯರಿಂದ ಬಾಗಿನ ಸಮರ್ಪಣೆ|rpet news

ಬೇಡಿದ ವರವನ್ನು ವರ್ಷದೊಳಗೆ ಪೂರ್ಣಗೊಳಿಸುವ ಮಹಾತಾಯಿ;- “ವರಪ್ರದಾಯಿನಿ ಕಳಸೆ ಗೌರಿ ಹೊಂಡದ ಗೌರಿಮಾತೆಗೆ ಮುತ್ತೈದೆಯರಿಂದ ಬಾಗಿನ ಸಮರ್ಪಣೆ’’ ರಿಪ್ಪನ್‌ಪೇಟೆ;-ಪುರಾತನ ಕಾಲದ ದೇವಾಲಯಗಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಮೂಲಧಾರಗಳು ಹಾಗೆಯೇ ಅಲ್ಲಿ ವಾಸಿಸಿದ ಋಷಿಮುನಿಗಳು ಶಿವಯೋಗ್ಯವರೇಣ್ಯರು ತಮ್ಮ ಪವಾಡ-ಪೂಜೆಗಳಿಂದ ಆಯಾ ಭಾಗದ ಕ್ಷೇತ್ರಗಳನ್ನು ಪಾವನಗೊಲಿಸಿ ಜಗದಿಂದ ಮರೆಯಾಗಿ ಹೋಗಿದ್ದಾರೆ.ಅಂತಹ ಸಾಧಕರ ಪಾದಸ್ಫರ್ಶದ ಸ್ಥಳಗಿಳಿಂದು ಪ್ರಚಾರವಿಲ್ಲದೆ.ಮೂಲೆಗುಂಪಾಗುತ್ತಾ ಎಷ್ಟೋ ಪ್ರಮುಖ ಇತಿಹಾಸವೂಳ್ಳ ದೇವಸ್ಥಾನಗಳು ಮತ್ತು ಧಾರ್ಮಿಕ ಪವಾಡದ ಹಲವು ಗುಹೆಗಳು ಆಳಿಯುವಂತಾಗಿರುವುದು ಕಾಣಬಹುದಾಗಿದ್ದರೂ ಕೂಡಾ ಅಳಿದುಳಿದಿರುವ ಕೆಲವು ಪ್ರಮುಖ ಧಾರ್ಮಿಕ ಕೇಂದ್ರಗಳಲೊಂದಾದ…

Read More

ಆನಂದಪುರ : ಕಾಲುಜಾರಿ ಕೆರೆಗೆ ಬಿದ್ದು ರೈತ ಸಾವು|ಗಣಪತಿ ವಿಸರ್ಜನೆ ವೇಳೆಯಲ್ಲಿ ನಡೆಯಿತಾ ಅವಘಡ..?? ಜೆಡಿಸರದಲ್ಲಿ ಇಷ್ಟಕ್ಕೂ ನಡೆದಿದ್ದೇನು|Farmers death

ಆನಂದಪುರ : ಕಾಲುಜಾರಿ ಕೆರೆಗೆ ಬಿದ್ದು ರೈತ ಸಾವು|ಗಣಪತಿ ವಿಸರ್ಜನೆ ವೇಳೆಯಲ್ಲಿ ನಡೆಯಿತಾ ಅವಘಡ..?? ಜೆಡಿಸರದಲ್ಲಿ ಇಷ್ಟಕ್ಕೂ ನಡೆದಿದ್ದೇನು..?? ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಜೇಡಿಸರದ ಬಳಿಯಲ್ಲಿ ವ್ಯಕ್ತಿಯೊಬ್ಬರು ಎಮ್ಮೆಯನ್ನು ಹುಡುಕಿಕೊಂಡು ಕೆರೆ ಏರಿ ಮೇಲೆ ಹೋಗುತ್ತಿದ್ದಾಗ ಕಾಲುಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳೀಯ ನಿವಾಸಿ ಸತೀಶ್ ಗೌಡ(51) ಮೃತಪಟ್ಟ ದುರ್ಧೈವಿಯಾಗಿದ್ದಾರೆ.ಸತೀಶ್​ರವರು ಅಡುಗೆ ಕಂಟ್ರಾಕ್ಟ್ ಮಾಡುತ್ತಿದ್ದರು.  ತಮ್ಮ ಬಾವನ ಮನೆಯಲ್ಲಿ ಇಟ್ಟಿದ್ದ ಗಣಪತಿ ವಿಸರ್ಜನೆಗೆ ಅಂತಾ ತೆರಳಿದ್ದ  ವೇಳೇ ಕೆರೆಯ ಆಳ ನೋಡಲು ಹೋದ ಸಂದರ್ಭದಲ್ಲಿ…

Read More