KGF 2 ಚಲನಚಿತ್ರವನ್ನು ಶಿವಮೊಗ್ಗದಲ್ಲಿ ನೋಡಿಕೊಂಡು ಹಿಂದಿರುಗುತ್ತಿದ್ದ ಬೈಕ್ ಭದ್ರಾವತಿ ಬಳಿ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.
ನಿನ್ನೆ ಸಂಜೆ kgf2 ಚಿತ್ರ ನೋಡಲು ಎನ್ ಆರ್ ಪುರದಿಂದ ಶಿವಮೊಗ್ಗಕ್ಕೆ ಬಂದಿದ್ದ ಇಬ್ಬರು ಸ್ನೇಹಿತರು ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ.
ನಿನ್ನೆ ಸಂಜೆ kgf2 ಚಿತ್ರ ನೋಡಲು ಎನ್ ಆರ್ ಪುರದಿಂದ ಶಿವಮೊಗ್ಗಕ್ಕೆ ಬಂದಿದ್ದ ಇಬ್ಬರು ಸ್ನೇಹಿತರು ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ.
ಎನ್ ಆರ್ ಪುರ ನಿವಾಸಿ ಶಿವಕುಮಾರ್(28) ಮೃತ ದುರ್ದೈವಿಯಾಗಿದ್ದು ಆತನ ಸ್ನೇಹಿತ ಎನ್ ಆರ್ ಪುರ ವಾಸಿ ಮನೋಜ್ ಎಂಬುವವನಿಗೂ ಸಹ ಗಂಭೀರ ಗಾಯಗಳಾಗಿದ್ದು ಎನ್ ಆರ್ ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಸಂಜೆ ಕೆ ಎ 01 ಹೆಚ್ 4896 ನಂಬರಿನ ಕೆ ಟಿ ಎಂ ಡೂಕ್ ಬೈಕಿನಲ್ಲಿ ಶಿವಕುಮಾರ ಎಂಬುವವನು ಹಿಂಬದಿಯಲ್ಲಿ ಸ್ನೇಹಿತ ಮನೋಜಕುಮಾರ ರವರನ್ನು ಕೂರಿಸಿಕೊಂಡು ಎನ್ ಆರ್ ಪುರದಿಂದ ಶಿವಮೊಗಕ್ಕೆ KGF2 ಪಿಲ್ಮಂನ್ನು ನೋಡಲು ಹೋಗಿ ಚಿತ್ರ ನೋಡಿಕೊಂಡು ವಾಪಾಸ್ ಶಿವಮೊಗದಿಂದ ಎನ್ ಆರ್ ಪುರಕ್ಕೆ ಹೋಗುವಾಗ ಭದ್ರಾವತಿ-ಉಂಬಳೆಬೈಲು ರಾಜ್ಯ ಹೆದ್ದಾರಿ ಟಾರ್ ರಸ್ತೆಯಲ್ಲಿ ಭದ್ರಾವತಿ ತಾಲೂಕ್ ಗೊಂಧಿ ಸರ್ಕಲ್ ದಾಟಿದ ನಂತರ ಹೆಚ್ ಕೆ ಜಂಕ್ಷನ ಕಡೆಗೆ ಹೋಗುವ ರಸ್ತೆಯ ಇಳಿಜಾರಿನಲ್ಲಿ ಇಂದು ಬೆಳಗಿನ ಜಾವ 01.00 ಗಂಟೆಗೆ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುವಾಗ ಬೈಕ್ ಶಿವಕುಮಾರನ ನಿಯಂತ್ರಣಕ್ಕೆ ಸಿಗದೆ ರಸ್ತೆಯ ಎಡಬದಿಯ ಹಳ್ಳಕ್ಕೆ ಬೈಕ್ ಸಮೇತ ಬಿದ್ದು, ಇದರಿಂದ ಶಿವಕುಮಾರ ತಲೆಗೆ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕಿನಲಿ ಹಿಂಬದಿ ಕುಳಿತ್ತಿದ್ದ ಮನೋಜಕುಮಾರನ ಎಡಭಾಗದ ತೊಡೆಗೆ ಗಂಭೀರ ಗಾಯವಾಗಿದೆ.ಹೆಲ್ಮೆಟ್ ಧರಿಸಿದಿದ್ದಲ್ಲಿ ಅಪಘಾತ ಇಷ್ಟೊಂದು ಗಂಭೀರ ರೀತಿಯಲ್ಲಿ ನಡೆಯುತ್ತಿರಲಿಲ್ಲ.
ನಿನ್ನೆ ಸಂಜೆ ಕೆ ಎ 01 ಹೆಚ್ 4896 ನಂಬರಿನ ಕೆ ಟಿ ಎಂ ಡೂಕ್ ಬೈಕಿನಲ್ಲಿ ಶಿವಕುಮಾರ ಎಂಬುವವನು ಹಿಂಬದಿಯಲ್ಲಿ ಸ್ನೇಹಿತ ಮನೋಜಕುಮಾರ ರವರನ್ನು ಕೂರಿಸಿಕೊಂಡು ಎನ್ ಆರ್ ಪುರದಿಂದ ಶಿವಮೊಗಕ್ಕೆ KGF2 ಪಿಲ್ಮಂನ್ನು ನೋಡಲು ಹೋಗಿ ಚಿತ್ರ ನೋಡಿಕೊಂಡು ವಾಪಾಸ್ ಶಿವಮೊಗದಿಂದ ಎನ್ ಆರ್ ಪುರಕ್ಕೆ ಹೋಗುವಾಗ ಭದ್ರಾವತಿ-ಉಂಬಳೆಬೈಲು ರಾಜ್ಯ ಹೆದ್ದಾರಿ ಟಾರ್ ರಸ್ತೆಯಲ್ಲಿ ಭದ್ರಾವತಿ ತಾಲೂಕ್ ಗೊಂಧಿ ಸರ್ಕಲ್ ದಾಟಿದ ನಂತರ ಹೆಚ್ ಕೆ ಜಂಕ್ಷನ ಕಡೆಗೆ ಹೋಗುವ ರಸ್ತೆಯ ಇಳಿಜಾರಿನಲ್ಲಿ ಇಂದು ಬೆಳಗಿನ ಜಾವ 01.00 ಗಂಟೆಗೆ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುವಾಗ ಬೈಕ್ ಶಿವಕುಮಾರನ ನಿಯಂತ್ರಣಕ್ಕೆ ಸಿಗದೆ ರಸ್ತೆಯ ಎಡಬದಿಯ ಹಳ್ಳಕ್ಕೆ ಬೈಕ್ ಸಮೇತ ಬಿದ್ದು, ಇದರಿಂದ ಶಿವಕುಮಾರ ತಲೆಗೆ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕಿನಲಿ ಹಿಂಬದಿ ಕುಳಿತ್ತಿದ್ದ ಮನೋಜಕುಮಾರನ ಎಡಭಾಗದ ತೊಡೆಗೆ ಗಂಭೀರ ಗಾಯವಾಗಿದೆ.ಹೆಲ್ಮೆಟ್ ಧರಿಸಿದಿದ್ದಲ್ಲಿ ಅಪಘಾತ ಇಷ್ಟೊಂದು ಗಂಭೀರ ರೀತಿಯಲ್ಲಿ ನಡೆಯುತ್ತಿರಲಿಲ್ಲ.
ಶಿವಕುಮಾರನ ಮೃತ ದೇಹ ಭದ್ರಾವತಿ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿದ್ದು, ಮನೋಜಕುಮಾರನಿಗೆ ಎನ್ ಪುರಕ್ಕೆ ಚಿಕಿತ್ಸೆಗೆ ಕಳುಹಿಸಿಕೊಡಲಾಗಿದೆ.
ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.