Headlines

ಮಗುವಿನ ಪ್ರಥಮ ವರ್ಷದ ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಶರಣಾದ ರಿಪ್ಪನ್‌ಪೇಟೆ ಮೂಲದ ಮಹಿಳೆ : ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರು|Ripponpet

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕಾರಗೋಡು ಗ್ರಾಮದ ಮಹಿಳೆ ಆಲಗೇರಿ ಮಂಡ್ರಿ ಸಮೀಪದ ಗಂಟಿನಕೊಪ್ಪ ಗ್ರಾಮದ ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕಾರಗೋಡು ಗ್ರಾಮದ ಆಟೋ ಕೃಷ್ಣ ರವರ ಪುತ್ರಿ ಐಶ್ವರ್ಯ (22) ಮೃತಪಟ್ಟ ದುರ್ಧೈವಿಯಾಗಿದ್ದಾರೆ.


ರಿಪ್ಪನ್‌ಪೇಟೆ ಸಮೀಪದ ಕಾರಗೋಡು ಗ್ರಾಮದ ನಿವಾಸಿ ಆಟೋ ಕೃಷ್ಣ ರವರ ಪುತ್ರಿ ಐಶ್ವರ್ಯ ವಿವಾಹ ಎರಡು ವರ್ಷಗಳ ಹಿಂದೆ ಆಲಗೇರಿ ಮಂಡ್ರಿ ಸಮೀಪದ ಗಂಟಿನಕೊಪ್ಪ ಗ್ರಾಮದ ಚಂದ್ರಶೇಖರ್ ಎಂಬುವವರ ಜೊತೆ ನಡೆದಿತ್ತು.

ಮೃತ ಮಹಿಳೆಯ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬದ ದಿನದಂದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕುಟುಂಬ :

ಐಶ್ವರ್ಯ  ಪತಿ ಚಂದ್ರಶೇಖರ್ ಮಧ್ಯವ್ಯಸನಿಯಾಗಿದ್ದು ಕುಡಿದ ಮತ್ತಿನಲ್ಲಿ ಪತ್ನಿ ಜತೆ ವಿಪರೀತ ಜಗಳ ಮಾಡುತಿದ್ದ, ಗಲಾಟೆ ವಿಕೋಪಕ್ಕೆ ತಿರುಗಿ ಪರಿಣಾಮ ಐಶ್ವರ್ಯ ಸಾವನ್ನಪ್ಪಿರುವ ಬಗ್ಗೆ ಅನುಮಾನವಿದೆ ಎಂದು ಮೃತಳ ತಂದೆ ಸಾಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.


ಪ್ರೀತಿಸಿ ಮದುವೆಯಾಗಿದ್ದ ಐಶ್ವರ್ಯ: 

ಕಾರಗೋಡು ಗ್ರಾಮದ ಐಶ್ವರ್ಯ ಹಾಗೂ ಆಲಗೇರಿ ಮಂಡ್ರಿ ಸಮೀಪದ ಗಂಟಿನಕೊಪ್ಪ ಗ್ರಾಮದ ಚಂದ್ರಶೇಖರ್ ಕಳೆದ ಎರಡು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು

About The Author

Leave a Reply

Your email address will not be published. Required fields are marked *