ಅರಸಾಳಿನಿಂದ ವಿಶ್ವ ವೇದಿಕೆಗೆ; ಕವನಶ್ರೀಗೆ ಸತತ ಮೂರನೇ ಗಿನ್ನಿಸ್ ಸಾಧನೆ
Arasalu’s Kavanasree H.M. earns two more Guinness World Records as part of Mother India’s Crochet Queens team, taking her total to three Guinness World Records.
ರಿಪ್ಪನ್ ಪೇಟೆ : ಅರಸಾಳು ಗ್ರಾಮದ ಕವನಶ್ರೀ ಹೆಚ್.ಎಂ. ಅವರು ‘ಮದರ್ ಇಂಡಿಯಾಸ್ ಕ್ರೋಶೆ ಕ್ವೀನ್ಸ್’ (Mother India’s Crochet Queens) ತಂಡದ ಸದಸ್ಯೆಯಾಗಿ ಭಾಗವಹಿಸಿ ಮತ್ತೆರಡು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಗಳಿಗೆ ಪಾತ್ರರಾಗಿದ್ದಾರೆ.
ಸೆಪ್ಟೆಂಬರ್ 6ರಂದು ಚೆನ್ನೈನ ಎಸ್.ಆರ್.ಎಂ. ಆಡಿಟೋರಿಯಂನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ Largest Display of Crochet Ponchos ಹಾಗೂ Largest Display of Crochet Caps ವಿಭಾಗಗಳಿಗಾಗಿ ಮಾದರಿಗಳನ್ನು ಪ್ರದರ್ಶಿಸಲಾಯಿತು. MICQ ತಂಡವು ಒಟ್ಟು 5,500 ಕ್ರೋಶೆ ಪೊಂಚೋಸ್ ಮತ್ತು 12,211 ಕ್ರೋಶೆ ಕ್ಯಾಪ್ಸ್ಗಳ ಮಾದರಿಗಳನ್ನು ಪ್ರದರ್ಶಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ.
ಈ ತಂಡದ ಭಾಗವಾಗಿದ್ದ ಅರಸಾಳಿನ ಕವನಶ್ರೀ ಅವರು ಈ ಎರಡು ದಾಖಲೆಗಳ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಮಾಣಪತ್ರಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಕವನಶ್ರೀ ಅವರು ಸತತವಾಗಿ ಮೂರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಗಳ ಪ್ರಮಾಣಪತ್ರ ಪಡೆದ ಸಾಧನೆ ಮಾಡಿದ್ದಾರೆ.
ಕಳೆದ ವರ್ಷವೂ ಚೆನ್ನೈನ ಎಸ್.ಆರ್.ಎಂ. ಆಡಿಟೋರಿಯಂನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಕವನಶ್ರೀ ಅವರು ‘ಮದರ್ ಇಂಡಿಯಾಸ್ ಕ್ರೋಶೆ ಕ್ವೀನ್ಸ್’ ತಂಡದೊಂದಿಗೆ 1,00,581 ಕ್ರೋಶೆ ಸ್ಕ್ವೇರ್ ಮಾದರಿಗಳನ್ನು ತಯಾರಿಸುವ ವಿಶ್ವದಾಖಲೆಯಲ್ಲಿ ಭಾಗಿಯಾಗಿದ್ದರು.
ಪ್ರಸ್ತುತ M.Sc. in Fashion Apparel Design ವ್ಯಾಸಂಗ ಮಾಡುತ್ತಿರುವ ಕವನಶ್ರೀ, ತಮ್ಮ ಕ್ರೋಶೆ ಕಲೆ ಮತ್ತು ವಿನ್ಯಾಸ ಕೌಶಲ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ.
ಕವನಶ್ರೀ ಕೋಟೆತಾರಿಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ದಿ|| ಮಂಜಯ್ಯ ಟಿ. ಹಾಗೂ ಅರಸಾಳು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಕುಸುಮಾವತಿ ಅವರ ಪುತ್ರಿ.
MICQ ತಂಡವು ವಿಶ್ವದಾಖಲೆ ನಿರ್ಮಿಸುವುದರ ಜೊತೆಗೆ ತಯಾರಿಸಿದ ಕ್ಯಾಪ್ಸ್ ಮತ್ತು ಪೊಂಚೋಸ್ಗಳನ್ನು ಬುಡಕಟ್ಟು ಸಮುದಾಯಕ್ಕೆ (Tribal Community) ದಾನ ಮಾಡುವ ಕಾರ್ಯವನ್ನೂ ಕೈಗೊಂಡಿದೆ.
ಕವನಶ್ರೀಯ ಸಾಧನೆಗೆ ಅರಸಾಳು ಗ್ರಾಮದ ಜನರು ಸಂತಸ ವ್ಯಕ್ತಪಡಿಸಿದ್ದು, ಗ್ರಾಮದ ಕೀರ್ತಿಯನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಹೆಚ್ಚಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ತಂದೆಯ ಪ್ರೋತ್ಸಾಹ, ತಾಯಿಯ ಆಶಯ ಹಾಗೂ ಕವನಶ್ರೀಯ ಪರಿಶ್ರಮ ಈ ಸಾಧನೆಯ ಹಿಂದೆ ಪ್ರಮುಖ ಪಾತ್ರ ವಹಿಸಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಕೋಡೂರಿನಲ್ಲಿ ಅಗ್ನಿ ಅವಘಡ: ಸರ್ವಸ್ವ ಕಳೆದುಕೊಂಡ ಕಾರ್ಮಿಕನಿಗೆ ಕಟ್ಟಡ ಕಾರ್ಮಿಕರ ಸಂಘದ ಆಸರೆ A fire caused by a…
ರಿಪ್ಪನ್ ಪೇಟೆಯಲ್ಲಿ ಸರ್ಕಾರಿ ಜಾಗದ ಬೇಲಿ ತೆರವು; ಹಕ್ಕುಪತ್ರ–9/11 ದಾಖಲೆ ಕುರಿತು ವಾಗ್ವಾದ Revenue officials removed a fence…
ರಿಪ್ಪನ್ಪೇಟೆಯಲ್ಲಿ ಮೋದಿ ಜನ್ಮದಿನಾಚರಣೆ : ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ Special pooja was offered at Varasiddhi…
ಪ್ರಧಾನಿ ಮೋದಿ ಜನ್ಮದಿನ: ಶಿವಮೊಗ್ಗದಲ್ಲಿ ‘ಸೇವಾ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ BJP launches a month-long Seva Sankalpa Abhiyan…
ಮೋದಿ ಹುಟ್ಟುಹಬ್ಬ ‘ನಿರುದ್ಯೋಗಿಗಳ ದಿನ’ವಾಗಿ ಆಚರಣೆ; ಯುವ ಕಾಂಗ್ರೆಸ್ ಪ್ರತಿಭಟನೆ Youth Congress and NSUI workers in Shivamogga…
ಶಿವಮೊಗ್ಗ ಲೋಕಾಯುಕ್ತ ಎಸ್ಪಿಯಾಗಿ ಆಂಟನಿ ಜಾನ್ ನೇಮಕ Anthony John has been appointed as the new Lokayukta…