ಕೋಡೂರಿನಲ್ಲಿ ಅಗ್ನಿ ಅವಘಡ: ಸರ್ವಸ್ವ ಕಳೆದುಕೊಂಡ ಕಾರ್ಮಿಕನಿಗೆ ಕಟ್ಟಡ ಕಾರ್ಮಿಕರ ಸಂಘದ ಆಸರೆ
A fire caused by a suspected short circuit damaged construction worker Sanjeev’s house in Koduru, Hosanagara taluk. The Sri Ramalingeshwara Construction Workers Association provided financial assistance to the affected family.
ರಿಪ್ಪನ್ ಪೇಟೆ : ಕೋಡೂರು ಗ್ರಾಮದ ಬಡ ಕಟ್ಟಡ ಕಾರ್ಮಿಕ ಸಂಜೀವ (ಗಾರೆ ಸಂಜು) ಅವರ ಬದುಕು ಮಂಗಳವಾರ ರಾತ್ರಿ ಕ್ಷಣಮಾತ್ರದಲ್ಲಿ ಅಗ್ನಿಗಾಹುತಿಯಾಗಿದೆ. ಕಷ್ಟಪಟ್ಟು ಕಟ್ಟಿದ್ದ ಸೂರು ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಈ ಸಂಕಷ್ಟದ ಸಮಯದಲ್ಲಿ ‘ಶ್ರೀ ರಾಮಲಿಂಗೇಶ್ವರ ಕಟ್ಟಡ ಕಾರ್ಮಿಕರ ಸಂಘ’ ನೊಂದ ಜೀವಕ್ಕೆ ಆಸರೆಯಾಗಿ ನಿಂತು ಅತ್ಯುತ್ತಮ ಮಾನವೀಯತೆ ಮೆರೆದಿದೆ.
ಕುಟುಂಬವು ಗಣೇಶೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ, ಕೀಳಂಬಿ ರಸ್ತೆಯಲ್ಲಿರುವ ಇವರ ಸ್ಲ್ಯಾಬ್ ಮನೆಯಲ್ಲಿ ರಾತ್ರಿ ಸುಮಾರು 8 ಗಂಟೆಗೆ ಈ ದುರಂತ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ತಪ್ಪಿದೆಯಾದರೂ, ಬೆಂಕಿಯ ತೀವ್ರತೆಗೆ ಮನೆಯೊಳಗಿದ್ದ ವಸ್ತುಗಳು ಹಾಗೂ ಕಟ್ಟಡ ಸಂಪೂರ್ಣವಾಗಿ ಹಾನಿಗೀಡಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಸರ್ವಸ್ವವನ್ನೂ ಕಳೆದುಕೊಂಡು ದಿಕ್ಕುತೋಚದೆ ಕಣ್ಣೀರಿಡುತ್ತಿದ್ದ ಸಂಜೀವ್ ಅವರ ಬಳಿಗೆ ಶ್ರೀ ರಾಮಲಿಂಗೇಶ್ವರ ಕಟ್ಟಡ ಕಾರ್ಮಿಕರ ಸಂಘದ ಹೊಸನಗರ ತಾಲೂಕು ಘಟಕದ ಪದಾಧಿಕಾರಿಗಳು ತಕ್ಷಣವೇ ಧಾವಿಸಿದರು. ಸಂಕಷ್ಟದಲ್ಲಿದ್ದ ತಮ್ಮ ಕಾರ್ಮಿಕ ಸಹೋದರನಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರಲ್ಲದೆ, ಸ್ಥಳದಲ್ಲೇ ಆರ್ಥಿಕ ನೆರವು ಹಸ್ತಾಂತರಿಸಿದರು. ಕಷ್ಟದ ಸಮಯದಲ್ಲಿ ಸಂಘವು ತೋರಿದ ಈ ಪ್ರಾಮಾಣಿಕ ಕಾಳಜಿ ಹಾಗೂ ನೆರವಿಗೆ ಬಡ ಕಾರ್ಮಿಕ ಸಂಜೀವ್ ಭಾವುಕರಾಗಿ ಕಣ್ಣೀರಿಟ್ಟ ಘಟನೆ ನೆರೆದವರ ಮನಕಲಕುವಂತಿತ್ತು.
ಈ ಅರ್ಥಪೂರ್ಣ ಹಾಗೂ ಮಾನವೀಯ ಕಾರ್ಯದಲ್ಲಿ ಸಂಘದ ಅಧ್ಯಕ್ಷರಾದ ಶೌಕತ್ ಆಲಿ (ರಿಪ್ಪನ್ಪೇಟೆ), ಪ್ರಧಾನ ಕಾರ್ಯದರ್ಶಿ ರಮೇಶ್ ಬಿ.ಆರ್., ಪದಾಧಿಕಾರಿಗಳಾದ ಜಗದೀಶ್, ಜಬಿ ಉಲ್ಲಾ ಹಾಗೂ ಕೋಡೂರು ಭಾಗದ ಪದಾಧಿಕಾರಿ ಪ್ರಕಾಶ್ ಉಪಸ್ಥಿತರಿದ್ದು, ನೊಂದ ಜೀವಕ್ಕೆ ಬೆನ್ನೆಲುಬಾಗಿ ನಿಂತರು.
ಅರಸಾಳಿನಿಂದ ವಿಶ್ವ ವೇದಿಕೆಗೆ; ಕವನಶ್ರೀಗೆ ಸತತ ಮೂರನೇ ಗಿನ್ನಿಸ್ ಸಾಧನೆ Arasalu's Kavanasree H.M. earns two more Guinness…
ರಿಪ್ಪನ್ ಪೇಟೆಯಲ್ಲಿ ಸರ್ಕಾರಿ ಜಾಗದ ಬೇಲಿ ತೆರವು; ಹಕ್ಕುಪತ್ರ–9/11 ದಾಖಲೆ ಕುರಿತು ವಾಗ್ವಾದ Revenue officials removed a fence…
ರಿಪ್ಪನ್ಪೇಟೆಯಲ್ಲಿ ಮೋದಿ ಜನ್ಮದಿನಾಚರಣೆ : ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ Special pooja was offered at Varasiddhi…
ಪ್ರಧಾನಿ ಮೋದಿ ಜನ್ಮದಿನ: ಶಿವಮೊಗ್ಗದಲ್ಲಿ ‘ಸೇವಾ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ BJP launches a month-long Seva Sankalpa Abhiyan…
ಮೋದಿ ಹುಟ್ಟುಹಬ್ಬ ‘ನಿರುದ್ಯೋಗಿಗಳ ದಿನ’ವಾಗಿ ಆಚರಣೆ; ಯುವ ಕಾಂಗ್ರೆಸ್ ಪ್ರತಿಭಟನೆ Youth Congress and NSUI workers in Shivamogga…
ಶಿವಮೊಗ್ಗ ಲೋಕಾಯುಕ್ತ ಎಸ್ಪಿಯಾಗಿ ಆಂಟನಿ ಜಾನ್ ನೇಮಕ Anthony John has been appointed as the new Lokayukta…