Headlines

ಹೊಸನಗರದಲ್ಲಿ ಹಿಟ್ ಅಂಡ್ ರನ್: ಪತಿ-ಪತ್ನಿ ಆಸ್ಪತ್ರೆಗೆ ದಾಖಲು

A bus owner and his wife were seriously injured after an unidentified bike hit their vehicle near Brahmeshwara in Hosanagar. Police have registered a hit-and-run case and launched a search for the rider.

Hosanagar accident, bike accident, hit and run case, KV Ravi, Geetha, y accident, Shivamogga news, road accident, Karnataka accident, bus owner injured, Anganwadi worker injured, police case, bike rider absconding

ಹೊಸನಗರ: ಹೊಸನಗರದಿಂದ ಬಾಣಿಗೆ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬಸ್ ಮಾಲೀಕರಾದ ದಂಪತಿಗೆ ಅಪರಿಚಿತ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗಳಾದ ಘಟನೆ ಬ್ರಹ್ಮೇಶ್ವರ ಸಮೀಪ ನಡೆದಿದೆ.

ಗಿರಿಜಾಂಭ ಬಸ್ ಮಾಲೀಕ (ಎಸ್.ಡಿ.ಪಿ) ಕೆ.ವಿ. ರವಿ ಹಾಗೂ ಅವರ ಪತ್ನಿ, ಅಂಗನವಾಡಿ ಕಾರ್ಯಕರ್ತೆ ಗೀತಾ ಗಾಯಗೊಂಡವರು. ಕಲ್ಲುಕೋರೆ ಭಾಗದ ಕಡೆಯಿಂದ ವೇಗವಾಗಿ ಬಂದ ಅಪರಿಚಿತ ಬೈಕ್ ಅವರ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ರವಿ ಹಾಗೂ ಗೀತಾ ಅವರಿಗೆ ತಲೆ, ಕೈ, ಕಾಲು ಮತ್ತು ಹೊಟ್ಟೆಯ ಕಿಬ್ಬೆಲುಬಿಗೆ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣ ಅವರನ್ನು ಹೊಸನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಬಳಿಕ ಅಪಘಾತಕ್ಕೆ ಕಾರಣವಾದ ಬೈಕ್ ಸವಾರ ಗಾಯಾಳುಗಳನ್ನು ಎತ್ತುವ ಪ್ರಯತ್ನವೂ ಮಾಡದೆ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದ್ದು, ಅಪಘಾತ ಎಸಗಿದ ಬೈಕ್ ಹಾಗೂ ಸವಾರನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

About The Author