ಸೇವಾಭಾವದಿಂದ ಮೂಡಿ ಬಂದ ‘ನಿಜವಾದ ಹಿಂದುತ್ವ’ಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಮಾದರಿ – ನಾಗೇಂದ್ರ ಜೋಗಿ

ಸೇವಾಭಾವದಿಂದ ಮೂಡಿ ಬಂದ ‘ನಿಜವಾದ ಹಿಂದುತ್ವ’ಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಮಾದರಿ – ನಾಗೇಂದ್ರ ಜೋಗಿ

ನಿಟ್ಟೂರು ಭಾಗದಲ್ಲಿ ಅಭಿವೃದ್ಧಿ ಚುರುಕು – ಶಾಸಕರ ಪ್ರಯತ್ನಕ್ಕೆ ಗ್ರಾಮಸ್ಥರಿಂದ ಕೃತಜ್ಞತೆ

ದೇವಸ್ಥಾನಗಳ ಅಭಿವೃದ್ದಿಗೆ ಕ್ಷೇತ್ರದಾದ್ಯಂತ ನಾಲ್ಕು ಕೋಟಿಗೂ ಹೆಚ್ಚು ಅನುದಾನ

ಸಾಗರ–ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಹಿಂದುತ್ವವನ್ನು ಕೇವಲ ರಾಜಕೀಯ ಘೋಷಣೆ ಅಥವಾ ಪ್ರಚಾರದ ರೂಪದಲ್ಲಿ ಆಚರಿಸುವವರಲ್ಲ, ಬದಲಾಗಿ ಅದನ್ನು ಹೃದಯಪೂರ್ವಕವಾಗಿ ಜೀವನದಲ್ಲಿ ಅಳವಡಿಸಿಕೊಂಡಿರುವ ಉದಾಹರಣೆಯಾಗಿದ್ದಾರೆ ಎಂದು ಕೆಡಿಪಿ ಸದಸ್ಯ ಹಾಗೂ ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಂದ್ರ ಜೋಗಿ ಪ್ರಶಂಸಿಸಿದ್ದಾರೆ.

ಹಿಂದೂ ಧರ್ಮದ ಶ್ರೇಯೋಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿರುವಂತೆಯೇ, ಉಳಿದ ಎಲ್ಲಾ ಧರ್ಮಗಳಿಗೆ ಅಗತ್ಯದ ಗೌರವ ಹಾಗೂ ಮಾನ್ಯತೆ ನೀಡುವ ಮಾನವೀಯ ನಿಲುವೇ ಶಾಸಕರ ವಿಭಿನ್ನತೆ ಎಂದೂ ಅವರು ಹೇಳಿದ್ದಾರೆ. “ಈ ಸಮಾಜ ಎಲ್ಲರದ್ದೂ. ಆದ್ದರಿಂದ ಪ್ರತಿಯೊಬ್ಬರ ಧರ್ಮ, ಸಂಪ್ರದಾಯ, ಆಚರಣೆಗಳಿಗೆ ಗೌರವ ನೀಡುವ ಧೋರಣೆ ಇರಬೇಕು — ಇದೇ ನಿಜವಾದ ಧರ್ಮಾಚರಣೆ” ಎಂಬ ಸಂದೇಶವನ್ನು ಶಾಸಕರು ತಮ್ಮ ನಡೆ–ನುಡಿಗಳ ಮೂಲಕ ತೋರಿಸಿದ್ದಾರೆ ಎಂದು ನಾಗೇಂದ್ರ ಜೋಗಿ ಹೇಳಿದರು.

“ಸಾಗರ–ಹೊಸನಗರ ಕ್ಷೇತ್ರದಲ್ಲಿ ಈಗಾಗಲೆ́ 60ಕ್ಕೂ ಹೆಚ್ಚು ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಲಾಗಿದೆ. ಒಳವಾಡೆಗಳಲ್ಲಿ ಇರುವ ಸಣ್ಣ ದೇವಾಲಯಗಳಿಂದ ಹಿಡಿದು ಇತಿಹಾಸ ಪ್ರಸಿದ್ಧ ಕೀರ್ತಿಸ್ಥಳಗಳಿಗೂ ಸಹ ಸಮಾನ ಪ್ರಾಮುಖ್ಯತೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಗಲ್ಲಿಗಲ್ಲಿಯಲ್ಲಿ ನಡೆಯುವ ಸಾರ್ವಜನಿಕ ಗಣಪತಿ ಉತ್ಸವಗಳಿಗೆ ಕೂಡ ವೈಯಕ್ತಿಕವಾಗಿ ಧನಸಹಾಯ ಮಾಡಿ, ಯುವಜನರ ಸಂಸ್ಕೃತಿ–ಸೇವಾ ಚಟುವಟಿಕೆಗಳಿಗೆ ಪ್ರೇರಣೆ ನೀಡಿದ್ದಾರೆ. ಹಿಂದುತ್ವ ಇವರಿಗೆ ಮಾತಿನ ಮಟ್ಟದಲ್ಲಲ್ಲ — ರಕ್ತದಲ್ಲಿ ಹರಿಯುವ ತತ್ತ್ವ.”ಈ ಹಿನ್ನೆಲೆಯಲ್ಲಿ, “ಗೋಪಾಲಕೃಷ್ಣ ಬೇಳೂರು ಅವರ ಹಿಂದುತ್ವವನ್ನು ಪ್ರಶ್ನಿಸುವ ನೈತಿಕ ಯೋಗ್ಯತೆ ಬಿಜೆಪಿ ಅಥವಾ ಬೇರೆ ಯಾರಿಗೂ ಇಲ್ಲ” ಎಂದು ಜೋಗಿ ಟೀಕಿಸಿದರು. “ನಂಬಿಕೆಯ ಮೇಲೆ ಮಾಡಿದ ಕೆಲಸ ಮಾತಿಗಿಂತ ದೊಡ್ಡದು ಎಂಬುದನ್ನು ಶಾಸಕರು ತಮ್ಮ ಶೈಲಿಯಿಂದ ಸಾಬೀತುಪಡಿಸಿದ್ದಾರೆ” ಎಂದು ನಾಗೇಂದ್ರ ಜೋಗಿ ಒತ್ತಿ ಹೇಳಿದರು.

ನಿಟ್ಟೂರು ಭಾಗದಲ್ಲಿ ಅಭಿವೃದ್ಧಿ ಚುರುಕು – ಶಾಸಕರ ಪ್ರಯತ್ನಕ್ಕೆ ಗ್ರಾಮಸ್ಥರಿಂದ ಕೃತಜ್ಞತೆ

ದೇವಸ್ಥಾನಗಳ ಅಭಿವೃದ್ದಿಗೆ ಕ್ಷೇತ್ರದಾದ್ಯಂತ ನಾಲ್ಕು ಕೋಟಿಗೂ ಹೆಚ್ಚು ಅನುದಾನ

ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಪ್ರಮುಖ ಮೂಲಸೌಕರ್ಯ ಹಾಗೂ ದೇವಸ್ಥಾನಾಭಿವೃದ್ಧಿ ಕಾಮಗಾರಿಗಳು ವೇಗ ಪಡೆದುಕೊಂಡಿದ್ದು, ಈ ಪ್ರಗತಿಗೆ ಕಾರಣರಾಗಿರುವ ಜನಪ್ರಿಯ ಶಾಸಕರಾದ ಗೋಪಾಲಕೃಷ್ಣ ಬೇಳೂರಿಗೆ ಸ್ಥಳೀಯರಿಂದ ಕೃತಜ್ಞತೆ ವ್ಯಕ್ತವಾಗಿದೆ. “ಗ್ರಾಮಾಂತರ ಪ್ರದೇಶದ ಬಹುಕಾಲದ ಬಾಕಿ ಉಳಿದ ಹಲವು ಯೋಜನೆಗಳು ಇಂದು ನೆಲೆಯಲ್ಲಿ ಕಾಣಲು ಅವರ ನಿಸ್ಸೀಮ ಪ್ರಯತ್ನವೇ ಕಾರಣ” ಎಂದು ಕೆಡಿಪಿ ಸದಸ್ಯ ಮತ್ತು ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಂದ್ರ ಜೋಗಿ ಹೇಳಿದರು.

ಹಸಿರಮಕ್ಕಿ ಸೇತುವೆ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ಉದ್ಘಾಟನೆ ಆಗಲಿದೆ. ಈ ಸೇತುವೆ ಸಿದ್ಧರಾದ ಬಳಿಕ ನಿಟ್ಟೂರು ಸುತ್ತಲಿನ ಗ್ರಾಮಗಳಿಗೆ ಸಾರಿಗೆ ಅನುಕೂಲತೆ ಹೆಚ್ಚಲಿದ್ದು, ಸಾರ್ವಜನಿಕರಿಗೆ ದೊಡ್ಡ ಮಟ್ಟದ ಲಾಭವಾಗಲಿದೆ ಎಂದರು.

ದೇವಸ್ಥಾನಗಳ ಅಭಿವೃದ್ಧಿ, ಗ್ರಾಮೀಣ ರಸ್ತೆಗಳ ಸುಧಾರಣೆ, ಕಾಲುಸಂಕ ನಿರ್ಮಾಣ, ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡಿರುವ ನವೀಕರಣ ಕಾಮಗಾರಿಗಳಿಗೆ ಒಟ್ಟು ಸುಮಾರು ₹4 ಕೋಟಿ ಅನುದಾನ ಮಂಜೂರಾಗಿದೆ. ಇದು ಗ್ರಾಮೀಣ ಅಭಿವೃದ್ಧಿ ದೃಷ್ಟಿಯಿಂದ ಮಹತ್ವದ ಹೆಜ್ಜೆ ಎನಿಸಿದೆ ಎಂದರು.

ನಿಟ್ಟೂರು ಪಂಚಾಯಿತಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಮುಖ ಕಾಮಗಾರಿ

ನಿಟ್ಟೂರು ವೀರಭದ್ರ ದೇವಾಲಯಕ್ಕೆ ಕಾಂಕ್ರೀಟ್ ರಸ್ತೆ – ₹10 ಲಕ್ಷ

ನಿಟ್ಟೂರು ಗಣೇಶ್ ಚೌತಿ ಕಟ್ಟಡ ಕಾಮಗಾರಿ – ₹2.50 ಲಕ್ಷ

ಬೇಲೂರು ಗಣಪತಿ ದೇವಾಲಯ ಜೀರ್ಣೋದ್ಧಾರ – ₹7 ಲಕ್ಷ

ನಿಟ್ಟೂರು ರಾಮೇಶ್ವರ ದೇವಾಲಯಕ್ಕೆ ₹20 ಲಕ್ಷ ಪ್ರಸ್ತಾವ → ಸರ್ಕಾರಕ್ಕೆ ಕಳುಹಿಸಲಾಗಿದೆ

ನಿಟ್ಟೂರು ವ್ಯಾಪ್ತಿಯಲ್ಲಿ ಮೂಲಸೌಕರ್ಯ / ರಸ್ತೆ ಕಾಮಗಾರಿ

ಹಸಿರಮಕ್ಕಿ ಸೇತುವೆ – ಹಸಿರಮಕ್ಕಿ ರಸ್ತೆ: ₹2 ಕೋಟಿ

ಹೊಸನಾಡು – ಜಾಲಬೈದೂರು ರಸ್ತೆ: ₹45 ಲಕ್ಷ

ನಿಟ್ಟೂರು – ನಾಗೋಡಿ ಬಗ್ಗಿ ಜೆಡ್ ರಸ್ತೆ: ₹25 ಲಕ್ಷ

ಕರೆಕ್ಟ್ಮಡಿ – ಮುಂಡಿಗದ್ದೆ ರಸ್ತೆ: ₹15 ಲಕ್ಷ

ನಾಗೋಡಿ ಹಾಲ್ಮನೆ ರಸ್ತೆ: ₹20 ಲಕ್ಷ

ಕೊಹ್ಸ್ನಡಿ ಬೀರ್ಗೆರೆ ಕಾಲುಸಂಕ: ₹25 ಲಕ್ಷ

ಆಲಗೋಡು, ಲಕ್‌ಮನೆ, ಹಳ್ಕೋಡು ಹಳ್ಳಗಳಿಗೆ ತಲಾ ₹10 ಲಕ್ಷ

ಹೆಬ್ಬಿಗೆ ಬಸವನಕಲ್ಲು ಹಳ್ಳಕ್ಕೆ ಕಾಲುಸಂಕ – ₹20 ಲಕ್ಷ

ದೋಸೆಯಮಕ್ಕಿ ಎಸ್‌ಸಿ ಕಾಲೋನಿ ರಸ್ತೆ – ₹10 ಲಕ್ಷ

ಮಾವಿನಗುಡ್ಡ ಎಸ್‌ಟಿ ಕಾಲೋನಿ ರಸ್ತೆ – ₹4 ಲಕ್ಷ

ಶಾಲಾ ದುರಸ್ತಿ ಹಾಗೂ ಗ್ರಾಮಾಂತರ ಸಣ್ಣಪರಿಶಿಷ್ಟ ಕಾಮಗಾರಿಗಳಿಗೆ ಹೆಚ್ಚುವರಿ ₹25 ಲಕ್ಷ

“ಈ ರೀತಿಯ ಮುಂದುವರಿದ ಕೈಗಾರಿಕಾ ಶೈಲಿಯ ಕೆಲಸಗಳಿಂದ ನಿಟ್ಟೂರು ಭಾಗದಲ್ಲಿ ಅಭಿವೃದ್ಧಿಯ ಹೊಸ ಯುಗ ಆರಂಭವಾಗುತ್ತಿದೆ” ಎಂದು ಹೇಳಲಾಗುತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಬಾಕಿ ಕಾಮಗಾರಿಗಳು ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿವೆ ಎಂಬ ವಿಶ್ವಾಸವಿದೆ ಎಂದರು.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಕೋಡೂರಿನಲ್ಲಿ ಅಗ್ನಿ ಅವಘಡ: ಸರ್ವಸ್ವ ಕಳೆದುಕೊಂಡ ಕಾರ್ಮಿಕನಿಗೆ ಕಟ್ಟಡ ಕಾರ್ಮಿಕರ ಸಂಘದ ಆಸರೆ

ಕೋಡೂರಿನಲ್ಲಿ ಅಗ್ನಿ ಅವಘಡ: ಸರ್ವಸ್ವ ಕಳೆದುಕೊಂಡ ಕಾರ್ಮಿಕನಿಗೆ ಕಟ್ಟಡ ಕಾರ್ಮಿಕರ ಸಂಘದ ಆಸರೆ A fire caused by a…

2 hours ago

ಅರಸಾಳಿನಿಂದ ವಿಶ್ವ ವೇದಿಕೆಗೆ; ಕವನಶ್ರೀಗೆ ಸತತ ಮೂರನೇ ಗಿನ್ನಿಸ್ ಸಾಧನೆ

ಅರಸಾಳಿನಿಂದ ವಿಶ್ವ ವೇದಿಕೆಗೆ; ಕವನಶ್ರೀಗೆ ಸತತ ಮೂರನೇ ಗಿನ್ನಿಸ್ ಸಾಧನೆ Arasalu's Kavanasree H.M. earns two more Guinness…

2 hours ago

ಸರ್ಕಾರಿ ಜಾಗದಲ್ಲಿ ಖಾಸಗಿ ಬೇಲಿ; ಕಂದಾಯ ಅಧಿಕಾರಿಗಳಿಂದ ತೆರವು – ಹಕ್ಕುಪತ್ರ–9/11 ದಾಖಲೆ ಕುರಿತು ವಾಗ್ವಾದ

ರಿಪ್ಪನ್ ಪೇಟೆಯಲ್ಲಿ ಸರ್ಕಾರಿ ಜಾಗದ ಬೇಲಿ ತೆರವು; ಹಕ್ಕುಪತ್ರ–9/11 ದಾಖಲೆ ಕುರಿತು ವಾಗ್ವಾದ Revenue officials removed a fence…

4 hours ago

ರಿಪ್ಪನ್‌ಪೇಟೆಯಲ್ಲಿ ಮೋದಿ ಜನ್ಮದಿನಾಚರಣೆ : ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ರಿಪ್ಪನ್‌ಪೇಟೆಯಲ್ಲಿ ಮೋದಿ ಜನ್ಮದಿನಾಚರಣೆ : ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ Special pooja was offered at Varasiddhi…

1 day ago

ಪ್ರಧಾನಿ ಮೋದಿ ಜನ್ಮದಿನ: ಶಿವಮೊಗ್ಗದಲ್ಲಿ ‘ಸೇವಾ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ

ಪ್ರಧಾನಿ ಮೋದಿ ಜನ್ಮದಿನ: ಶಿವಮೊಗ್ಗದಲ್ಲಿ ‘ಸೇವಾ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ BJP launches a month-long Seva Sankalpa Abhiyan…

1 day ago

ಮೋದಿ ಹುಟ್ಟುಹಬ್ಬ ‘ನಿರುದ್ಯೋಗಿಗಳ ದಿನ’ವಾಗಿ ಆಚರಣೆ; ಯುವ ಕಾಂಗ್ರೆಸ್ ಪ್ರತಿಭಟನೆ

ಮೋದಿ ಹುಟ್ಟುಹಬ್ಬ ‘ನಿರುದ್ಯೋಗಿಗಳ ದಿನ’ವಾಗಿ ಆಚರಣೆ; ಯುವ ಕಾಂಗ್ರೆಸ್ ಪ್ರತಿಭಟನೆ Youth Congress and NSUI workers in Shivamogga…

1 day ago