ANANDAPURA | ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಗುದ್ದಿದ ಸರ್ಕಾರಿ ಬಸ್

ANANDAPURA | ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಗುದ್ದಿದ ಸರ್ಕಾರಿ ಬಸ್

ಆನಂದಪುರ: ಸರಕಾರಿ ಬಸ್ಸುಗಳೆರಡು ಡಿಕ್ಕಿ ಹೊಡೆದ ಪರಿಣಾಮ ಒಂದು ಬಸ್ಸು ನಿಯಂತ್ರಣ ತಪ್ಪಿ ರಸ್ತೆ ಬದಿಯ ಧರೆಗೆ ಗುದ್ದಿ ನಿಂತಿರುವ ಘಟನೆ ಆನಂದಪುರ ಸಮೀಪ ಸಾಗರ ರಸ್ತೆಯ ಮುಂಬಾಳು ಕ್ರಾಸ್ ಬಳಿ ಶುಕ್ರವಾರ ಸಂಭವಿಸಿದೆ.

ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ಹಾಗೂ ಸಾಗರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಸರ್ಕಾರಿ ಬಸ್ ಆನಂದಪುರ ಸಮೀಪ ಸಾಗರ ರಸ್ತೆಯ ಮುಂಬಾಳು ಕ್ರಾಸ್ ನಲ್ಲಿ ಡಿಕ್ಕಿ ಹೊಡೆದು ಪಕ್ಕದ ಚರಂಡಿಗೆ ಇಳಿದಿದೆ.

ಘಟನೆ ವೇಳೆ ಬಸ್ಸಿನಲ್ಲಿ 20 ಕ್ಕೂ ಹೆಚ್ಚು ಪ್ರಯಾಣಿಕರಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ. ಮಧ್ಯಾಹ್ನ ವಿಪರೀತ ಮಳೆ ಸುರಿಯುತ್ತಿದ್ದರಿಂದ ಈ ಅಪಘಾತ ಸಂಭವಿಸಿದೆ ಪರಿಣಾಮ ಬಸ್ ಚಾಲಕ ಬಸ್ಸನ್ನು ಚರಂಡಿಯ ದರಗೆ ಇಳಿಸಿದ್ದಾನೆ ಸ್ವಲ್ಪ ಮುಂದೆ ಬಸ್ಸು ಚಲಿಸಿದ್ದರೆ ಗದ್ದೆಗೆ ಪಲ್ಟಿ ಆಗುತ್ತಿತ್ತು ಬಾಲಕನ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

Leave a Reply

Your email address will not be published. Required fields are marked *