Headlines

Ripponpete | ಅನ್ಯ ಭಾಷೆಯ ವ್ಯಾಮೂಹ ಸಲ್ಲ – ವೀರೇಶ್ ಆಲುವಳ್ಳಿ

ಅನ್ಯ ಭಾಷೆಯ ವ್ಯಾಮೂಹ ಸಲ್ಲ – ವೀರೇಶ್ ಆಲುವಳ್ಳಿ
ರಿಪ್ಪನ್‌ಪೇಟೆ : ಕನ್ನಡ ನಾಡಿನ ಭಾಷೆ  ಮತ್ತು ನಮ್ಮ ಸಂಸ್ಕೃತಿ ಎಲ್ಲರನ್ನು ಆಕರ್ಷಿಸುವಂತಹದ್ದು.ಅದರೆ ನಾವುಗಳು ಅನ್ಯ ಭಾಷೆಯ ವ್ಯಾಮೂಹದಿಂದಾಗಿ ನಮ್ಮ ಮಾತೃ ಭಾಷೆ ಕನ್ನಡವನ್ನು ಮಾತನಾಡದೇ ಬೇರೆ ಭಾಷೆಯನಾಡುತ್ತಾ ಮಕ್ಕಳಿಗೆ ಅದನ್ನು ಕಲಿಸುತ್ತಿರುವುದರ ಬಗ್ಗೆ ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಅಲುವಳ್ಳಿ ಕಳವಳ ವ್ಯಕ್ತ ಪಡಿಸಿದರು.

ರಿಪ್ಪನ್‌ಪೇಟೆಯ ಕಲಾಕೌಸ್ತೂಭ ಕನ್ನಡ ಸಂಘದ 30 ನೇ ವರ್ಷದ ವಾರ್ಷೀಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕನ್ನಡ ಕಲಿತು ಬಳಸುವಂತಾದರೆ ಕನ್ನಡದ ಏಳಿಗೆ ತನಗೆ ತಾನೆ ಅಗುತ್ತದೆ.ಇಂಗ್ಲಿಷ್ ಜೀವನಕ್ಕೆ ಬೇಕು.ಅದನ್ನು ಕಲಿಯಿರಿ. ಅದರೆ ನಮ್ಮ ದಿನನಿತ್ಯದ ಆಡುಭಾಷೆಯಾಗಿ ಕನ್ನಡವನ್ನು ಬಳಸಿ ಅದು ನಮ್ಮ ಭಾವ ಭಾಷೆ ಅದ್ದರಿಂದ ಯುವ ಜನರು ಕನ್ನಡ ಬಳಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಇಲ್ಲಿನ ಶಾರದಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ರಾಷ್ಟಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಊರಿನ ಗೌರವವನ್ನು ಉತ್ತುಂಗಕ್ಕೆ ಏರಿಸಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷೆ ಲೀಲಾ ಉಮಾಶಂಕರ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಲಾಕೌಸ್ತುಭ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಶೈಲಾ ಆರ್.ಪ್ರಭು,ಗ್ರಾಮ ಪಂಚಾಯ್ತಿ ಆಧ್ಯಕ್ಷೆ ಧನಲಕ್ಷಿ,ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್, ಎಂ.ಸುರೇಶ್‌ಸಿಂಗ್, ಆರ್.ಟಿ.ಗೋಪಾಲ ,ಈಶ್ವರಶೆಟ್ಟಿ, ದೀಪಾಸುದೀರ್, ಅಶ್ವಿನಿ ರವಿಶಂಕರ್,ವಿನೋಧ,ಸುಂದರೇಶ್,ದಾನಮ್ಮ,ಪದ್ಮಸುರೇಶ್, ಉಮಾಸುರೇಶ್, ಗೀತಾ.ರೇಖಾ ರವಿ,ಅಶ್ವಿನಿ, ಮಂಜುಳಕೇತಾರ್ಜಿರಾವ್, ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷೆ ನಾಗರತ್ನ ದೇವರಾಜ್,ರಂಜನ,ವನಮಾಲ,ಲಕ್ಷಿö್ಮ ಶ್ರೀನಿವಾಸ್‌, ತ.ಮ.ನರಸಿಂಹ,ಜಿ.ಆರ್.ಗೋಪಾಲಕೃಷ್ಣ, ಮಹಮದ್ ಅಲಿ, ಮುರುಳಿ,ಸುದೀರ್, ರಾಮುಬಳೆಗಾರ್, ರಾಜುಭಂಡಾರಿ,ಮಂಜುನಾಥ ಗವಟೂರು,ಇನ್ನಿತರರು ಹಾಜರಿದ್ದರು.

About The Author

Leave a Reply

Your email address will not be published. Required fields are marked *