ಗ್ರಾಪಂ ಅಧ್ಯಕ್ಷೆಯ ಮನೆಯ ಸುತ್ತಮುತ್ತ ವಾಮಾಚಾರ !! ಅಕ್ರಮ ಮರಳು ಸಾಗಾಟಕ್ಕೆ ವಿರೋದಿಸಿದ್ದೇ ಈ ಘಟನೆಗೆ ಕಾರಣವಾಯ್ತಾ..!!??
ಹೊಸನಗರ: ತಾಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಜಾತ ದಿನೇಶ್ ರವರ ಮನೆಯ ಸುತ್ತಮುತ್ತ ಅನಾಮಿಕರು ಭಾರೀ ವಾಮಾಚಾರ ನಡೆಸಿರುವ ಘಟನೆ ನಡೆದಿದೆ.
ಮಂಗಳವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದ ಬುಧವಾರ ಬೆಳಗ್ಗೆ ಮನೆ ಮಾಲೀಕರ ಗಮನಕ್ಕೆ ಬಂದಿದೆ.
ಗ್ರಾಮದಲ್ಲಿ ಅಕ್ರಮ ಮರಳು ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಶಾಲಾ ಮಕ್ಕಳಿಗೆ ಇದರಿಂದ ತೊಂದರೆ ಆಗುಬಹುದು ಎಂದು ಮರಳು ಸಾಗಾಣಿಕೆ ವಾಹನಗಳನ್ನು ಈ ಕಡೆ ಮುಖ ಮಾಡದಂತೆ ಅಕ್ರೋಶ ವ್ಯಕ್ತಪಡಿಸಿದ್ದ ಅಧ್ಯಕ್ಷೆ ಕ್ರಮವನ್ನು ಖಂಡಿಸಿ, ಯಾರೋ ಅಪರಿಚಿತ ಅಕ್ರಮ ಮರಳು ಸಾಗಾಟದಾರರು ಈ ಕೃತ್ಯ ನಡೆಸಲು ಮುಂದಾಗಿರಬೇಕೆಂದು ಸ್ಥಳೀಯರು ತಿಳಿಸಿದ್ದಾರೆ.
ಮನೆ ಮಾಲೀಕ ದಿನೇಶ್ ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಹೊಸನಗರ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.