ರಿಪ್ಪನ್ಪೇಟೆ;- ಛತ್ರಪತಿ ಶಿವಾಜಿ 393 ನೇ ಜಯಂತೋತ್ಸವ ಅಂಗವಾಗಿ ರಿಪ್ಪನ್ಪೇಟೆ ಮರಾಠ ಸಮಾಜದವರು ಸಾಗರ ರಸ್ತೆಯಲ್ಲಿನ ಮರಾಠ ಸಮಾಜದ ಭವನದಿಂದ ಬೈಕ್ ರ್ಯಾಲಿ ನಡೆಸಿದರು.
ಶಿವಮೊಗ್ಗ ರಸ್ತೆಯಿಂದ ವಿನಾಯಕ ವೃತ್ತ – ತೀರ್ಥಹಳ್ಳಿ ರಸ್ತೆ- ಹೊಸನಗರ ರಸ್ತೆ ರಸ್ತೆಯ ಮೂಲಕ ಸಾಗರ ರಸ್ತೆಯಲ್ಲಿನ ಮರಾಠ ಸಮಾಜದವರೆಗೆ ಬೈಕ್ ರ್ಯಾಲಿ ನಡೆಸಿದರು.
ಬೈಕ್ ರ್ಯಾಲಿಯಲ್ಲಿ ಛತ್ರಪತಿ ವೀರ ಶಿವಾಜಿಯ ಪರವಾದ ಘೋಷಣೆ ಕೂಗುತ್ತಾ ಭಗವಾಧ್ವಜವನ್ನು ಹಿಡಿದು ನೂರಾರು ಬೈಕ್ಗಳೊಂದಿಗೆ ರ್ಯಾಲಿ ನಡೆಸಿ ಸಾರ್ವಜನಿಕರ ಗಮನ ಸೆಳೆದರು.
ಈ ದಿನ ಸಂಜೆ ಶಿವಾಜಿ ಜಯಂತಿ ಅಂಗವಾಗಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ,ಬೇಳೂರು ಗೋಪಾಲಕೃಷ್ಣ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.