ವರದಕ್ಷಿಣೆ ಕಿರುಕುಳ : ನಾಲ್ಕು ವರ್ಷದ ಕಂದಮ್ಮನೊಂದಿಗೆ ನೇಣಿಗೆ ಶರಣಾದ ತಾಯಿ

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಗುವಿನೊಂದಿಗೆ ತಾಯಿ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ಶನಿವಾರ ನಡೆದಿದೆ.

ಗ್ರಾಮದ ನಯನಾ (27) ಹಾಗೂ ಗುರು (4) ಆತ್ಮಹತ್ಯೆಗೆ ಶರಣಾಗಿರುವ ದುರ್ಧೈವಿಗಳು.

ಸುಮಾರು 5 ವರ್ಷಗಳ ಹಿಂದೆ ಕುಂಬತ್ತಿ ಗ್ರಾಮದ ನಯನಾ ಹಾಗೂ ಕಪ್ಪಗಳಲೆ ಗ್ರಾಮದ ಶರತ್ ಪ್ರೀತಿಸಿ ವಿವಾಹವಾಗಿದ್ದರು. 

ಮಗಳು ನಯನ(27) ಮತ್ತು ಮೊಮ್ಮಗ ಗುರು(04) ಸಾವಿಗೆ ಗಂಡ ಶರತ್, ಮಾವ ಹಾಲೇಶ್ ಹಾಗೂ ಅತ್ತೆ ಸೀತಮ್ಮ ನೀಡುತ್ತಿದ್ದ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ನಾಗರಾಜ್ ಸಲ್ಲಿಸಿರುವ ದೂರಿನ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *