Headlines

ಶಿವಮೊಗ್ಗ ಗಾಂಧಿ ಬಜಾರ್ ನಲ್ಲಿ ಚಾಕು ಇರಿತ : ಪ್ರಕರಣದ ಬಗ್ಗೆ ಸ್ಪಷ್ಟ ಚಿತ್ರಣ ಕೊಟ್ಟ ಎಸ್ ಪಿ ಲಕ್ಷ್ಮಿಪ್ರಸಾದ್

ಶಿವಮೊಗ್ಗ : ನಿನ್ನೆ ಸಂಜೆ ಏಳು ಮೂವತ್ತರ ಸುಮಾರಿಗೆ ಶಿವಮೊಗ್ಗದ ಗಾಂಧಿಬಜಾರ್​ನಲ್ಲಿರುವ ಚೋರ್​ಬಜಾರ್​ ಬಟ್ಟೆಮಾರುಕಟ್ಟೆಯಲ್ಲಿ ಅಂಗಡಿ ಮಾಲೀಕ ಸೆಂಥಿಲ್​ಗೆ ಚಾಕುವಿನಿಂದ ಇರಿದ ಪ್ರಕರಣ ಸಂಬಂಧ ಶಿವಮೊಗ್ಗ ಎಸ್​ಪಿ ಲಕ್ಷ್ಮೀಪ್ರಸಾದ್​ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಘಟನೆಯ ಸ್ಪಷ್ಟ ಚಿತ್ರಣವನ್ನು ನೀಡಿದ್ದಾರೆ.


43 ವರ್ಷದ ಸೆಂಥಿಲ್​ ಎಂಬಾತನಿಗೆ ಚಾಕುವಿನಿಂದ ನಾಲ್ಕೈದು ಕಡೆ ಇರಿಯಲಾಗಿದೆ. ಅವರನ್ನ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ. 307 ಸೆಕ್ಷನ್​ ಅಡಿಯಲ್ಲಿ ಕೇಸ್​ ಆಗಿದ್ದು, ಜೋಗಿ ಸಂತು, ರಮೇಶ್, ಲೋಕೇಶ್ ಹಾಗೂ ಇನ್ನೊಬ್ಬನ ವಿರುದ್ಧ ಕೇಸ್​ ಆಗಿದೆ. ಲೋಕೇಶ್​ ಎಂಬಾತನ ಪಕ್ಕದಲ್ಲಿಯೇ ಬಟ್ಟೆ ಅಂಗಡಿಯಿಟ್ಟುಕೊಂಡಿರುವ ಸೆಂಥಿಲ್ ಹಾಗೂ ಲೋಕೇಶ್​ ನಡುವೆ ಅಂಗಡಿಯಲ್ಲಿ ಬಟ್ಟೆಗಳನ್ನ ಇಡುವ ವಿಚಾರಕ್ಕೆ ಆಗಾಗ ಜಗಳವಾಗುತ್ತಿತ್ತು. ​ ಹಾಗೂ ಜೋಗಿ ಸಂತು ಈ ಹಿಂದೆ ಸೆಂಥಿಲ್​ ಜೊತೆಗೆ ಇದ್ದವರು. ಅವರಿಬ್ಬರ ನಡುವೆ ಹಣಕಾಸು ಹಾಗೂ ಅಂಗಡಿಯ ವಿಷಯಕ್ಕೆ ವೈಷಮ್ಯ ಉಂಟಾಗಿತ್ತು. ಅಲ್ಲದೆ ಕಳೆದ ವರ್ಷ ಸೆಂಥಿಲ್​ ಜೋಗಿ ಸಂತು ಮೇಲೆ ಹಲ್ಲೆ ಮಾಡಿದ ಪ್ರಕರಣವೊಂದು ಇತ್ತು. ಈ ಹಿನ್ನೆಲೆ ಅದರ ಪ್ರತೀಕಾರಕ್ಕಾಗಿಯೇ ಈ ಕೃತ್ಯವೆಸಗಲಾಗಿದೆ ಎಂಬ ಶಂಕೆ ಇದೆ ಎಂದು ಎಸ್​ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ. 

ಅಲ್ಲದೆ, ಘಟನೆ ಸಂಬಂಧ ನಾಲ್ವರ ಬಂಧನ ಇನ್ನಷ್ಟೆ ಆಗಬೇಕಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *