WhatsApp Channel Join Now
Telegram Channel Join Now
 ಶಿವಮೊಗ್ಗ : ಪುರಲೆ ಕೆರೆ ಏರಿ ಮೇಲೆ ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.

ಪುರಲೆ ಕಡೆಯಿಂದ ಅಭಿಷೇಕ್ ರಾತ್ರಿ ಹೊಸಮನೆ ಬಡಾವಣೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಎದುರಿನಿಂದ ಬಂದ ದ್ವಿಚಕ್ರ ವಾಹನವು ಅಭಿಷೇಕ್ ತೆರಳುತ್ತಿದ್ದ ಬೈಕ್’ಗೆ ಡಿಕ್ಕಿಯಾಗಿದ ಪರಿಣಾಮ  ಅಭಿಷೇಕ್ ತಲೆಗೆ ತೀವ್ರ ಗಾಯವಾಗಿದೆ.

ಸ್ಥಳೀಯರ ನೆರವಿನಿಂದ ಅಭಿಷೇಕ್’ನನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತನ ಮಾರ್ಗ ಮಧ್ಯದಲ್ಲೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.

ಹೊಸಮನೆ ಬಡಾವಣೆಯ ಅಭಿಷೇಕ್ (23) ಮೃತ ದುರ್ಧೈವಿ.ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.


 ಘಟನೆ ಸಂಬಂಧ ವಿದ್ಯಾನಗರದಲ್ಲಿರುವ ಪೂರ್ವ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *