Headlines

ಮಾಜಿ ಶಾಸಕರ ವಿರುದ್ದ ಸುಳ್ಳು ಆರೋಪ ಸಲ್ಲ:: ಕಾಂಗ್ರೆಸ್ ಘಟಕ ರಿಪ್ಪನ್ ಪೇಟೆ::::

ರಿಪ್ಪನ್ ಪೇಟೆ:: ಮಾಜಿ ಶಾಸಕರಾದ ಶ್ರೀ ಬೇಳೂರು ಗೋಪಾಲಕೃಷ್ಣ ವಿರುದ್ದ ತೇಜೋವಧೆ ಮಾಡಿರುವ ವೀರೇಶ್ ಆಲುವಳ್ಳಿಯವರಿಗೆ ಗೋಪಾಲಕೃಷ್ಣ ರವರ ಬಗ್ಗೆ ಆಗಲಿ ಅಥವಾ ಕಾಂಗ್ರೆಸ್ ಪಕ್ಷದ ಮುಖಂಡರ ಬಗ್ಗೆಯಾಗಲಿ ತೇಜೋವಧೆ ಮಾಡುವ ಯೋಗ್ಯತೆ ಇಲ್ಲ..
ವೀರೇಶ್ ರವರು ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರಿದವರೇ.ಕಳೆದ ವಿಧಾನಸಬೆ ಚುನಾವಣ ಸಂಧರ್ಭದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪರ ಸಾಗರ ಕ್ಷೇತ್ರದಲ್ಲಿ ಬಿಜೆಪಿ ಪರ ಕೆಲಸ ಮಾಡಿರುವ ತತ್ವ ಸಿದ್ದಾಂತ ಇಲ್ಲದ ವ್ಯಕ್ತಿತ್ವ ಅವರದು..ಎರಡು ಬಾರಿ ಶಾಸಕರಾದವರ ಬಗ್ಗೆ ಹೀಗೆ ನಾಲಗೆ ಹರಿಬಿಟ್ಟಿರುವುದು ಅವರ ಕೀಳು ಮನಸ್ತಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕದ ಮುಖಂಡರು ಪತ್ರೀಕಾಗೋಷ್ಟಿಯಲ್ಲಿ  ತಿಳಿಸಿದರು.

ಸತ್ಯಾಸತ್ಯತೆ

ಸೂಡುರು ಶಿವು ಅಭಿಮಾನಿ ಬಳಗದಲ್ಲಿ ಗೋಪಾಲಕೃಷ್ಣ ರವರು ಅಶ್ಲೀಲ ಫೋಟೋ ಹರಿಬಿಟ್ಟಿದ್ದಾರೆ ಎನ್ನುವ  ಆರೋಪದ ಸತ್ಯಾಸತ್ಯತೆ ಏನೇಂದರೇ ಆ ಬಳಗದಲ್ಲಿ ಈ ಮುಂಚೆ ಯಾರೋ ಇನ್ನೊಬ್ಬ ವ್ಯಕ್ತಿ ಆ ಅಶ್ಲೀಲ ಪೋಟೋ ಕಳುಹಿಸಿದ್ದು ಇದನ್ನು ಸೂಡೂರು ಶಿವಣ್ಣ ಬಳಗದ  ಗ್ರೂಪ್ ನ ಅಡ್ಮಿನ್ ಸೂಡೂರು ಶಿವು ಗೆ ಎಚ್ಚರಿಸುವ ಉದ್ದೇಶದಿಂದ ಗ್ರೂಪ್ ನ ಅಡ್ಮಿನ್ ಗೆ ಕಳುಹಿಸುವ ಬದಲು ಕೈ ತಪ್ಪಿನಿಂದ ಅದೇ ಗ್ರೂಪ್ ಗೆ ಹಾಕಿರುತ್ತಾರೆ..ಈ ಸಂಬಧ ಗೋಪಾಲಕೃಷ್ಣ ರವರು ಮುಂಚೆ ಕಳುಹಿಸಿದ್ದ ವ್ಯಕ್ತಿಯ ಮೇಲೆ ದೂರು ದಾಖಲಿಸುವಂತೆ ಆ ಗ್ರೂಪ್ ನ ಅಡ್ಮಿನ್ ಶಿವು ಗೆ ಸೂಚಿಸಿದ್ದರು.

ಮಾಜಿ ಶಾಸಕರು ಮೊನ್ನೆಯ ದಿನ ಸುತ್ತಾ ಮರಳು ಮಾಪಿಯಾದ ವಿರುದ್ದ ಹೋರಾಟ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರಿಂದ ಈ ಮಾಫ಼ಿಯಾದ ಫಲಾನುಭವಿಯಾದ ವೀರೇಶ್ ಆಲುವಳ್ಳಿ ರವರು ಮಾಜಿ ಶಾಸಕರಾದ ಗೋಪಾಲಕೃಷ್ಣರವರ ವಿರುದ್ದ ಇಲ್ಲಸಲ್ಲದ ಆರೋಪ ಮಾಡಿರುತ್ತಾರೆ ಎಂದರು.

ಮಾಜಿ ಶಾಸಕರ ಬಗ್ಗೆ ನೀವು ಈ ಹಂತದ ಕೀಳುಮಟ್ಟದ ರಾಜಕೀಯಕ್ಕೆ ಇಳಿಯುವುವಾಗ ನಾವು ಕೂಡ ಆ ಹಂತಕ್ಕೆ ಇಳಿದರೆ ನಿಮ್ಮ ಸೀಮೆ ಎಣ್ಣೆ,ಗೊಬ್ಬರ,ಸೊಸೈಟಿಯ ಕರ್ಮಕಾಂಡ ತೆರೆದಿಡಬೇಕಾಗುತ್ತದೆ ಎಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯತಿ ಸದಸ್ಯ ಬಿ ಆಸೀಫ಼್ ಹಾಗೂ ಕಾಂಗ್ರೆಸ್‌ ಮುಖಂಡ ರಮೇಶ್ ಫ್ಯಾನ್ಸಿ ರವರು ಜಂಟಿ ಪತ್ರೀಕಾಗೋಷ್ಟಿಯಲ್ಲಿ ಎಚ್ಚರಿಸಿದ್ದಾರೆ. 

ಈ ಸಂಧರ್ಭದಲ್ಲಿ ಅರಸಾಳು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉಮಾಕರ್ ಕಾನುಗೊಡು, ಮತ್ತು ಉಲ್ಲಾಸ್ ತೆಂಕೋಲ್ ಉಪಸ್ತಿತರಿದ್ದರು.

About The Author

Leave a Reply

Your email address will not be published. Required fields are marked *