Headlines

ಜನ ಸಾಮಾನ್ಯರ ಪ್ರಶಂಸೆಗೆ ಪಾತ್ರರಾದ ರಿಪ್ಪನ್ ಪೇಟೆಯ ಗ್ರಾಮ ಪಂಚಾಯತಿಯ ಯುವ ಸದಸ್ಯ::

ರಿಪ್ಪನ್ ಪೇಟೆ:: ರಾಜ್ಯಾದ್ಯಂತ ಕೋವಿಡ್ ಹಿನ್ನಲೆ ಲಾಕ್ ಡೌನ್ ಹೇರಿಕೆಯಿಂದ ಜನ ಜೀವನ ಅಸ್ತವ್ಯಸ್ತವಾಗಿರುವಾಗ ರಿಪ್ಪನ್ ಪೇಟೆಯ ಬರುವೆ 3 ನೇ ವಾರ್ಡಿನ ಗ್ರಾಮ ಪಂಚಾಯಿತಿಯ ಯುವ ಸದಸ್ಯರಾದ ನಿರೂಪ್ ಕುಮಾರ್ ರವರು ಜನರ ಕಷ್ಟಕ್ಕೆ ಬೆನ್ನಿಗೆ ನಿಂತು ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರಿಗೆ ಮಾದರಿಯಾಗಿದ್ದಾರೆ..

ವೈಯಕ್ತಿಕವಾಗಿ ಹಾಗೂ ಸ್ನೇಹಿತರ ಸಹಕಾರದೊಂದಿಗೆ ಸ್ವಾಮಿ ವಿವೇಕಾನಂದ ಟ್ರಸ್ಟ್ ಮುಖಾಂತರ ತನ್ನ ವಾರ್ಡಿನ ಸುಮಾರು 300 ಕುಟುಂಬಕ್ಕೆ ದಿನಸಿ ಕಿಟ್ ಕೊಟ್ಟು ಅವರ ಕಷ್ಟಕ್ಕೆ ಬೆಂಬಲವಾಗಿ ನಿಂತು ಆ ಕುಟುಂಬಗಳಲ್ಲಿ ದೈರ್ಯ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. 
ಇವರ ಕಾರ್ಯವೈಖರಿಯನ್ನು ಕಂಡು ರಿಪ್ಪನ್ ಪೇಟೆಯ ನಾಗರೀಕರು ಇದ್ದರೆ ನಿರೂಪ್ ಕುಮಾರ್ ರಂತಹ ಗ್ರಾಮ ಪಂಚಾಯತಿಯ ಸದಸ್ಯರು ಇರಬೇಕು ಎಂದೂ ಪ್ರಶಂಸನೀಯ ಮಾತುಗಳನ್ನಾಡುತ್ತಿರುವುದು ಸಾಮಾನ್ಯವಾಗಿದೆ.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಎಲ್ ವೆಂಕಟೇಶ್ ರವರ ಪುತ್ರನಾದ ನಿರೂಪ್ ಕುಮಾರ್ ಗ್ರಾಮ ಪಂಚಾಯತ್ ಸದಸ್ಯರಾಗಿ ವಾರ್ಡ್ ನ ಅಭಿವೃದ್ಧಿ ಕಾರ್ಯಗಳಲ್ಲಿ ಉಳಿದ ಸದಸ್ಯರಿಗಿಂತ ಮುಂಚೂಣಿಯಲ್ಲಿದ್ದಾರೆ.

ರಿಪ್ಪನ್ ಪೇಟೆಯ ಕೆಲ ಜಡ್ಡು ಹಿಡಿದ ರಾಜಕಾರಣಿಗಳ ನಡುವೆ ನಿರೂಪ್ ಕುಮಾರ್ ಆಶಾಕಿರಣದಂತೆ ಗೋಚರಿಸುತ್ತಿದ್ದಾರೆ…

Leave a Reply

Your email address will not be published. Required fields are marked *