ಜಿಲ್ಲಾ ಸುದ್ದಿ:
ರಿಪ್ಪನ್ಪೇಟೆಯಲ್ಲಿ ನಾಳೆಯಿಂದ ಮೂರು ದಿನಗಳ ಕಲಾಕೌಸ್ತುಭ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ
ರಿಪ್ಪನ್ಪೇಟೆಯಲ್ಲಿ ನಾಳೆಯಿಂದ ಮೂರು ದಿನಗಳ ಕಲಾಕೌಸ್ತುಭ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಜಾತ್ರೆ ರಿಪ್ಪನ್ ಪೇಟೆ : ನವೆಂಬರ್ 28ರಿಂದ 30ರವರೆಗೆ ಅವಿರತ ಮೂರು ದಿನಗಳು ರಿಪ್ಪನ್ಪೇಟೆ ಸಂಸ್ಕೃತಿಯ ನಾದದಿಂದ ಕೂಗಲಿದ್ದು, ಕಲಾ ಕೌಸ್ತುಭ ಕನ್ನಡ ಸಂಘದ 32ನೇ ವಾರ್ಷಿಕೋತ್ಸವ ಹಾಗೂ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳು ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಜರುಗಲಿವೆ ಎಂದು ಸಂಘದ ಅಧ್ಯಕ್ಷ ಮುರುಳಿಧರ ಹಾಗೂ ಕಾರ್ಯದರ್ಶಿ ಬಳೆಗಾರ ರಾಮಚಂದ್ರ ಮಾಹಿತಿ ನೀಡಿದ್ದಾರೆ. ನ. 28: ರಾಜ್ಯೋತ್ಸವ ಹಬ್ಬದ ಶುಭಾರಂಭ…
ಅಧಿಕಾರಕ್ಕಾಗಿ ರಾಜ್ಯ ಸರ್ಕಾರ ಶಾಸಕರ ಖರೀದಿ ಕೇಂದ್ರ ಆರಂಭಿಸಿದೆ : ಹರತಾಳು ಹಾಲಪ್ಪ ವ್ಯಂಗ್ಯ
ಅಧಿಕಾರಕ್ಕಾಗಿ ರಾಜ್ಯ ಸರ್ಕಾರ ಶಾಸಕರ ಖರೀದಿ ಕೇಂದ್ರ ಆರಂಭಿಸಿದೆ : ಹರತಾಳು ಹಾಲಪ್ಪ ವ್ಯಂಗ್ಯ ಸಾಗರ: “ಅಧಿಕಾರ ಉಳಿಸಿಕೊಳ್ಳಲು ಸರ್ಕಾರ ಶಾಸಕರ ಖರೀದಿ ಕೇಂದ್ರ ಪ್ರಾರಂಭಿಸಿದೆ. ಆದರೆ ರೈತರಿಗಾಗಿ ಮೆಕ್ಕೆಜೋಳ–ಭತ್ತ ಖರೀದಿ ಕೇಂದ್ರ ಆರಂಭಿಸಲು ಮಾತ್ರ ಸಮಯವಿಲ್ಲ,” ಎಂದು ಮಾಜಿ ಸಚಿವ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು. ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬೆಂಬಲಬೆಲೆಗೆ ಭತ್ತ ಮತ್ತು ಮೆಕ್ಕೆಜೋಳ ಖರೀದಿಯನ್ನು ತಕ್ಷಣ ಆರಂಭಿಸಬೇಕೆಂದು ಸರ್ಕಾರವನ್ನು…
ಅಂಧ ಮಹಿಳೆಯರ T20 ಚಾಂಪಿಯನ್ ತಂಡದ ರಿಪ್ಪನ್ ಪೇಟೆಯ ಕಾವ್ಯಾಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ
ಅಂಧ ಮಹಿಳೆಯರ T20 ಚಾಂಪಿಯನ್ ತಂಡದ ರಿಪ್ಪನ್ ಪೇಟೆಯ ಕಾವ್ಯಾಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ ಟಿ20 ಅಂಧರ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಭಾರತದ ಮಹಿಳಾ ಅಂದರ ತಂಡವು ಗೆಲುವು ಸಾಧಿಸಿತ್ತು. ಈ ಗೆಲುವಿಗೆ ಹರ್ಷವನ್ನು ರಿಪ್ಪನ್ ಪೇಟೆಯ ಕಾವ್ಯಾ.ವಿ ಕೂಡ ಕಾರಣ ಎಂಬ ವಿಷಯ ತಿಳಿದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವಂತ ಅವರು, ಭಾರತದ ಅಂಧರ ಮಹಿಳಾ…
RIPPONPETE | ಆನೆ ಹಾವಳಿಗೆ ತತ್ತರಿಸಿದ ರೈತ ; ತತ್ತಕ್ಷಣ ಆನೆ ಸ್ಥಳಾಂತರ – ಪರಿಹಾರಕ್ಕೆ ಒತ್ತಾಯಿಸಿ ಅರಣ್ಯ ಕಛೇರಿ ಮುಂಭಾಗ ನ.27ಕ್ಕೆ ಪ್ರತಿಭಟನೆ
RIPPONPETE | ಆನೆ ಹಾವಳಿಗೆ ತತ್ತರಿಸಿದ ರೈತ – ತತ್ತಕ್ಷಣ ಆನೆ ಸ್ಥಳಾಂತರ – ಪರಿಹಾರಕ್ಕೆ ಒತ್ತಾಯಿಸಿ ಅರಣ್ಯ ಕಛೇರಿ ಮುಂಭಾಗ ನ.27ಕ್ಕೆ ಪ್ರತಿಭಟನೆ ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಆನೆ ಹಾವಳಿ ತೀವ್ರಗೊಂಡಿದ್ದು, ರೈತರ ಬೆಳೆಗಳಿಗೆ ಅಪಾರ ನಷ್ಟ ಉಂಟಾಗಿರುವುದಲ್ಲದೆ, ಮಾನವ ಜೀವಕ್ಕೂ ಅಪಾಯ ಎದುರಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಆನೆಗಳ ದಾಳಿಯಿಂದ ರೈತರ ಪ್ರಾಣ ಬಲಿಯಾದ ಘಟನೆಗಳು ಸಂಭವಿಸಿದ್ದು, ಜನರು ಜೀವಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ…
ರಿಪ್ಪನ್ಪೇಟೆ ರಾಜ್ಯೋತ್ಸವ ಸಂಭ್ರಮಕ್ಕೆ ಮೆರುಗು : ಕಸ್ತೂರಿ ಕನ್ನಡ ಸಂಘ ಆಯೋಜಿಸಿರುವ ಎರಡು ದಿನಗಳ ಉತ್ಸವಕ್ಕೆ ಇಂದು ಚಾಲನೆ
ರಿಪ್ಪನ್ಪೇಟೆ ರಾಜ್ಯೋತ್ಸವ ಸಂಭ್ರಮಕ್ಕೆ ಮೆರುಗು : ಕಸ್ತೂರಿ ಕನ್ನಡ ಸಂಘ ಆಯೋಜಿಸಿರುವ ಎರಡು ದಿನಗಳ ಉತ್ಸವಕ್ಕೆ ಇಂದು ಚಾಲನೆ ಇಂದು ನಗೆ ಹಬ್ಬ , ನಾಳೆ ಮೂರು ಮುತ್ತು ತಂಡದಿಂದ ಹಾಸ್ಯ ನಾಟಕ ರಿಪ್ಪನ್ಪೇಟೆ : ಪಟ್ಟಣದ ಕಸ್ತೂರಿ ಕನ್ನಡ ಸಂಘ ಮತ್ತು ಪುನೀತ್ರಾಜ್ ಅಭಿಮಾನಿ ಬಳಗ ವತಿಯಿಂದ ಆಯೋಜಿಸಿರುವ 5ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರೋಪ ಸಮಾರಂಭ ಈ ಬಾರಿ ಎರಡು ದಿನಗಳ ವೈವಿಧ್ಯಮಯ ಸಾಂಸ್ಕೃತಿಕ – ಮನರಂಜನಾ ಕಾರ್ಯಕ್ರಮಗಳೊಂದಿಗೆ ಭರ್ಜರಿಯಾಗಿ ನಡೆಯಲಿದೆ ಎಂದು ಕಸ್ತೂರಿ…
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ ಶ್ರೀಕಾಂತ್ ರಿಂದ ‘ಸಹಕಾರಿ ರತ್ನ’ ಪುರಸ್ಕೃತ ಎಂ ಎಂ ಪರಮೇಶ್ ಗೆ ಸನ್ಮಾನ
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ ಶ್ರೀಕಾಂತ್ ರಿಂದ ‘ಸಹಕಾರಿ ರತ್ನ’ ಪುರಸ್ಕೃತ ಎಂ ಎಂ ಪರಮೇಶ್ ಗೆ ಸನ್ಮಾನ ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ (ಡಿಸಿಸಿ ಬ್ಯಾಂಕ್) ನೂತನ ನಿರ್ದೇಶಕರಾದ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡರಾದ ಶ್ರೀಕಾಂತ್ ರವರು ಇಂದು ರಿಪ್ಪನ್ ಪೇಟೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭಾನುವಾರ ವಿಶೇಷ ಭೇಟಿ ನೀಡಿದರು. ಪ್ರದೇಶದ ಸಹಕಾರ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿರುವ ವ್ಯಕ್ತಿತ್ವಗಳನ್ನು ಗುರುತಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಸನ್ಮಾನ ಕಾರ್ಯಕ್ರಮದಲ್ಲಿ,…
ಶಿಕ್ಷಕರು ಸಮಾಜ ನಿರ್ಮಾಣದ ಶಿಲ್ಪಿಗಳು: ಶಾಸಕ ಆರಗ ಜ್ಞಾನೇಂದ್ರ
ಶಿಕ್ಷಕರು ಸಮಾಜ ನಿರ್ಮಾಣದ ಶಿಲ್ಪಿಗಳು: ಶಾಸಕ ಆರಗ ಜ್ಞಾನೇಂದ್ರ “ಗಾಂಧೀಜಿಯನ್ನು ಕೊಂದವರೂ ವಿದ್ಯಾವಂತರು’” — ಕಿಮ್ಮನೆ ರತ್ನಾಕರ್ ಅಮೃತದಲ್ಲಿ ಗುರುವಂದನೆ : ಹಿರಿಯ ಶಿಕ್ಷಕರು–ಸಾಧಕರಿಗೆ ಸನ್ಮಾನ ರಿಪ್ಪನ್ ಪೇಟೆ : ಮಕ್ಕಳಿಗೆ ಶಿಕ್ಷಣದ ಜೊತೆಗೆ ಸುಸಂಸ್ಕೃತರನ್ನಾಗಿ ಮಾಡುವ ಮೂಲಕ ಸನ್ಮಾರ್ಗದಲ್ಲಿ ಸಾಗಲು ಶಿಕ್ಷಕರು ಬೋಧನೆ ಮಾಡಬೇಕೆಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಗರ್ತಿಕೆರೆಯಲ್ಲಿ ನಡೆದ ಅಮೃತ ಸ್ನೇಹಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ ಶಿಕ್ಷಣ ವ್ಯಕ್ತಿತ್ವ ನಿರ್ಮಾಣದೊಂದಿಗೆ ವ್ಯಕ್ತಿ ನಿರ್ಮಾಣ ಮಾಡುತ್ತದೆ. ನೌಕರಿಗಾಗಿ ಶಿಕ್ಷಣವಾಗದೆ ಬದುಕಿಗೆ ಮಾರ್ಗದರ್ಶನವಾಗಬೇಕು. ಇಂದು ಸಮಾಜಘಾತುಕ…
ಟಾಂ ಟಾಂ ಶಾಸಕರು ಸಮಾಧಾನದಿಂದ ವರ್ತಿಸಲಿ – ಕಾಂಗ್ರೆಸ್ ಮುಖಂಡ ಎಚ್ ಸಿ ಯೋಗೇಶ್ ಮನವಿ
ಟಾಂ ಟಾಂ ಶಾಸಕರು ಸಮಾಧಾನದಿಂದ ವರ್ತಿಸಲಿ – ಕಾಂಗ್ರೆಸ್ ಮುಖಂಡ ಎಚ್ ಸಿ ಯೋಗೇಶ್ ಮನವಿ ಶಿವಮೊಗ್ಗ: ಧರ್ಮಕ್ಕಿಂತ ಕಾನೂನೇ ಮುಖ್ಯ. ಶಾಂತಿಗಾಗಿ ಹೋರಾಟ ಮಾಡಬೇಕೆ ಹೊರತು ನಗರ ವಾಸಿಗಳ ಮನವನ್ನು ಕದಡುವ ಕೆಲಸವನ್ನಲ್ಲ. ಆರ್ ಎಂಲ್ ನಗರದಲ್ಲಿ ನಡೆದ ಹಲ್ಲೆಯನ್ನು ಕೋಮುಬಣ್ಣಕ್ಕೆ ತಿರುಗಿಸಿ, ಊರಲ್ಲೆಲ್ಲ ಟಾಂ ಟಾಂ ಹೊಡೆದು ಲಾಭ ಪಡೆಯಲು ಮುಂದಾದ ಶಾಸಕರು ಒಂದು ಕೋಮಿನ ತುಷ್ಟೀಕರಣಕ್ಕೆ ಮುಂದಾಗಿದ್ದಾರೆ. ಹೀಗೆ ಮಾಡುವ ಮುನ್ನ ತಾಳ್ಮೆ ವಹಿಸಬೇಕಿತ್ತೆಂದು ಕಾಂಗ್ರೆಸ್ ಮುಖಂಡ ಎಚ್ ಸಿ ಯೋಗೇಶ್ ಹೇಳಿದ್ದಾರೆ….
ವರದಿಗಾರಿಕೆಯಲ್ಲಿ ನೇರವಂತಿಕೆ – ಮಾಧ್ಯಮಗಳ ನಿಜಶಕ್ತಿ – ಗೋಪಾಲಕೃಷ್ಣ ಬೇಳೂರು
ರಿಪ್ಪನ್ ಪೇಟೆ : ಪೋಸ್ಟ್ ಮ್ಯಾನ್ ನ್ಯೂಸ್ ಕಚೇರಿ ಉದ್ಘಾಟನೆ ವರದಿಗಾರಿಕೆಯಲ್ಲಿ ನೇರವಂತಿಕೆ – ಮಾಧ್ಯಮಗಳ ನಿಜಶಕ್ತಿ – ಗೋಪಾಲಕೃಷ್ಣ ಬೇಳೂರು ರಿಪ್ಪನ್ ಪೇಟೆ: “ಮಾಧ್ಯಮವು ಕೇವಲ ಸುದ್ದಿಯನ್ನು ಪ್ರಸಾರ ಮಾಡುವ ಯಂತ್ರವಲ್ಲ, ಅದು ಸಂವಿಧಾನದ ನಾಲ್ಕನೆಯ ಅಂಗವಾಗಿ ಸಾರ್ವಜನಿಕರ ಧ್ವನಿ ಮತ್ತು ಪ್ರಜಾಪ್ರಭುತ್ವದ ಶಕ್ತಿ. ವರದಿಗಾರಿಕೆಯಲ್ಲಿ ನೇರವಂತಿಕೆ, ನೈಜತೆ ಹಾಗೂ ಪತ್ರಕರ್ತರ ನಿಷ್ಠೆ ಉಳಿಯುವ ಮಟ್ಟಕ್ಕೆ ಸಮಾಜದಲ್ಲಿಯೂ ವಿಶ್ವಾಸ ಮತ್ತು ಗೌರವ ಉಳಿಯುತ್ತದೆ” ಎಂದು ಶಾಸಕ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ಕೈಗಾರಿಕಾ ನಿಗಮದ ಅಧ್ಯಕ್ಷ…
ಗರ್ತಿಕೆರೆಯಲ್ಲಿ ನ.23ಕ್ಕೆ ಅಮೃತ ಸ್ನೇಹ ಸಮ್ಮಿಲನ , ಶಾಲಾ ಪುನರ್ಮಿಲನ
ಗರ್ತಿಕೆರೆಯಲ್ಲಿ ನ.23ಕ್ಕೆ ಅಮೃತ ಸ್ನೇಹ ಸಮ್ಮಿಲನ , ಶಾಲಾ ಪುನರ್ಮಿಲನ ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜ್ ಅವರಣದಲ್ಲಿ ಅಮೃತ ಸ್ನೇಹ ಸಮ್ಮಿಲನ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ನ. 23 ರ ಭಾನುವಾರ ಬೆಳಗ್ಗೆ 9.30 ಕ್ಕೆ ಅಮೃತ ಸ್ನೇಹ ಸಮ್ಮಿಲನ ‘ಶಾಲಾ ಪುನರ್ಮಿಲನ ಮತ್ತು ಶಿಕ್ಷಕರ ಸಮಾಗಮ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಮೃತ ಗ್ರಾಮ ಪಂಚಾಯಿತ್ ಅಧ್ಯಕ್ಷ ಸಚಿನ್ಗೌಡ ತಿಳಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜ್ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ…