ಚಕ್ರವರ್ತಿ ಸೂಲಿಬೆಲೆಗೆ ಮತ್ತೊಂದು ಸಂಕಷ್ಟ! ಶಿವಮೊಗ್ಗದಲ್ಲಿ FIR ದಾಖಲು, ಕಾರಣವೇನು?

ಶಿವಮೊಗ್ಗದ (Shivamogga) ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದೆ. 


SSLC ಪೂರಕ ಪರೀಕ್ಷೆ ವಿಚಾರವಾಗಿ ಚಕ್ರವರ್ತಿ ಸೂಲಿಬೆಲೆ ಸಾಮಾಜಿಕ ಜಾಲ ತಾಣಗಳಲ್ಲಿ (Social Media) ಹಾಕಿದ ಪೋಸ್ಟ್ ವಿಚಾರವಾಗಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸದಸ್ಯರು ನೀಡಿದ ದೂರಿನ ಮೇರೆಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಐಪಿಸಿ 1860 ರ 505/1ಬಿ 505/1ಸಿ 505/2 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಚಕ್ರವರ್ತಿ ಸೂಲಿಬೆಲೆ ಪೋಸ್ಟ್​ನಲ್ಲಿ ಏನಿದೆ?

ಕರ್ನಾಟಕ ಶಿಕ್ಷಣ ಇಲಾಖೆ ಕಳೆದ ಕೆಲ ದಿನಗಳ ಹಿಂದಷ್ಟೇ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಪೂರಕ ಪರೀಕ್ಷೆಗೆ ದಿನಾಂಕವನ್ನು ಘೋಷಣೆ ಮಾಡಿತ್ತು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದ ಸೂಲಿಬೆಲೆ ಅವರು, Karnataka state 10th standard exam time table revised all the exam in morning session but first Friday why? Ho time for namaz ಎಂದು ಬರೆದಕೊಂಡಿದ್ದರು.

ಅಶಾಂತಿ ಕೋಮುಗಲಭೆ ಉಂಟು ಮಾಡುವ ಆರೋಪ

ಸೂಲಿಬೆಲೆ ಅವರ ಪೋಸ್ಟ್ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿ ದೂರು ದಾಖಲು ಮಾಡಲಾಗಿದೆ. ಪೋಸ್ಟ್​ನಲ್ಲಿ ಅನ್ಯ ಧರ್ಮವನ್ನು ಹೀಯಾಳಿಸುವಂತೆ ಹಾಗೂ ಮುಸಲ್ಮಾನರ ಮೇಲೆ ಕೆಟ್ಟ ಭಾವನೆ ಬರುವಂತೆ ಈ ರೀತಿ ಬರೆಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರ ಒಂದು ಧರ್ಮದ ಪರವಿದೆ ಎಂಬ ಭಾವನೆ ಬರುವಂತೆ ಮಾಡಿ ರಾಜ್ಯದಲ್ಲಿ ಅಶಾಂತಿ ಕೋಮುಗಲಭೆ ಉಂಟು ಮಾಡುವುದರಿಂದ ಕೂಡಲೇ ಕ್ರಮ ಕೈಗೊಳ್ಳುವಂತೆ ವಿಜಯಕುಮಾರ್ ಎಸ್‌ಎನ್ ಎಂಬವರು ದೂರಿನಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *