Headlines

ಕಾಂಗ್ರೆಸ್ ಪಕ್ಷದತ್ತ ವಾಲಿದ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಶ್ರೀಕಾಂತ್|jds

ಕಾಂಗ್ರೆಸ್ ಪಕ್ಷದತ್ತ ವಾಲಿದ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಶ್ರೀಕಾಂತ್|jds

ರಾಜ್ಯದಲ್ಲಿ ಆಪರೇಷನ್​ ಹಸ್ತದ ಸುಳಿವನ್ನ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ರವರು ನೀಡಿದ್ದಾರೆ. ಅದರ ಬೆನ್ನಲ್ಲೆ ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್​​ನಿಂದ ಶಿವಮೊಗ್ಗ ನಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಯನೂರು ಮಂಜುನಾಥ್​ ಕೂಡ , ಜೆಡಿಎಸ್​ನ್ನ ತೊರೆದು ಕಾಂಗ್ರೆಸ್​ ತೊರೆದಿದ್ದರು. 

ಇದರ ಬೆನ್ನಲ್ಲೆ , ಇದೀಗ ಮತ್ತೊಬ್ಬ ಜೆಡಿಎಸ್​ ಮುಖಂಡ ಕಾಂಗ್ರೆಸ್​ ಸೇರಲಿದ್ದಾರೆ. ಸದ್ಯ ಜೆಡಿಎಸ್​ ಜಿಲ್ಲಾಧ್ಯಕ್ಷರು ಸಹ ಆಗಿರುವ ಎಂ. ಶ್ರಿಕಾಂತ್ ಜೆಡಿಎಸ್​ ಸೇರಲಿದ್ದಾರೆ ಎಂಬುವುದಾಗಿ ಅಧಿಕೃತವಾಗಿ ಮಾಹಿತಿ ಬಂದಿದೆ. 

ಜೆಡಿಎಸ್​ ನ ಎಂ ಶ್ರೀಕಾಂತ್ ಇತ್ತೀಚೆಗೆ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿದ್ದರು. ಅದರಲ್ಲಿಯು ಮುಖ್ಯವಾಗಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ರವರನ್ನು ಭೇಟಿ ಮಾಡಿರುವ ಫೋಟೊ ವೈರಲ್ ಆಗಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ, ನಿನ್ನೆ ಡಿ.ಕೆ.ಶಿವಕುಮಾರ್​ರವರ ಜೊತೆಗೆ ಶ್ರೀಕಾಂತ್​ ರವರು ಮಾತುಕತೆ ನಡೆಸಿದ್ದು, ಅವರು ಪಕ್ಷ ಸೇರುವ ವಿಚಾರ ತಿಳಿದು ಬಂದಿದೆ.

Leave a Reply

Your email address will not be published. Required fields are marked *