ತಾಯ್ನಾಡಿಗೆ ಮರಳುತ್ತಿರುವ ಹೆಮ್ಮೆಯ ಪುತ್ರ: ರಿಪ್ಪನಪೇಟೆಯ ಯೋಧ ಕುಮಾರ್ ಎ ರವರಿಗೆ ನಾಳೆ ಅಭೂತಪೂರ್ವ ಸ್ವಾಗತ
Celebrate the incredible journey of CRPF Sub-Inspector Kumar after 36 years of selfless service and VRS. Join the villagers of Rippanpete in a grand welcome for him and his veteran wife, Padmavathi, India’s own warrior couple.
ರಿಪ್ಪನಪೇಟೆ: ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ (CRPF) ಸತತ 36 ವರ್ಷಗಳ ಕಾಲ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ (VRS) ಪಡೆದು ತಾಯ್ನಾಡಿಗೆ ಮರಳುತ್ತಿರುವ ಹೆಮ್ಮೆಯ ಪುತ್ರ, ಸಬ್-ಇನ್ಸ್ಪೆಕ್ಟರ್ ಕುಮಾರ್. ಎ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಇಡೀ ರಿಪ್ಪನಪೇಟೆ ಗ್ರಾಮವೇ ಸಜ್ಜಾಗಿ ನಿಂತಿದೆ.
ವಿಶೇಷವೆಂದರೆ, ಇವರ ಧರ್ಮಪತ್ನಿ ಪದ್ಮಾವತಿ ಅವರು ಕೂಡ ಸಿ.ಆರ್.ಪಿ.ಎಫ್ನಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಿವೃತ್ತ ಸೈನಿಕರಾಗಿದ್ದು, ಈ ಅಪರೂಪದ ‘ಯೋಧ ದಂಪತಿ’ಯ ದೇಶಸೇವೆ ಇಡೀ ಮಲೆನಾಡು ಭಾಗಕ್ಕೆ ಹೆಮ್ಮೆಯ ಗರಿಯಾಗಿದೆ.
ದಿ. ಅಷ್ಟೋಜಿ ರಾವ್ ಮತ್ತು ಗೌರಮ್ಮ ದಂಪತಿಯ ಪುತ್ರರಾದ ಕುಮಾರ್ ಅವರು ಜೂನ್ 20, 1972 ರಂದು ಜನಿಸಿದರು. ರಿಪ್ಪನಪೇಟೆಯಲ್ಲಿಯೇ ತಮ್ಮ ಪದವಿ ಪೂರ್ವ ಶಿಕ್ಷಣ ಪೂರೈಸಿದ ಇವರು, ನವೆಂಬರ್ 12, 1990 ರಂದು ಸಿ.ಆರ್.ಪಿ.ಎಫ್ ಸೇರ್ಪಡೆಗೊಂಡು ದೆಹಲಿಯ 103ನೇ ಬೆಟಾಲಿಯನ್ನಲ್ಲಿ ತರಬೇತಿ ಮುಗಿಸುವ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದರು.
ತಮ್ಮ ಮೂರೂವರೆ ದಶಕಗಳ ಸುದೀರ್ಘ ಹಾಗೂ ಸವಾಲಿನ ಸೇವಾವಧಿಯಲ್ಲಿ ಕುಮಾರ್ ಅವರು ಪಂಜಾಬ್, ದೆಹಲಿ (RAF), ಗುಜರಾತ್, ಜಮ್ಮು ಮತ್ತು ಕಾಶ್ಮೀರ, ತ್ರಿಪುರ, ಆಂಧ್ರಪ್ರದೇಶ (ವಿಶಾಖಪಟ್ಟಣಂ), ಅಸ್ಸಾಂ ಹಾಗೂ ಮೇಘಾಲಯದಂತಹ ದೇಶದ ಅತ್ಯಂತ ಸೂಕ್ಷ್ಮ ಹಾಗೂ ಕ್ಲಿಷ್ಟಕರ ಗಡಿ ಮತ್ತು ಆಂತರಿಕ ಪ್ರದೇಶಗಳಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2006ರಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಮುಂಬಡ್ತಿ ಪಡೆದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಯಲ್ಲೂ ಇವರು ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ. ತದನಂತರ 2015ರಲ್ಲಿ ಅಸಿಸ್ಟೆಂಟ್ ಸಬ್-ಇನ್ಸ್ಪೆಕ್ಟರ್ (ASI) ಹಾಗೂ 2023ರಲ್ಲಿ ಸಬ್-ಇನ್ಸ್ಪೆಕ್ಟರ್ (SI) ಆಗಿ ಬಡ್ತಿ ಪಡೆದರು.
ಅಂತಿಮವಾಗಿ ಕರ್ನಾಟಕದ ಭದ್ರಾವತಿಯ 97ನೇ RAF ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು, ಏಪ್ರಿಲ್ 30, 2026ರಂದು ಸ್ವಯಂ ಸೇವಾ ನಿವೃತ್ತಿ ಪಡೆದು ತಮ್ಮ ಸ್ವಂತ ಊರಿಗೆ ಮರಳುತ್ತಿದ್ದಾರೆ. ಇವರ ಮಕ್ಕಳಾದ ನಿಶ್ಚಲ್ ರಾವ್ ಹಾಗೂ ನಿಶ್ಚಿತ ರಾವ್ ಕೂಡ ತಂದೆ-ತಾಯಿಯ ದೇಶಪ್ರೇಮದ ಆದರ್ಶಗಳ ನೆರಳಿನಲ್ಲಿ ಬೆಳೆಯುತ್ತಿದ್ದಾರೆ.
ಭವ್ಯ ಮೆರವಣಿಗೆ ಹಾಗೂ ಸನ್ಮಾನ ಕಾರ್ಯಕ್ರಮ
ನಾಡಿನ ರಕ್ಷಣೆಗಾಗಿ ತಮ್ಮ ಯೌವನವನ್ನು ಮುಡಿಪಾಗಿಟ್ಟ ಈ ವೀರ ಯೋಧನನ್ನು ಸ್ವಾಗತಿಸಲು ಸ್ಥಳೀಯರು, ದೇಶಭಕ್ತರು ಹಾಗೂ ಗ್ರಾಮಸ್ಥರು ಒಗ್ಗೂಡಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ದಿನಾಂಕ: 01 ಮೇ 2026
ಸಮಯ: ಸಂಜೆ 4:00 ಗಂಟೆಗೆ
ಮೆರವಣಿಗೆ ಮಾರ್ಗ: ಸಿದ್ದಪ್ಪನ ಗುಡಿ ದೇವಸ್ಥಾನದಿಂದ ಪ್ರಾರಂಭವಾಗಿ ವಿನಾಯಕ ವೃತ್ತದವರೆಗೆ.
ಭವ್ಯ ಮೆರವಣಿಗೆಯ ಮೂಲಕ ಯೋಧನನ್ನು ಸ್ವಾಗತಿಸಿಕೊಂಡು, ತದನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಸನ್ಮಾನಿಸಲಾಗುವುದು. ಈ ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾಗಿ, ದೇಶಕ್ಕಾಗಿ ದುಡಿದ ವೀರ ಯೋಧನಿಗೆ ಗೌರವ ಸಮರ್ಪಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ವಿನಂತಿಸಿದ್ದಾರೆ.
ಸಾಗರ ಗ್ರಾಮಾಂತರ ಠಾಣೆಯ ನೂತನ ಪಿಎಸ್ಐ ಆಗಿ ಶಂಕರ್ ಗೌಡ ಪಾಟೀಲ್ ನೇಮಕ PSI Shankar Gowda Patil has…
ಶತಮಾನದ ಸಂಭ್ರಮದಲ್ಲಿ ರಿಪ್ಪನ್ಪೇಟೆ ಬಾಲಕರ ಶಾಲೆ: ಸೆ. 3ಕ್ಕೆ ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ Ripponpete Government Model Boys…
ಪ್ಲಾಸ್ಟಿಕ್ ಚೀಲಗಳ ನಡುವೆ ಅಡಗಿದ್ದ 7.5 ಅಡಿ ಬೃಹತ್ ಹೆಬ್ಬಾವು ಸೆರೆ A 7.5-foot-long, 10 kg giant python…
ಈದ್ ಮಿಲಾದ್ - ಗಣೇಶೋತ್ಸವಕ್ಕೆ ಅನುಮತಿ ಇಲ್ಲದೆ ಡಿಜೆ ಹಾಕಿದರೆ ಕೇಸ್ ! ಸೌಂಡ್ ಸಿಸ್ಟಂ ಮಾಲೀಕರಿಗೆ ಪೊಲೀಸರಿಂದ ಖಡಕ್…
ಅಕ್ರಮ ಜಂಬಿಟ್ಟಿಗೆ ಕಲ್ಲು ಕ್ವಾರಿಗೆ ತಹಶೀಲ್ದಾರ್ ದಿಢೀರ್ ದಾಳಿ; ಜೆಸಿಬಿ ವಶಕ್ಕೆ, ಪ್ರಕರಣ ದಾಖಲು Sagar Tahsildar Dr. Prathibha…
ಗೋಡಾನ್ ಜಾಲರಿ ಮುರಿದು ಅಡಕೆ ಕಳವು; ₹2.50 ಲಕ್ಷ ಮೌಲ್ಯದ 4.80 ಕ್ವಿಂಟಾಲ್ ಅಡಕೆ ದೋಚಿದ ಕಳ್ಳರು Thieves broke…