ರಿಪ್ಪನ್ ಪೇಟೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿದೆ ಗಾಂಜಾ ಅಮಲು – ಯುವಕರ ಭವಿಷ್ಯ ತೀವ್ರ ಆತಂಕದಲ್ಲಿ!

ರಿಪ್ಪನ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿದೆ ಗಾಂಜಾ ಅಮಲು – ಯುವಕರ ಭವಿಷ್ಯ ತೀವ್ರ ಆತಂಕದಲ್ಲಿ!

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ , ಕೋಡೂರು ,ಬಟ್ಟೆಮಲ್ಲಪ್ಪ , ಮಾರುತಿಪುರ , ಗರ್ತಿಕೆರೆ ,ಹುಂಚ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಪೋಷಕರಿಗೆ, ಶಿಕ್ಷಣ ಸಂಸ್ಥೆಗಳಿಗೆ ಮತ್ತು ಸಮಾಜಕ್ಕೆ ತೀವ್ರ ಆತಂಕ ತಂದಿಟ್ಟಿದೆ. ವಿದ್ಯಾಭ್ಯಾಸ ಹಾಗೂ ಬದುಕಿನ ಆಶಯಗಳನ್ನು ತಿರಸ್ಕರಿಸುತ್ತಾ, ಹಲವಾರು ಯುವಕರು ಗಾಂಜಾ ಸೇವನೆಯೊಂದಿಗೆ ತಮ್ಮ ಬದುಕಿಗೆ ತಾವೇ ಕೊಳ್ಳಿಯಿಟ್ಟುಕೊಳ್ಳುತಿದ್ದಾರೆ.

ರಿಪ್ಪನ್ ಪೇಟೆ ಪಟ್ಟಣದ ಲೇಔಟ್ , ಖಾಲಿ ಕಟ್ಟಡಗಳು ಮತ್ತು ಕಾಡು ಪ್ರದೇಶಗಳು ಗಾಂಜಾ ಸೇವಕರಿಗೆ ‘ಸೆಫ್ ಝೋನ್’ ಆಗಿ ಪರಿಣಮಿಸುತ್ತಿವೆ. ಕೆಲವರು ಈ ಸೇವನೆಯಲ್ಲಿ ಮಾತ್ರವಲ್ಲ, ಮಾರಾಟ ಜಾಲದಲ್ಲಿಯೂ ತೊಡಗಿರುವುದು ತಿಳಿದುಬಂದಿದೆ. ಇದರಿಂದ ಇಡೀ ಪರಿಸರದಲ್ಲಿಯೇ ಗಾಂಜಾ ಅಮಲು ನೆತ್ತಿಗೇರಿಬಿಟ್ಟಿದೆ.

ಪೊಲೀಸ್ ಇಲಾಖೆ ಕೆಲ ಸಂದರ್ಭಗಳಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದೆಯಾದರೂ ಮೂಲವಾಗಿ ಮಾರಾಟ ಮಾಡುವ ಕಿಂಗ್ ಪಿನ್ ಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಗಾಂಜಾ ಗಿರಾಕಿಗಳಿಗೆ ಖುಷಿಯ ವಿಚಾರವಾಗಿದೆ. ಗಾಂಜಾ ಸೇವನೆ ಮಾಡಿ ಸಿಕ್ಕಿಬಿದ್ದ ಗಾಂಜಾ ಗಿರಾಕಿಗೆ ಠಾಣೆಯಲ್ಲಿಯೇ ಜಾಮೀನು ಸಹ ದೊರಕುತ್ತದೆ ಇಂತಹ ದುರ್ಬಲ ಕಾನೂನು ಗಾಂಜಾ ಸೇವಕರಿಗೆ ಭಯ ಇಲ್ಲದಂತಾಗಿಸಿದೆ  “ಇನ್ನೂ ಆದಷ್ಟು ಬೇಗ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲವಾದರೆ ಗಾಂಜಾ ಅಮಲಿಗೆ ಇಡೀ ಯುವಕರ ಪೀಳಿಗೆಯೇ ನಾಶವಾಗಬಹುದು” ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಗಾಂಜಾ ಸೇವನೆಯಿಂದಾಗಿ ದೇಹಾರೋಗ್ಯ ಹಾನಿಯಷ್ಟೇ ಅಲ್ಲ, ಮಾನಸಿಕ ಅಸ್ಥಿರತೆ, ಒತ್ತಡ, ಕುಟುಂಬ ಜಗಳ, ಶಿಕ್ಷಣದಲ್ಲಿ ಆಸಕ್ತಿ ಕಡಿಮೆ ಇತ್ಯಾದಿ ಪರಿಣಾಮಗಳು ಸ್ಪಷ್ಟವಾಗಿವೆ.ಕೆಲವೊಮ್ಮೆ ಯುವಕರು ಕಾನೂನು ವಿರುದ್ಧ ನಡೆದು ಅಪರಾಧಗಳತ್ತ ಎಳೆಯಲ್ಪಡುವ ಸಂಭವವೂ ಹೆಚ್ಚು.

ಪೋಷಕರು ಹಾಗೂ ಹಿರಿಯ ನಾಗರಿಕರು ಗಾಂಜಾ ಮಾರಾಟದ ವಿರುದ್ಧ ಧ್ವನಿ ಎತ್ತಿದ್ದು, “ಮಕ್ಕಳನ್ನು ರಕ್ಷಿಸುವುದು ಒಟ್ಟಾರೆ ಸಮಾಜದ ಹೊಣೆಗಾರಿಕೆ” ಎಂದು ಸ್ಪಷ್ಟಪಡಿಸಿದ್ದಾರೆ. ಪೊಲೀಸ್ ಇಲಾಖೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು, ಗಾಂಜಾ ಮಾರಾಟಗಾರರನ್ನು ಬಂಧಿಸಬೇಕು, ಸೇವಕರಿಗೆ ಉಚಿತ ಚಿಕಿತ್ಸಾ ನೆರವು ಒದಗಿಸಬೇಕು ಎಂಬುದು ಪ್ರಮುಖ ಬೇಡಿಕೆ.

ಇನ್ನೂ ಪಟ್ಟಣದ ನೂತನ ಪಿಎಸ್‌ಐ ರಾಜುರೆಡ್ಡಿ ಅನವಟ್ಟಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಗಾಂಜಾ ಮಾರಾಟ ಹಾಗೂ ಸೇವನೆ ಮಾಡುವ ಕಿರಾತಕರ ಹೆಡೆಮುರಿ ಕಟ್ಟಿದ್ದರು ಅದೇ ಮಾದರಿಯಲ್ಲಿ ರಿಪ್ಪನ್ ಪೇಟೆ ಠಾಣಾ ವ್ಯಾಪ್ತಿಯಲಿ ಗಾಂಜಾ ಗಿರಾಕಿಗಳ ಹೆಡೆಮುರಿ ಕಟ್ಟುವಲ್ಲಿ ಮುಂದಡಿಯಿಟ್ಟು ಠಾಣಾ ವ್ಯಾಪ್ತಿಯಲ್ಲಿ ಸುಸಂಸ್ಕೃತ ಸಮಾಜವನ್ನು ಮರು ಜೋಡಿಸಬೇಕಾಗಿದೆ.

ಈಗಲೇ ಕ್ರಮ ತೆಗೆದುಕೊಳ್ಳಿ, ನಾಳೆ ಕೈತಪ್ಪಬಹುದು!

ರಿಪ್ಪನ್ ಪೇಟೆಯ ಈ ಗಂಭೀರ ಸಮಸ್ಯೆ ಸುಸಂಸ್ಕೃತ ಸಮಾಜವನ್ನು ಹಾಳು ಮಾಡುತ್ತಿದೆ. ಇಡೀ ಸಮುದಾಯ, ಶಾಲೆಗಳು, ಪೋಷಕರು ಹಾಗೂ ಆಡಳಿತ ಯಂತ್ರ ಒಂದೇ ಹೆಜ್ಜೆಯಲ್ಲಿ ನಡೆಯದಿದ್ದರೆ, ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ತಡೆಗಟ್ಟಲಾಗದು. ಗಾಂಜಾ ವಿರುದ್ಧ ಕಠಿಣ ಹೋರಾಟಕ್ಕೆ ಇಂದಿನ ಆರಂಭವೇ ಉತ್ತಮ ನಾಳೆಗೆ ದಾರಿಯಾಗಿದೆ…

ಗಾಂಜಾ ಗಿರಾಕಿಗಳ ಬಗ್ಗೆ ನಿಮ್ಮಲ್ಲಿ ಮಾಹಿತಿಯಿದ್ದರೆ ನಮ್ಮ POSTMAN NEWS (9663420169) ಸಂಪರ್ಕಕ್ಕೆ ಬನ್ನಿ. ನಿಮ್ಮ ಧೈರ್ಯವಂತಿಕೆ ಸುಸಂಸ್ಕೃತ ಸಮಾಜವನ್ನು ರಕ್ಷಿಸಬಹುದು.

ಗಾಂಜಾ ಅಮಲು ತಡೆಗಟ್ಟಲು ಈ ಕೆಳಗಿನ ಕ್ರಮಗಳಿಂದ ಸಾದ್ಯವಿದೆ

1. ಶಾಲಾ–ಕಾಲೇಜುಗಳಲ್ಲಿ ಜಾಗೃತಿ ಅಭಿಯಾನ.

2. ಗಾಂಜಾ ಮಾರಾಟದ ಮಾಹಿತಿ ನೀಡುವವರಿಗೆ ಬಹುಮಾನ ಘೋಷಣೆ ಹಾಗೂ ಭದ್ರತೆ

3. ಪುನರ್ವಸತಿ ಕೇಂದ್ರ ಸ್ಥಾಪನೆ.

4. ಗ್ರಾಮಸ್ಥರೊಂದಿಗೆ ಪೊಲೀಸರ ಸಂವಹನ ಹೆಚ್ಚಳ.

5. ಸೋಶಿಯಲ್ ಮೀಡಿಯಾ ಹಾಗೂ ಸೈಬರ್ ತಂಡದ ನೆರವು ಮೂಲಕ ಮಾರಾಟದ ಜಾಲ ಭೇದನೆ.

6. ವಿದ್ಯಾರ್ಥಿಗಳಿಗೆ ಸಮರ್ಪಿತ ಮನೋವೈದ್ಯಕೀಯ ಸಹಾಯ ಕೇಂದ್ರ.

7. ಗ್ರಾಮ/ವಾರ್ಡ್ ಮಟ್ಟದಲ್ಲಿ ‘ಅಮಲು ವಿರೋಧಿ ಕಮಿಟಿ’ ಸ್ಥಾಪನೆ.

8. ಪೋಷಕರಿಗೆ ‘ಅಮಲು ಎಚ್ಚರಿಕೆ’ ಮಾರ್ಗದರ್ಶನದ ಬಗ್ಗೆ ಮಾಹಿತಿ

9. ಮಹಿಳಾ ಸಂಘಗಳು, ಯುವಕ ಮಂಡಳಿಗಳ ಸಹಭಾಗಿತ್ವದ ಹೋರಾಟ.

 ರಫ಼ಿ ರಿಪ್ಪನ್ ಪೇಟೆ

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಕಾರ್ಮಿಕರ ಸಂಘಟನೆ ವಿರುದ್ಧದ ಆರೋಪಗಳು ನಿರಾಧಾರ: ಸುಂದರ್ ಬಾಬು

ಕಾರ್ಮಿಕರ ಸಂಘಟನೆ ವಿರುದ್ಧದ ಆರೋಪಗಳು ನಿರಾಧಾರ: ಸುಂದರ್ ಬಾಬು Ripponpete: Akhila Karnataka Building Workers Organization district president…

11 hours ago

ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ರಿಪ್ಪನ್‌ಪೇಟೆಯ ಅಪೇಕ್ಷಾಗೆ ರನ್ನರ್‌ಅಪ್ ಸಾಧನೆ

ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ರಿಪ್ಪನ್‌ಪೇಟೆಯ ಅಪೇಕ್ಷಾಗೆ ರನ್ನರ್‌ಅಪ್ ಸಾಧನೆ Ripponpete's Apeksha K. secured second place and runner-up…

14 hours ago

ಆಗುಂಬೆಯಲ್ಲಿ ಮಕ್ಕಳೊಂದಿಗೆ ಗದ್ದೆಗಿಳಿದ ಪೊಲೀಸ್‌ ಅಧಿಕಾರಿ; ಹೂಟಿ–ನಾಟಿ ಕಲಿಸಿದ PSI ಶಿವನಗೌಡ ಪಾಟೀಲ್

ಆಗುಂಬೆಯಲ್ಲಿ ಮಕ್ಕಳೊಂದಿಗೆ ಗದ್ದೆಗಿಳಿದ ಪೊಲೀಸ್‌ ಅಧಿಕಾರಿ; ಹೂಟಿ–ನಾಟಿ ಕಲಿಸಿದ PSI ಶಿವನಗೌಡ ಪಾಟೀಲ್ Agumbe PSI Shivanagowda Patil joined…

15 hours ago

ವಿದ್ಯಾರ್ಥಿನಿಯನ್ನು ಬೆದರಿಸಿ 15 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ದುಷ್ಕರ್ಮಿ

ವಿದ್ಯಾರ್ಥಿನಿಯನ್ನು ಬೆದರಿಸಿ 15 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ದುಷ್ಕರ್ಮಿ College student threatened and robbed of…

1 day ago

ಚಂದ್ರಗುತ್ತಿಯಲ್ಲಿ 9 ಅಡಿ ಉದ್ದದ ಹೆಬ್ಬಾವು ಸೆರೆ

ಚಂದ್ರಗುತ್ತಿಯಲ್ಲಿ 9 ಅಡಿ ಉದ್ದದ ಹೆಬ್ಬಾವು ಸೆರೆ A 9-foot-long python was safely rescued from behind a…

1 day ago

ಪಾಗಲ್ ಪ್ರೇಮಿಯಿಂದ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ – ಕೆರೆಗೆ ಹಾರಿ ಸಾಗರದ ಯುವತಿ

ಪಾಗಲ್ ಪ್ರೇಮಿಯಿಂದ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ - ಕೆರೆಗೆ ಹಾರಿ ಸಾಗರದ ಯುವತಿ A 22-year-old woman from Sagara…

1 day ago